ಎಚ್ಚರ…| ವಂಚಕರಿಂದ ʼಡಿಜಿಟಲ್ ಬಂಧನʼ : 10 ಕೋಟಿ ರೂ. ಕಳೆದುಕೊಂಡ 70 ವರ್ಷದ ನಿವೃತ್ತ ಇಂಜಿನಿಯರ್…!

ನವದೆಹಲಿ: ದೆಹಲಿಯ 70 ವರ್ಷದ ನಿವೃತ್ತ ಇಂಜಿನಿಯರ್ ಡಿಜಿಟಲ್ ಬಂಧನದ ಹಗರಣಕ್ಕೆ ಬಲಿಯಾದ ನಂತರ ತನ್ನ ಜೀವಮಾನದ ಉಳಿತಾಯದ ಹಣ ಕಳೆದುಕೊಂಡಿದ್ದಾರೆ. ತೈವಾನ್‌ನಿಂದ ನಿಷೇಧಿತ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್ ನಿಮ್ಮ ಹೆಸರಿಗೆ ಕಳುಹಿಸಲಾಗಿದೆ ಎಂದು ಫೋನ್‌ ಮಾಡಿ ಹೆದರಿಸಿ ವಂಚಕರು ಅವರಿಂದ 10 ಕೋಟಿ ರೂ.ಗಳಿಗೂ ಹೆಚ್ಚು ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ.
ಪೊಲೀಸರಂತೆ ನಟಿಸಿದ ವಂಚಕರು ನಿವೃತ್ತ ಇಂಜಿನಿಯರ್ ಅವರಿಗೆ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವಂತೆ ಸೂಚಿಸಿ ಅವರ ಖಾತೆಗಳಿಂದ 10 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕಬಳಿಸಿದ್ದಾರೆ. ಕದ್ದ ಮೊತ್ತದಲ್ಲಿ 60 ಲಕ್ಷ ರೂ.ಗಳನ್ನು ಫ್ರೀಜ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದ ಹಣವನ್ನು ವಸೂಲಿ ಮಾಡುವ ಪ್ರಯತ್ನ ಮುಂದುವರಿದಿದೆ.

ವಂಚನೆ ಬಯಲಾಗಿದ್ದು ಹೇಗೆ..?
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ನಿವೃತ್ತ ಇಂಜಿನಿಯರ್ ಅವರಿಗೆ ಸ್ವಯಂಚಾಲಿತ ರೀತಿಯ ಕರೆಯೊಂದು ಬಂದಿದೆ. ಅವರಿಗೆ ಬಂದ ಸಂದೇಶವು ತೈವಾನ್‌ನಿಂದ ಬಂದಿದೆ ಎಂದು ನಂಬಿಸಲಾದ ನಿಷೇಧಿತ ಪದಾರ್ಥದ ಪ್ಯಾಕೇಜ್‌ಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಅವರು ಉತ್ತರಿಸಿದ ತಕ್ಷಣ, ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯೊಬ್ಬರು ಅವರ ಪೂರ್ಣ ಹೆಸರು ಮತ್ತು ಇತರ ಗುರುತು, ಮತ್ತಿತರ ಮಾಹಿತಿ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಕೇಳಲು ಪ್ರಾರಂಭಿಸಿದ್ದಾರೆ.
ನಂತರ ಅವರ ಹೆಸರಿನಲ್ಲಿ ನೋಂದಾಯಿತವಾದ ಪಾರ್ಸೆಲ್ ಅನ್ನು ತಡೆಹಿಡಿಯಲಾಗಿದೆ ಎಂದು ವಂಚಕರು ಅವರಿಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ನಿಷೇಧಿತ ಡ್ರಗ್ಸ್‌ಗಳಿವೆ. ಸಹಕರಿಸದಿದ್ದರೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸುವುದಾಗಿ ಬೆದರಿಕೆ ಪೊಲೀಸರ ಸೋಗಿನಲ್ಲಿ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆ. ಭಯಭೀತರಾದ ನಿವೃತ್ತ ಇಂಜಿನಿಯರ್‌ ಅವರಿಗೆ ಕಾನೂನು ತೊಂದರೆಯಿಂದ ಪಾರಾಗಲು ತಮ್ಮ ಸೂಚನೆಗಳನ್ನು ಅನುಸರಿಸುವಂತೆ ವಂಚಕರು ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಕ್ಯಾಮೆರಾದ ಮುಂದೆಯೇ ತಾಸುಗಟ್ಟಲೆ ಇರುವಂತೆ ಸೂಚನೆ
ವಂಚಕರು ನಿವೃತ್ತ ಇಂಜಿನಿಯರ್‌ ಅವರನ್ನು ಕೋಣೆಯಲ್ಲಿ ತಮ್ಮನ್ನು ಪ್ರತ್ಯೇಕಿಸಿ ಕುಳಿತುಕೊಳ್ಳುವಂತೆ ಸೂಚಿಸಿದರು. ಹಾಗೂ ಅವರ ಫೋನ್ ಅಥವಾ ಲ್ಯಾಪ್‌ಟಾಪ್ ಕ್ಯಾಮೆರಾವನ್ನು ಆನ್ ಮಾಡಲು ಮತ್ತು ಸುಮಾರು ಎಂಟು ಗಂಟೆಗಳ ಕಾಲ ವೀಡಿಯೊ ಕರೆಯಲ್ಲಿ ಇರಬೇಕು ಎಂದು ಹೆದರಿಸಿದ್ದಾರೆ. ಅವರು ಕ್ಯಾಮೆರಾವನ್ನು ಅಲ್ಲಿಂದ ಸ್ಥಳಾಂತರ ಮಾಡಿದರೆ ಅಥವಾ ಅದನ್ನು ಆಫ್ ಮಾಡಿದರೆ ಅವರನ್ನು ಬಂಧಿಸಲಾಗುತ್ತದೆ ಮತ್ತು ಅವರ ಇಡೀ ಕುಟುಂಬವನ್ನು ಸಹ ಆರೋಪಿಗಳನ್ನಾಗಿ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ವ್ಯಕ್ತಿ ಅವರು ಹೇಳಿದ್ದನ್ನು ಪಾಲಿಸುತ್ತಿದ್ದಂತೆ, ಮುಂಬೈ ಪೊಲೀಸ್ ಅಧಿಕಾರಿಯಂತೆ ನಟಿಸಿದ ಇನ್ನೊಬ್ಬ ವ್ಯಕ್ತಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾನೆ. ಈ ನಕಲಿ ಅಧಿಕಾರಿ ಬಂಧನದಿಂದ ಪಾರಾಗಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅವರಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾನೆ. ಈ ತಂತ್ರವನ್ನು ಬಳಸಿಕೊಂಡು, ಆತ ನಿವೃತ್ತ ಇಂಜಿನಿಯರ್‌ ಅವರ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾನೆ. ಮತ್ತು ಅವರ ಉಳಿತಾಯದ ಹಣವನ್ನು ಕಾಪಾಡಲು ಆ ಹಣವನ್ನು “ಸುರಕ್ಷಿತ” ಖಾತೆಗಳಿಗೆ ವರ್ಗಾಯಿಸುವುದು ಅತ್ಯಗತ್ಯವೆಂದು ಅವರಿಗೆ ಮನವರಿಕೆ ಆಗುವಂತೆ ಮಾಡಿದ್ದಾನೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ವಿವಿಧ ಖಾತೆಗಳಿಗೆ ಹಣ ವರ್ಗಾವಣೆ
ಎಂಟು ಗಂಟೆಗಳ ಅವಧಿಯಲ್ಲಿ, ವಂಚಕರ ಮಾತನ್ನು ನಂಬಿದ ನಿವೃತ್ತ ಇಂಜಿನಿಯರ್‌ ತನ್ನ ಎಲ್ಲಾ ಉಳಿತಾಯದ ಹಣ ನೀಡುವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅವರ ಖಾತೆಗಳಲ್ಲಿನ ಹಣ ಖಾಲಿಯಾದ ನಂತರ ವಂಚಕರು ಅವರ ಮಕ್ಕಳ ಖಾತೆಯಿಂದಲೂ ಹಣವನ್ನು ತಾವು ಸೂಚಿಸಿದ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ.
ತನ್ನ ಬ್ಯಾಂಕ್ ಖಾತೆಗಳಲ್ಲಿದ್ದ ಹಣ ಖಾಲಿಯಾದ ನಂತರವೇ ನಿವೃತ್ತ ಇಂಜಿನಿಯರ್‌ ಅವರಿಗೆ ತಾವು ವಂಚನೆಗೊಳಗಾಗಿರುವುದು ಅರಿವಾವಾಗಿದೆ. ಅವರು ತಕ್ಷಣ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ವಂಚನೆಯ ಪ್ರಮಾಣವನ್ನು ಗಮನಿಸಿ ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ಹಸ್ತಾಂತರಿಸಲಾಯಿತು, ಅದು ತಕ್ಷಣವೇ 60 ಲಕ್ಷ ರೂ. ಗಳಷ್ಟು ಹಣವನ್ನು ವಸೂಲಿ ಮಾಡಿದೆ. ಅಧಿಕಾರಿಗಳು ಈಗ ಉಳಿದ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement