ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

ಮುಂಬೈ : ಖ್ಯಾತ ಹಿಂದೂಸ್ತಾನಿ ಸಂಗೀತದ ಗಾಯಕ ಪಂಡಿತ ಪ್ರಭಾಕರ ಕಾರೇಕರ ಎಂದು ಅವರ ಕುಟುಂಬ ತಿಳಿಸಿದೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಪಂಡಿತ ಕಾರೇಕರ ಅವರು ಮುಂಬೈನ ಶಿವಾಜಿ ಪಾರ್ಕ್ ಪ್ರದೇಶದ ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದರು. ಕಾರೇಕರ್ ಅವರು ಮೂವರು ಪುತ್ರರನ್ನು ಅಗಲಿದ್ದಾರೆ. ಪಂಡಿತ ಕಾರೇಕರ ಅವರ ನಿಧನವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ಯುಗವನ್ನು ಅಂತ್ಯಗೊಳಿಸುತ್ತದೆ, 1944 ರಲ್ಲಿ ಜನಿಸಿದ ಕಾರೇಕರ ಅವರು ದೈವಜ್ಞ ಕುಟುಂಬದಿಂದ ಬಂದವರು. ಅವರ ಅಸಾಧಾರಣ ಗಾಯನ ಸಾಮರ್ಥ್ಯಗಳಿಗೆ ಪುಟವಿಟ್ಟವರು ಅವರ ಗುರುಗಳಾದ ಪಂಡಿತ್ ಸುರೇಶ ಹಲ್ದಂಕರ, ಪಂಡಿತ್ ಜಿತೇಂದ್ರ ಅಭಿಷೇಕಿ ಮತ್ತು ಸಿ.ಆರ್.ವ್ಯಾಸ್ ಕಾರಣವೆಂದು ಹೇಳಬಹುದು.

ಪ್ರಖ್ಯಾತ ಹಿಂದೂಸ್ತಾನೀ ಗಾಯಕರ ಬಳಿ ತರಬೇತಿ ಪಡೆದ ಕಾರೇಕರ ಸ್ವತಃ ಸಂಗೀತ ಕಲಾ ಪ್ರಕಾರದ ಶಿಕ್ಷಕರಾದರು. ಅವರು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಉನ್ನತ ಶ್ರೇಣಿ ಕಲಾವಿದರಾಗಿದ್ದರು. ಅವರ ರಾಗಗಳ ಪಾಂಡಿತ್ಯ ಮತ್ತು ಶಾಸ್ತ್ರೀಯ ಸಂಪ್ರದಾಯಗಳ ಆಳವಾದ ತಿಳುವಳಿಕೆಯು ಅವರಿಗೆ ಸಂಗೀತ ಸಮುದಾಯದಲ್ಲಿ ವ್ಯಾಪಕವಾದ ಮನ್ನಣೆ ಮತ್ತು ಗೌರವವನ್ನು ತಂದುಕೊಟ್ಟಿತ್ತು. ಶಿಕ್ಷಕರಾಗಿ, ಅವರು ತಮ್ಮ ಜ್ಞಾನವನ್ನು ಅಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಿದರು.
ಕಲೆಗೆ ಅವರ ಕೊಡುಗೆಗಳು ಕೇವಲ ಅವರ ಸಂಗೀತ ಕಚೇರಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ, ಅನೇಕ ಮಹತ್ವಾಕಾಂಕ್ಷಿ ಶಾಸ್ತ್ರೀಯ ಗಾಯಕರು ಅವರ ತರಬೇತಿಯ ಅಡಿಯಲ್ಲಿ ರೂಪುಗೊಂಡರು. ಗಾಯಕರಾಗಿ ಮತ್ತು ಶಿಕ್ಷಕರಾಗಿ ಅವರ ಪರಂಪರೆಯು ಸಂಗೀತ ಉತ್ಸಾಹಿಗಳಿಗೆ ಮತ್ತು ಭವಿಷ್ಯದ ಪೀಳಿಗೆಯ ಸಂಗೀತಗಾರರಿಗೆ ಸ್ಫೂರ್ತಿ ನೀಡುತ್ತದೆ.

ಅವರು ಯುವ ಸಂಗೀತಗಾರರಿಗೆ ಸ್ಥಾಪಿಸಲಾದ ಸ್ವರಪ್ರಭ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಗ್ರ್ಯಾಮಿ ಮತ್ತು ಪುಲಿಟ್ಜೆರ್ ಪ್ರಶಸ್ತಿ-ಪುರಸ್ಕೃತ ಸಂಗೀತಗಾರ ಓರ್ನೆಟ್ ಕೋಲ್ಮನ್ ಅವರೊಂದಿಗೆ ಸೇರಿ ಕೆಲಸ ಮಾಡಿದರು. ಬೊಲಾವಾ ವಿಠ್ಠಲ ಪಹಾವಾ ವಿಠ್ಠಲ ಸೇರಿದಂತೆ ಮರಾಠಿ ಅಭಂಗಗಳು ಹಾಗೂ ಮರಾಠಿ ನಾಟ್ಯಗೀತೆಗಳ ಮೂಲಕವೂ ಅವರು ಮನೆ ಮಾತಾಗಿದ್ದರು.
ಅತ್ಯುತ್ತಮ ಸಂಗೀತಗಾರ/ಗಾಯಕರಿಗೆ ನೀಡಲಾಗುವ ಮಧ್ಯಪ್ರದೇಶದ ತಾನಸೇನ್‌ ಸಮ್ಮಾನ್ ಪ್ರಶಸ್ತಿಯನ್ನು ಅವರಿಗೆ 2014 ರಲ್ಲಿ ಭಾಜನರಾಗಿದ್ದಾರೆ. 2016 ರಲ್ಲಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 2021 ರಲ್ಲಿ, ಸಂಗೀತಕ್ಕೆ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಗೋವಾ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಗೌರವವಾದ ಗೋಮಾಂತ ವಿಭೂಷಣ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement