ಜಿಪಿಎಸ್ ದೋಷದಿಂದಾಗಿ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಖಲ್ಪುರ-ದತಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ನ್ಯಾವಿಗೇಷನ್ಗಾಗಿ ಜಿಪಿಎಸ್ ಬಳಸಿ ಅದು ನಿರ್ದೇಶಿಸಿದ ಮಾರ್ಗ ಅನುಸರಿಸಿದ ನಂತರ ಕಾರು ಸೇತುವೆಯ ಹಾನಿಗೊಳಗಾದ ಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವರ್ಷದ ಆರಂಭದಲ್ಲಿ, ಪ್ರವಾಹವು ಸೇತುವೆಯ ಮುಂಭಾಗದ ಕೆಲ ಭಾಗವು ಕುಸಿಯಲು ಕಾರಣವಾಯಿತು, ಆದರೆ ಈ ಬದಲಾವಣೆಯನ್ನು ಪ್ರತಿಬಿಂಬಿಸಲು ಜಿಇಎಸ್ (GPS)ಅನ್ನು ನವೀಕರಿಸಲಾಗಿಲ್ಲ. ಪರಿಣಾಮವಾಗಿ, ಚಾಲಕ ದಾರಿ ತಪ್ಪಿದ ಮತ್ತು ಸೇತುವೆಯ ಅಸುರಕ್ಷಿತ ಸ್ಥಿತಿಯ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಪ್ರದೇಶದ ಸರ್ಕಲ್ ಅಧಿಕಾರಿ ಅಶುತೋಷ ಶಿವಂ ಹೇಳಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲೆ ಸುರಕ್ಷತಾ ಅಡೆತಡೆಗಳು ಅಥವಾ ಎಚ್ಚರಿಕೆ ಚಿಹ್ನೆಗಳ ಸಹ ಸರಿಯಾಗಿ ಇಲ್ಲದೇ ಇರುವುದು ಸಹ ಅಪಾಯವನ್ನು ಹೆಚ್ಚಿಸಿತು, ಇದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಮೃತರ ಗುರುತುಗಳನ್ನು ಪರಿಶೀಲಿಸಲಾಗುತ್ತಿದೆ, ಅವರ ಕಾರು ನದಿಗೆ ಧುಮುಕಿದಾಗ ಅವರ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು. ಫರೀದ್ಪುರ, ಬರೇಲಿ ಮತ್ತು ದತಗಂಜ್ನಿಂದ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ನದಿಯಿಂದ ವಾಹನ ಮತ್ತು ದೇಹಗಳನ್ನು ಹೊರತೆಗೆದವು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸರ್ಕಲ್ ಆಫೀಸರ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ