ವೀಡಿಯೊ..| ಕಂಡಕಂಡವರಿಗೆ ತಿವಿದು ಗಾಯಗೊಳಿಸಿದ ಗೂಳಿ ; 15 ಜನರಿಗೆ ಗಾಯ : 3 ತಾಸು ಕಾರ್ಯಾಚರಣೆ ನಂತರ ಸೆರೆ…!

ನವದೆಹಲಿ : ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಗೂಳಿಗೆ ಜನರು ಭಯಭೀತರಾಗಿದ್ದಾರೆ. ದಾರಿತಪ್ಪಿ ಬಂದ ಗೂಳಿಯೊಂದು ಜನರನ್ನು ಬೆನ್ನಟ್ಟುವುದು, ಕೊಂಬುಗಳಿಂದ ತಿವಿಯುವುದು ಮತ್ತು ಜನರನ್ನು ಎತ್ತಿ ಒಗೆಯುವುದನ್ನು ಮಾಡಿದೆ. ಈ ರೊಚ್ಚಿಗೆದ್ದ ಗೂಳಿ ಕಂಡವರನ್ನೆಲ್ಲ ತಿವಿದಿದ್ದು, ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ.
ಜಲಾಲಾಬಾದ್ ಪಟ್ಟಣದಲ್ಲಿ, ದಟ್ಟಣೆಯ ಮಧ್ಯೆ ಗೂಳಿಯೊಂದು ವ್ಯಕ್ತಿಯನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಗೂಳಿಯು ಆತನಿಗೆ ಹಿಂದಿನಿಂದ ಬಡಿದು ನೆಲಕ್ಕೆ ಬೀಳುವಂತೆ ಮಾಡಿತು. ನಂತರ ಆ ವ್ಯಕ್ತಿ ಎದ್ದೇಳುವ ಮೊದಲು, ಗೂಳಿ ಆತನಿಗೆ ಕೊಂಬಿನಿಂದ ಮತ್ತೆ ಹೊಡೆದಿದೆ. ಆತ ಹಾರಿ ನೆಲದ ಮೇಲೆ ಬಿದ್ದಿದ್ದಾನೆ. ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿ ಗಾಯಗೊಂಡಿದ್ದು, ಎಡಗಣ್ಣಿನ ಸುತ್ತ ರಕ್ತ ಹರಿಯುವುದು ಕಂಡುಬಂದಿದೆ.

ಈ ಗೂಳಿ ಬೀದಿಗೆ ನುಗ್ಗಿ ಸುಮಾರಿ 15 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ವರದಿಯಾಗಿದೆ.
ಒಂದು ತಾಸಿನ ಭೀತಿಯ ನಂತರ ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಸಿಬ್ಬಂದಿ ಗೂಳಿ ಹಿಡಿಯಲು ಆಗಮಿಸಿದರು. ಅವರು ಗೂಳಿ ಸೆರೆ ಹಿಡಿಯಲು ಬಲೆ ಬೀಸಿದರು. ಆದರೆ, ಗೂಳಿ ಅದನ್ನು ತಪ್ಪಿಸಿಕೊಂಡು ಪರಾರಿಯಾಗಲು ಯಶಸ್ವಿಯಾಯಿತು. ನಂತರ ಸತತ ಮೂರು ಗಂಟೆಗಳ ಕಾರ್ಯಾಚರಣೆಯ ನಂತರ ಗೂಳಿ ಹಿಡಿಯುವ ಯತ್ನ ಕೊನೆಗೂ ಯಶಸ್ವಿಯಾಯಿತು.
ಈ ತಿಂಗಳ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ಗ್ರೇಟರ್ ವೆಸ್ಟ್‌ನ ಸೆಕ್ಟರ್ 16-ಬಿ, ಸೂಪರ್‌ಟೆಕ್ ಆಕ್ಸ್‌ಫರ್ಡ್ ಸ್ಕ್ವೇರ್ ಬಳಿ ಗೂಳಿಯೊಂದು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದ.
ಕಾಮೆಂಟ್ ಪೋಸ್ಟ್ ಮಾಡಿ

ಪ್ರಮುಖ ಸುದ್ದಿ :-   ಹೃದಯ ಸ್ಪರ್ಷಿ | ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮ ತನ್ನ ಸೈನಿಕ ಮಗನಿಗೆ ಕೊಟ್ಟಿದ್ದ ಮಾತಿನಂತೆ ಪ್ರತಿವರ್ಷ ದ್ರಾಸ್‌ ಗೆ ಭೇಟಿ ನೀಡುವ ಈ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement