ಬಾಡಿಗೆಗೆ ಇದ್ದ ಯೋಗ ಶಿಕ್ಷಕನನ್ನು ಜೀವಂತವಾಗಿ ಹೂತು ಹಾಕಿದ ಮನೆ ಮಾಲೀಕ

ರೋಹ್ಟಕ್‌ :  ಯೋಗ ಶಿಕ್ಷಕರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಿಸಿ ಮನೆಯ ಮಾಲೀಕ ಬಾಡಿಗೆದಾರರನ್ನು ಜೀವಂತವಾಗಿ ಹೂತು ಹಾಕಿದ ಘಟನೆ  ಹರಿಯಾಣದ ರೋಹ್ಟಕ್‌ನ ಚರ್ಕಿ ದಾದ್ರಿಯಲ್ಲಿ ಬೆಳಕಿಗೆ ಬಂದಿದೆ.
ತನ್ನ ಸ್ನೇಹಿತರ ಸಹಾಯವನ್ನು ಪಡೆದು ಯೋಗ ಶಿಕ್ಷಕನನ್ನು ಅಪಹರಿಸಿ ನಂತರ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಗ ಶಿಕ್ಷಕನನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೀವಂತವಾಗಿ ಹೂತುಹಾಕಲಾಗಿತ್ತು. ಪೊಲೀಸರು ಸುದೀರ್ಘ ತನಿಖೆ ನಡೆಸಿದ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸೋಮವಾರ ಶವವನ್ನು ಹೂತಿದ್ದ ಗುಂಡಿಯಿಂದ ಹೊರತೆಗೆಯಲಾಯಿತು.

ರೋಹ್ಟಕ್‌ನ ಬಾಬಾ ಮಸ್ತನಾಥ ವಿಶ್ವವಿದ್ಯಾನಿಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ ಅವರು ಹರ್ದೀಪ ಎಂಬವರ ಮನೆಯ ಒಂದು ಭಾಗದಲ್ಲಿ ಬಾಡಿಗೆಗೆ ಇದ್ದರು. ಜಗದೀಪ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹರ್ದೀಪ ಅನುಮಾನಿಸಿದ್ದ. ನಂತರಚರ್ಖಿ ದಾದ್ರಿಯ ಪಂತವಾಸ್ ಗ್ರಾಮದಲ್ಲಿ 7 ಅಡಿ ಆಳದ ಗುಂಡಿಯನ್ನು ಅಗೆಯಲು ಕೆಲವರಿಗೆ ಹಣಕೊಟ್ಟಿದ್ದ. ಹಾಗೂ ಬೋರ್‌ವೆಲ್‌ಗಾಗಿ ಗುಂಡಿ ತೆಗೆಯಲಾಗುತ್ತಿದೆ ಎಂದು ಅವರಿಗೆ ತಿಳಿಸಿದ್ದ.
ಡಿಸೆಂಬರ್ 24 ರಂದು, ಹರ್ದೀಪ ಮತ್ತು ಅವರ ಕೆಲವು ಸ್ನೇಹಿತರು ಮೂಲತಃ ಜಜ್ಜರ್ ಜಿಲ್ಲೆಯ ಮಂಡೋತಿ ಗ್ರಾಮದವರಾದ ಜಗದೀಪ ಕೆಲಸದಿಂದ ಹಿಂದಿರುಗುವಾಗ ಅವರನ್ನು ಅಪಹರಿಸಿದರು. ಚರ್ಖಿ ದಾದ್ರಿಯಲ್ಲಿರುವ ಗುಂಡಿ ತೋಡಿದ ಜಾಗಕ್ಕೆ ಗುಂಪು ಜಗದೀಪ ಅವರನ್ನು ಹೊತ್ತೊಯ್ದಿತು. ಹರ್ದೀಪ್ ಮತ್ತು ಆತನ ಸ್ನೇಹಿತರು ಕೂಗದಂತೆ ಮಾಡಲು ಜಗದೀಪ ಅವರ ಬಾಯಿಗೆ ಟೇಪ್ ಅಂಟಿಸಿದರು. ಹಾಗೂ ಜಗದೀಪ್ ಅವರ ಕೈ ಕಾಲುಗಳನ್ನು ಕಟ್ಟಿಹಾಕಿ ಥಳಿಸಿದರು. ನಂತರ ಅವರನ್ನು ಗುಂಡಿಯಲ್ಲಿ ಹಾಕಿ ಜೀವಂತವಾಗಿ ಮಣ್ಣು ಮುಚ್ಚಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಕೊಲೆಯಾದ 10 ದಿನಗಳ ನಂತರ ಜನವರಿ 3 ರಂದು ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಕೆಲ ಸಮಯದ ಹಿಂದೆ ಜಗದೀಪ ಅವರ ಫೋನ್‌ ರೆಕಾರ್ಡ್‌ಗಳನ್ನು ತನಿಖೆಗೆ ಒಳಪಡಿಸುವವರೆಗೂ ಪೊಲೀಸರಿಗೆ ಯಾವುದೇ ಸುಳಿವುಗಳು ಸಿಕ್ಕಿರಲಿಲ್ಲ. ಕಾಲ್‌ ರೆಕಾರ್ಡ್‌ನಲ್ಲಿ ಅವರಿಗೆ ಹರ್ದೀಪ್ ಮತ್ತು ಾತನ ಸ್ನೇಹಿತರಾದ ಧರಂಪಾಲ ಅವರನ್ನು ಬಂಧಿಸಲು ಸಾಕಷ್ಟು ಪುರಾವೆಗಳು ಸಿಕ್ಕಿತು.
ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದ ನಂತರ, ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಮಾಡಿದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ನೀಡಿದ ವಿವರಗಳ ಆದಾರದ ಮೇಲೆ ಕೊಲೆಯಾದ ಮೂರು ತಿಂಗಳ ನಂತರ, ಮಾರ್ಚ್ 24 ರಂದು ಸೋಮವಾರ ಜಗದೀಪ ಅವರ ಶವವನ್ನು ಗುಂಡಿಯಿಂದ ಹೊತೆಗೆಯಲಾಯಿತು.
“ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದು, ಅವರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು. ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ ಮತ್ತು ನಾವು ವರದಿಗಾಗಿ ಕಾಯುತ್ತಿದ್ದೇವೆ” ಎಂದು ಅಪರಾಧ ತನಿಖಾ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement