42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿ ಬರಲಾಗದೇ ಒದ್ದಾಡುತ್ತಿದ್ದ ಭಾರತದ ವ್ಯಕ್ತಿ ಕೊನೆಗೂ ಮನೆಗೆ ವಾಪಸ್‌…! ಆಗಿದ್ದೇನು..?

ನವದೆಹಲಿ: ಕಳೆದ 42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಕೇರಳದಲ್ಲಿರುವ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಗೋಪಾಲನ್ ಚಂದ್ರನ್ ಎಂದು ಎಂಬ ವ್ಯಕ್ತಿ, ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕುತ್ತಾ ಮಧ್ಯಪ್ರಾಚ್ಯ ದೇಶಕ್ಕೆ ತೆರಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ಸಿಲುಕಿಕೊಂಡಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಅನ್ಯಾಯವನ್ನು ಎದುರಿಸುತ್ತಿರುವ ಭಾರತೀಯರ ಪರವಾಗಿ ಹೋರಾಡುವ ನಿವೃತ್ತ ನ್ಯಾಯಾಧೀಶರು, ವಕೀಲರು ಮತ್ತು ಪತ್ರಕರ್ತರನ್ನು ಒಳಗೊಂಡಿರುವ ಪ್ರವಾಸಿ ಕಾನೂನು ಕೋಶ (Pravasi Legal Cell) ಎಂಬ ಸರ್ಕಾರೇತರ ಸಂಸ್ಥೆಯ ಸಹಾಯದಿಂದ ಕೊನೆಗೂ ಅವರು ಮನೆಗೆ ವಾಪಸ್‌ ಬರಲು ಸಾಧ್ಯವಾಯಿತು.
ಫೇಸ್‌ಬುಕ್‌ನಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡ ಎನ್‌ಜಿಒ, ಗೋಪಾಲನ್‌ ಚಂದ್ರನ್ ಅವರು ಕೇರಳದಲ್ಲಿರುವ ತಮ್ಮ ಕುಟುಂಬಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಉತ್ತಮ ಸಂಬಳದ ಉದ್ಯೋಗವನ್ನು ಪಡೆಯುವ ಭರವಸೆಯಿಂದ 1983 ರಲ್ಲಿ ಬಹ್ರೇನ್‌ಗೆ ಬಂದಿದ್ದರು. ಆದರೆ, ದುರದೃಷ್ಟಕರ ಘಟನೆಯೊಂದರಲ್ಲಿ, ಅವರು ಬಹ್ರೇನ್ ತಲುಪಿದ ನಂತರ, ಅವರ ಉದ್ಯೋಗದಾತ ನಿಧನರಾದರು ಮತ್ತು ಅವರ ಪಾಸ್‌ಪೋರ್ಟ್ ಸಹ ಕಳೆದುಹೋಯಿತು. ಇದರ ಪರಿಣಾಮವಾಗಿ, ಚಂದ್ರನ್ ಬಳಿ ಯಾವುದೇ ದಾಖಲೆ ಇಲ್ಲವಾಯಿತು. ಹೀಗಾಗಿ ಅವರು 42 ವರ್ಷಗಳ ಕಾಲ ವಲಸೆ ವ್ಯವಸ್ಥೆಯ ನಿಯಮಗಳ ಕಾರಣದಿಂದ ವಾಪಸ್‌ ಕೇರಳಕ್ಕೆ ಬರಲು ಸಾಧ್ಯವಾಗದೆ ಬಹ್ರೇನ್‌ನಲ್ಲಿಯೇ ಸಿಲುಕಿಕೊಂಡರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

“1983 ರಲ್ಲಿ, ಗೋಪಾಲನ್ ಚಂದ್ರನ್ ಎಂಬ ಯುವಕ ಕೇರಳದ ಪೌಡಿಕೋಣಂ ಬಳಿಯ ತನ್ನ ಸಣ್ಣ ಹಳ್ಳಿಯನ್ನು ತೊರೆದು, ಉತ್ತಮ ಸಂಬಳಧ ಉದ್ಯೋಗದ ಕನಸುಗಳೊಂದಿಗೆ ಬಹ್ರೇನ್‌ಗೆ ಹೊರಟೊದ್ದರು. ಆದರೆ ಜೀವನವು ವಿಭಿನ್ನ ತಿರುವು ಪಡೆಯುತ್ತದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಚಂದ್ರನ್‌ ಅವರ ಉದ್ಯೋಗದಾತ ನಿಧನರಾದಾಗ ಮತ್ತು ಅವರ ಪಾಸ್‌ಪೋರ್ಟ್ ಕಳೆದುಹೋದಾಗ, ಗೋಪಾಲನ್ ಅವರು ದಾಖಲೆಗಳಿಲ್ಲದೆ ಮತ್ತು 42 ವರ್ಷಗಳ ಕಾಲ ವಿದೇಶಿ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡರು ಎಂದು ಪ್ರವಾಸಿ ಕಾನೂನು ಕೋಶ (Pravasi Legal Cell) ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
ಚಂದ್ರನ್ ಅವರ ಭಾರತಕ್ಕೆ ಪುನಃ ಬರುವುದು ಪ್ರವಾಸಿ ಕಾನೂನು ಕೋಶದ ನೆರವಿನಿಂದ ಸಾಧ್ಯವಾಯಿತು. ಪ್ರವಾಸಿ ಕಾನೂನು ಕೋಶ (Pravasi Legal Cell) ತಂಡವು ಬಹ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ರಾಜ್ಯದ ವಲಸೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವರ್ಷಗಳ ಅಧಿಕಾರಶಾಹಿ ಕೆಂಪು ಪಟ್ಟಿಯನ್ನು ಕತ್ತರಿಸಿ ಚಂದ್ರನ್ ಅವರ ಮರಳುವಿಕೆಯನ್ನು ಖಾತ್ರಿಪಡಿಸಿತು. “ಗೋಪಾಲನ್ ಅವರನ್ನು ವಾಪಸ್‌ ಕರೆತರಲು ಕಾನೂನು ಜಟಿಲತೆಗಳ ವಿರುದ್ಧ ಎನ್‌ಜಿಒ ಕೆಲಸ ಮಾಡಿತು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

“ಗೋಪಾಲನ್ ಕೊನೆಗೂ ತನಗಾಗಿ ಕಾಯುತ್ತಿರುವ ತಮ್ಮ 95 ವರ್ಷದ ತಾಯಿಯನ್ನು ನೋಡಲು ಮನೆಗೆ ಮರಳಿದರು – ಅವರ ತಾಯಿ ಮಾತ್ರ ಎಂದಿಗೂ ತಮ್ಮ ಮಗ ವಾಪಸ್‌ ಬರುತ್ತಾನೆ ಎಂಬ ಭರವಸೆಯಲ್ಲಿಯೇ ಕಾಯುತ್ತಿದ್ದರು. ಚಂದ್ರನ್‌ ಅವರು ನೆನಪುಗಳು, ಕಣ್ಣೀರು ಮತ್ತು ಕುಟುಂಬದೊಂದಿಗೆ ಮತ್ತೆ ಒಂದಾಗುವ ಕನಸಿನೊಂದಿಗೆ ಮನೆಗೆ ಮರಳಲು ಗುರುವಾರ ಬಹ್ರೇನ್‌ನಲ್ಲಿ ವಿಮಾನ ಏರಲಿದ್ದಾರೆ.
“ಇದು ಕೇವಲ ಮನೆಗೆ ಹೋಗುವ ವ್ಯಕ್ತಿಯ ಕಥೆಯಲ್ಲ. ಇದು ಮಾನವೀಯತೆ, ನ್ಯಾಯ ಮತ್ತು ನಿರಂತರ ದಯೆ ಒಟ್ಟಿಗೆ ಸೇರಿದಾಗ ಏನಾಗುತ್ತದೆ ಎಂಬುದರ ಕಥೆಯಾಗಿದೆ. ಅಸಂಖ್ಯಾತ ವಲಸಿಗರಿಗೆ ಇದು ಭರವಸೆಯ ಸಂಕೇತವಾಗಿದೆ. ಗೋಪಾಲನ್, ಮನೆಗೆ ಸ್ವಾಗತ. ನಿಮ್ಮನ್ನು ಎಂದಿಗೂ ಮರೆಯಲಾಗಲಿಲ್ಲ” ಎಂದು ಎನ್‌ಜಿಒ ಪೋಸ್ಟ್ ಮುಕ್ತಾಯವಾಗುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement