ವೀಡಿಯೊ | ಅಹಮದಾಬಾದ್ ವಿಮಾನ ದುರಂತದ ಕೆಲದಿನಗಳ ನಂತರ ಕಚೇರಿಯಲ್ಲಿ ಪಾರ್ಟಿ ; ಏರ್ ಇಂಡಿಯಾ ವೆಂಚರಿನ 4 ಹಿರಿಯ ಸಿಬ್ಬಂದಿ ವಜಾ

ನವದೆಹಲಿ: ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವೆಗಳನ್ನು ಒದಗಿಸುವ ಎಐಎಸ್‌ಎಟಿಎಸ್‌ (AISATS)ನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಕೆಲವೇ ದಿನಗಳ ನಂತರ ನೌಕರರು ಕಚೇರಿ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಅಹಮದಾಬಾದ್‌ನಲ್ಲಿ 275ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತ ಸಂಭವಿಸಿದ ಕೆಲವೇ ದಿನಗಳ ನಂತರ AISATS ನ ಗುರುಗ್ರಾಮ್ ಕಚೇರಿಯಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ಏರ್‌ ಇಂಡಿಯಾ ವಿಮಾನದ ದುರಂತದಿಂದ ಹಾನಿಗೊಳಗಾದ ಕುಟುಂಬಗಳ ಜೊತೆ ಕಂಪನಿಯು ಬೆಂಬಲವಾಗಿ ನಿಲ್ಲುತ್ತದೆ ಮತ್ತು “ವೀಡಿಯೊ” ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಎಂದು ಎಐಎಸ್‌ಎಟಿಎಸ್‌ ವಕ್ತಾರರು ತಿಳಿಸಿದ್ದಾರೆ.

ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ವೀಡಿಯೊ ಬಗ್ಗೆ ಅನೇಕರು ಇದು ಸಂಭ್ರಮಿಸಲು ಸೂಕ್ತವಲ್ಲದ ಸಮಯವಾಗಿತ್ತು ಎಂದು ಹೇಳಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೃತ್ಯ ಮಾಡುತ್ತಿರುವುದು ಮತ್ತು ಹಿನ್ನೆಲೆಯಲ್ಲಿ ಅವಡುಗಚ್ಚುವ ಸಂಗೀತ ಪ್ಲೇಯ್‌ ಮಾಡಿದ್ದನ್ನು ತೋರಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ಇನ್ನೂ ತಮ್ಮ ಪ್ರೀತಿಪಾತ್ರರ ಶವಗಳ ಹಸ್ತಾಂತರಕ್ಕಾಗಿ ಕಾಯುತ್ತಿರುವಾಗ ನಡೆದ ಈ ಸಂಭ್ರಮದ ಪಾರ್ಟಿ ಆಯೋಜಿರುವುದಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ, ಹಲವರು ಇದನ್ನು ಅಸಂವೇದನಾಶೀಲ ಎಂದು ಕರೆದಿದ್ದಾರೆ.

“ಎಐಎಸ್‌ಎಟಿಎಸ್‌ ನಲ್ಲಿ, ಏರ್‌ ಇಂಡಿಯಾ ದುರಂತದಿಂದ ಪ್ರಭಾವಿತರಾದ ಕುಟುಂಬಗಳೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಮತ್ತು ಇತ್ತೀಚಿನ ಆಂತರಿಕ ವೀಡಿಯೊದಲ್ಲಿ ಪ್ರತಿಫಲಿಸುವ ಸಂದೇಶದ ಲೋಪಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ವಕ್ತಾರರು ಹೇಳಿದ್ದಾರೆ. “ನಡವಳಿಕೆಯು ನಮ್ಮ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಸಹಾನುಭೂತಿ, ವೃತ್ತಿಪರತೆ ಮತ್ತು ಹೊಣೆಗಾರಿಕೆಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಿದ್ದಂತೆ ಹೊಣೆಗಾರರ ವಿರುದ್ಧ ದೃಢವಾದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ” ಎಂದು ವಕ್ತಾರರು ಹೇಳಿದರು. ಕಂಪನಿಯು ನಾಲ್ವರು ಹಿರಿಯ ಅಧಿಕಾರಿಗಳಿಗೆ ಬಿಟ್ಟು ಹೋಗಲು ಹೇಳಿದ್ದು, ಇತರ ಹಲವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಎಐಎಸ್‌ಎಟಿಎಸ್‌ (AISATS) ಎಂಬುದು ಟಾಟಾ ಗ್ರೂಪ್‌ನ ಭಾಗವಾಗಿರುವ ಏರ್ ಇಂಡಿಯಾ ಲಿಮಿಟೆಡ್ ಮತ್ತು ಗೇಟ್‌ವೇ ಸೇವೆಗಳು ಮತ್ತು ಆಹಾರ ಪರಿಹಾರಗಳಲ್ಲಿ ಭಾಗವಹಿಸುವ ಎಸ್‌ಎಟಿಎಸ್‌ (SATS) ಲಿಮಿಟೆಡ್ ನಡುವಿನ 50-50 ಜಂಟಿ ಉದ್ಯಮವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | 16 ಸೂರ್ಯಾಸ್ತಗಳು, 16 ಸೂರ್ಯೋದಯಗಳು..: ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ-ವೀಕ್ಷಿಸಿ

ಜೂನ್ 12 ರಂದು ಲಂಡನ್‌ಗೆ ಹೊರಟಿದ್ದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣದ ಪರಿಧಿಯ ಹೊರಗೆ ಇರುವ ಮೇಘಾನಿ ನಗರದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ವಸತಿ ಆವರಣಕ್ಕೆ ಅದು ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದರು – ಸೀಟು 11A ನಲ್ಲಿ ಕುಳಿತಿದ್ದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ – ಬದುಕುಳಿದಿದ್ದಾರೆ. ವಿಮಾನದಲ್ಲಿ 232 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಇದ್ದರು, ಅವರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, ಏಳು ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದವರು ಸೇರಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement