ಅಹಮದಾಬಾದ್: ಮೂರು ತಿಂಗಳ ಮಗು ಒಂದೇ ಸಮನೆ ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಬೇಸತ್ತ 22 ವರ್ಷದ ಮಹಿಳೆಯೊಬ್ಬರು ಆತನನ್ನು ಭೂಗತ ನೀರಿನ ಟ್ಯಾಂಕ್ಗೆ ಎಸೆದು ಕೊಲೆ ಮಾಡಿದ ಆರೋಪದ ಮೇಲೆ ಇಲ್ಲಿ ಬಂಧಿತಳಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕರಿಷ್ಮಾ ಬಾಘೇಲ್ ಎಂಬ 22 ವರ್ಷದ ಮಹಿಳೆ ಕಳೆದ ಶನಿವಾರ ತನ್ನ ಮೂರು ತಿಂಗಳ ಮಗ ಖಯಾಲ್ ಎಲ್ಲಿಯೂ ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ, ನಂತರ ಆಕೆಯ ಪತಿ ದಿಲೀಪ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೇಘನಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿಬಿ ಬಸಿಯಾ ಹೇಳಿದ್ದಾರೆ.
ಹುಡುಕಾಟದ ನಂತರ, ಪೊಲೀಸರು ಸೋಮವಾರ (ಏಪ್ರಿಲ್ 7) ಅಂಬಿಕಾನಗರ ಪ್ರದೇಶದ ಅವರ ಮನೆಯ ನೀರಿನ ಟ್ಯಾಂಕ್ನಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಅವರು ಹೇಳಿದರು.
ತದನಂತರ ಪೊಲೀಸರು ಶಿಶುವನ್ನು ನೀರಿನ ಟ್ಯಾಂಕ್ಗೆ ಎಸೆದದ್ದು ತಾಯಿಯೇ ಎಂಬುದು ಗೊತ್ತಾಗಿದೆ ಎಂದು ಬಸಿಯಾ ಹೇಳಿದರು. ಸೋಮವಾರ ರಾತ್ರಿ ತಾಯಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
“ಕರಿಷ್ಮಾ ಗರ್ಭಿಣಿಯಾದಾಗಿನಿಂದ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ತೊಂದರೆಗೊಳಗಾಗಿದ್ದಳು, ಯಾವಾಗಲೂ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ಹೇಳುತ್ತಿದ್ದಳು. ತನ್ನ ಮಗು ತುಂಬಾ ಅಳುತ್ತಿರುವುದರಿಂದ ತನಗೆ ತೊಂದರೆಯಾಗುತ್ತಿದೆ ಎಂದು ತನ್ನ ಕುಟುಂಬ ಸದಸ್ಯರಿಗೆ ಹೇಳುತ್ತಿದ್ದಳು” ಎಂದು ಪತಿ ದೀಪಕ ಬಸಿಯಾ ಹೇಳಿದ್ದಾರೆ.
ಆರೋಪಿ ಒಂದಕ್ಕೊಂದು ತಾಳಮೇಳವಾಗದ ಹೇಳಿಕೆಗಳನ್ನು ನೀಡಿದ್ದು, ಅನುಮಾನಕ್ಕೆ ಕಾರಣವಾಯಿತು. ತನ್ನ ಮಗನನ್ನು ಕೋಣೆಯಲ್ಲಿ ಕೂರಿಸಿ ಸ್ನಾನಗೃಹಕ್ಕೆ ಹೋಗಿದ್ದೆ, ನಂತರ ಬಂದು ನೋಡಿದಾಗ ಅವನು ಕಾಣೆಯಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.
ಭೂಗತ ನೀರಿನ ಟ್ಯಾಂಕ್ನಲ್ಲಿ ಮಗು ಪತ್ತೆಯಾದ ನಂತರ, ಯಾರಾದರೂ ಅದನ್ನು ನೀರಿನ ಟ್ಯಾಂಕ್ಗೆ ಎಸೆದಿದ್ದಾರೆಯೇ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು, ಏಕೆಂದರೆ ಟ್ಯಾಂಕ್ ಕಟ್ಟಿದ್ದನ್ನು ನೋಡಿದರೆ ಆಕಸ್ಮಿಕವಾಗಿ ಮಗು ಅಲ್ಲಿಗೆ ತಲುಪುವುದು ಅಸಾಧ್ಯವಾಗಿತ್ತು ಎಂದು ಅಧಿಕಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ