ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ; ಪರಾರಿಯಾಗಿದ್ದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ತನಿಖಾ ದಳದ (ಸಿಬಿಐ) ಮೂಲಗಳು ದೃಢಪಡಿಸಿವೆ.
ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಚೋಕ್ಸಿಯನ್ನು ಬಂಧಿಸಲಾಗಿದ್ದು, ಮುಂಬೈ ನ್ಯಾಯಾಲಯಗಳು ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿವೆ. 65 ವರ್ಷದ ಮೆಹುಲ್ ಚೋಕ್ಸಿಯನ್ನು ಶನಿವಾರ ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಅವರು ಜಾಮೀನು ಮತ್ತು ತಕ್ಷಣದ ಬಿಡುಗಡೆಯನ್ನು ಕೋರುವ ನಿರೀಕ್ಷೆಯಿದೆ.

2018 ರಿಂದ ಪರಾರಿಯಾಗಿದ್ದ ಚೋಕ್ಸಿಯನ್ನು ಏಪ್ರಿಲ್ 12 ರಂದು ಬೆಲ್ಜಿಯಂನ ಆಸ್ಪತ್ರೆಯಿಂದ ಬಂಧಿಸಲಾಯಿತು, ಅಲ್ಲಿ ಚೋಕ್ಸಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಭಾರತೀಯ ಅಧಿಕಾರಿಗಳು ಹಸ್ತಾಂತರ ಪ್ರಯತ್ನಗಳನ್ನು ಚುರುಕುಗೊಳಿಸಿದ ಕೆಲವು ದಿನಗಳ ನಂತರ ಅವರ ಬಂಧನವಾಯಿತು.
2018 ರಲ್ಲಿ ಬ್ಯಾಂಕ್‌ಗೆ 13,500 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಚೋಕ್ಸಿ ಮತ್ತು ಆತನ ಸೋದರಳಿಯ ನೀರವ ಮೋದಿ ಲಂಡನ್‌ನಿಂದ ಗಡೀಪಾರುಗಾಗಿ ಕಾಯುತ್ತಿದ್ದಾರೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ನೀರವ ಮೋದಿಯನ್ನು ಹುಡುಕುತ್ತಿದೆ.
ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುವ ಪಿಎನ್‌ಬಿ, ಚೋಕ್ಸಿ, ಮೋದಿ ಮತ್ತು ಅವರ ಕಂಪನಿ ಗೀತಾಂಜಲಿ ಜೆಮ್ಸ್ ಸೇರಿದಂತೆ ಹಲವಾರು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ಅವರು ಮುಂಬೈನಲ್ಲಿರುವ ಬ್ಯಾಂಕಿನ ಬ್ರಾಡಿ ಹೌಸ್ ಶಾಖೆಯ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಅಂಡರ್ಟೇಕಿಂಗ್ ಲೆಟರ್ಸ್ (ಎಲ್ಒಯು) ಮತ್ತು ವಿದೇಶಿ ಕ್ರೆಡಿಟ್ ಲೆಟರ್ಸ್ (ಎಫ್ಎಲ್ಸಿ) ಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪಿಎನ್‌ಬಿ ಹಗರಣ ಬೆಳಕಿಗೆ ಬರುವ ವಾರಗಳ ಮೊದಲು, 2018 ರ ಜನವರಿಯಲ್ಲಿ ಚೋಕ್ಸಿ ಮತ್ತು ನೀರವ ಮೋದಿ ಭಾರತದಿಂದ ಪಲಾಯನ ಮಾಡಿದರು.
ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬೆಲ್ಜಿಯಂನಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲು ಯೋಜಿಸುತ್ತಿದ್ದಾಗ ಚೋಕ್ಸಿ ಬಂಧನಕ್ಕೊಳಗಾದರು ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 2024 ರಲ್ಲಿ ಇಡಿ ಮತ್ತು ಸಿಬಿಐ ಹಸ್ತಾಂತರ ಮನವಿಗಳನ್ನು ಸಲ್ಲಿಸಿದ ನಂತರ ಅವರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ, ಚೋಕ್ಸಿ ವಕೀಲರು ಅವರು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಮತ್ತು ಪ್ರಯಾಣಕ್ಕೆ ಅನರ್ಹರಾಗಿದ್ದಾರೆ ಎಂದು ವಾದಿಸಿದರು. ಆದಾಗ್ಯೂ, ಭಾರತೀಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಇದನ್ನು ವಿರೋಧಿಸಿದರು, ವೈದ್ಯಕೀಯ ಚಿಕಿತ್ಸೆಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ಹೋಗಲು ಚೋಕ್ಸಿಗೆ ಸಾಧ್ಯವಾದರೆ, ಭಾರತಕ್ಕೆ ಬರಲು ಸಹ ಸಾಧ್ಯವಾಗುತ್ತದೆ, ಭಾರತದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.

ಚೋಕ್ಸಿ ವಿರುದ್ಧದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಅನ್ನು ತೆಗೆದುಹಾಕಿದ ನಂತರ ಭಾರತೀಯ ಏಜೆನ್ಸಿಗಳು ಹಸ್ತಾಂತರ ವಿನಂತಿಗಳನ್ನು ಮತ್ತೆ ಸಕ್ರಿಯಗೊಳಿಸಿದವು. ಹಾಗೂ ಇಡಿ ಮತ್ತು ಸಿಬಿಐ ಹೊಸ ಮನವಿ ಸಲ್ಲಿಸಿದವು. ಇದು ಅಂತಿಮವಾಗಿ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲು ಕಾರಣವಾಯಿತು.
ಭಾರತೀಯ ಅಧಿಕಾರಿಗಳು ಈಗ ಆತನನ್ನು ವಿಚಾರಣೆಗೆ ಒಳಪಡಿಸಲು ಕೆಲಸ ಮಾಡುತ್ತಿದ್ದರೂ, ಹಸ್ತಾಂತರವು ದೀರ್ಘ ಪ್ರಕ್ರಿಯೆಯಾಗಿರಬಹುದು. ಗಡೀಪಾರು ಮಾಡುವುದನ್ನು ವಿರೋಧಿಸಲು ಚೋಕ್ಸಿ ಬೆಲ್ಜಿಯಂ ನ್ಯಾಯಾಲಯಗಳಲ್ಲಿ ಲಭ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆ ಅನುಸರಿಸುವ ಸಾಧ್ಯತೆಯಿದೆ ಮತ್ತು ವೈದ್ಯಕೀಯ ಆಧಾರದ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ದೃಢಪಡಿಸಿವೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

ಈ ನಿರೀಕ್ಷಿತ ಸವಾಲುಗಳ ಹೊರತಾಗಿಯೂ, ಚೋಕ್ಸಿಗೆ ಜಾಮೀನು ದೊರೆತರೂ, ಅವರು ಆಂಟಿಗುವಾಗೆ ಮರಳಲು ಅವಕಾಶ ಸಿಗುವುದಿಲ್ಲ ಎಂದು ಭಾರತೀಯ ಸಂಸ್ಥೆಗಳು ಆಶಿಸುತ್ತಿವೆ. ಭಾರತವು ಆತನನ್ನು ಮರಳಿ ಕರೆತರಲು ಪರ್ಯಾಯ ಮಾರ್ಗವಾಗಿ ಗಡೀಪಾರು ಮಾಡುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ.
ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 6,095 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ. ಇದರಲ್ಲಿ ಅಂಡರ್‌ಟೇಕಿಂಗ್ ಲೆಟರ್ಸ್ (ಎಲ್‌ಒಯು) ಮತ್ತು ಫಾರಿನ್ ಲೆಟರ್ಸ್ ಆಫ್ ಕ್ರೆಡಿಟ್ (ಎಫ್‌ಎಲ್‌ಸಿ) ಗಳನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕ ಭಾರಿ ಬ್ಯಾಂಕಿಂಗ್ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ.
ವಂಚನೆಯು 13,000 ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದ್ದರೂ, ತನಿಖಾ ಸಂಸ್ಥೆಗಳು ಚೋಕ್ಸಿಯ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸಿದ 6,095 ಕೋಟಿ ರೂ.ಗಳ ಅಂಶವನ್ನು ಆಧರಿಸಿ ನಿರ್ದಿಷ್ಟವಾಗಿ ಅವರ ವಿರುದ್ಧ ಪ್ರಕರಣ ಮಾಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement