ಚಾಮರಾಜನಗರ : ಆನೆಯ ಮರಿಯೊಂದರ ಬೇಟೆ ಮಾಡಲು ಹೊಂಚು ಹಾಕಿದ್ದ ಹುಲಿ ಮೇಲೆ ತಾಯಿ ಆನೆ ದಾಳಿಗೆ ಮುಂದಾದಾಗ ಹುಲಿರಾಯ ಅಲ್ಲಿಂದ ಕಾಲ್ಕಿತ್ತ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಬಂಡೀಪುರ ಅಭಯಾರಣ್ಯ ಸಫಾರಿ ಜೋನ್ ನಲ್ಲಿ ತಾಯಿ ಆನೆ ತನ್ನ ಮರಿ ಜೊತೆಯಲ್ಲಿದ್ದ ವೇಳೆ ಹುಲಿಯೊಂದು ಸಮೀಪದಲ್ಲಿ ನಿಂತು ಆನೆ ಮರಿ ಬೇಟೆಗೆ ಹೊಂಚು ಹಾಕಿ ಕುಳಿತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ ಆನೆ ವ್ಯಾಘ್ರನನ್ನು ಕಂಡು ಘೀಳಿಟ್ಟು ದಾಳಿ ಮಾಡಲು ಮುಂದಾಗಿದೆ.
ಹುಲಿಯ ಮೇಲೆ ದಾಳಿ ನಡೆಸಲು ಮುಂದಾಗಿದೆ. ಇದನ್ನು ಗಮನಿಸಿದ. ಹುಲಿ ಹೆದರಿ ಅಲ್ಲಿಂದ ಪರಾರಿಯಾಗಿದೆ. ಈ ದೃಶ್ಯವನ್ನು ಸಫಾರಿಗೆ ತೆರಳಿದ ಪ್ರವಾಸಿಯೋರ್ವರು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಅವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಚ್ಚು ವನ್ಯಪ್ರಾಣಿಗಳ ದರ್ಶನ: ಬಂಡೀಪುರ ಸಫಾರಿಯಲ್ಲಿ ಕಳೆದೊಂದು ತಿಂಗಳಿಂದ ಹುಲಿ, ಚಿರತೆ, ಕಾಡಾನೆಗಳ ಹಿಂಡು, ಕಾಡೆಮ್ಮೆ, ನವಿಲು, ಜಿಂಕೆ ಸೇರಿದಂತೆ ಹಲವು ವನ್ಯಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ