ಶ್ರೀಕಾಳಹಸ್ತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತೊಟ್ಟಂಬೆಡು ಮಂಡಲದ ಚಿಯ್ಯವರಂ ಎಂಬಲ್ಲಿ ವ್ಯಕ್ತಿಯೊಬ್ಬ ತನಗೆ ಕಪ್ಪು ವಿಷಕಾರಿ ಹಾವು ಕಚ್ಚಿದ ನಂತರ ಅದರ ತಲೆಯನ್ನು ಕಚ್ಚಿದ ಘಟನೆ ವಿಚಿತ್ರ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ನಂತರ ಆತ ಸತ್ತ ಹಾವನ್ನು ತೆಗೆದುಕೊಂಡು ಮನಗೆ ಬಂದು ಅದರ ಮೇಲೆಯೇ ಮಲಗಿದ್ದಾನೆ…!
ಗುರುವಾರ ರಾತ್ರಿ ನಡೆದ ಈ ಘಟನೆ ತಿಳಿದು ಸ್ಥಳೀಯರು ಗೊಂದಲಕ್ಕೆ ಒಳಗಾಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವೆಂಕಟೇಶ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ. ಆತ ಮನೆಗೆ ಹಿಂದಿರುಗುವಾಗ ವಿಷಕಾರಿ ಹಾವು ಕಚ್ಚಿದೆ. ಇದರಿಂದ ಕೋಪಗೊಂಡ ವೆಂಕಟೇಶ, ಹಾವನ್ನು ತನ್ನ ಕೈಯಲ್ಲಿ ಹಿಡಿದು ಅದರ ತಲೆಯನ್ನು ಕಚ್ಚಿದ್ದಾನೆ ಎನ್ನಲಾಗಿದೆ. ನಂತರ ಹಾವು ಸತ್ತಿದ್ದು, ಸತ್ತ ಹಾವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಅದರ ಮೇಲೆ ಮಲಗಿದ್ದಾನೆ ಎಂದು ಹೇಳಲಾಗಿದೆ.
ರಾತ್ರಿ ಆತನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ, ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ತಕ್ಷಣವೇ ಶ್ರೀಕಾಳಹಸ್ತಿ ಆಸ್ಪತ್ರೆಗೆ ಕರೆದೊಯ್ದರು. ಕರ್ತವ್ಯದಲ್ಲಿದ್ದ ವೈದ್ಯರು ತಕ್ಷಣ ಅವರನ್ನು ಪರೀಕ್ಷಿಸಿ ಪರಿಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ, ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿ ರುಯಾ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ ನಂತರ ಅಲ್ಲಿಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಕುರಿತು ಮಾತನಾಡಿದ ವೆಂಕಟೇಶ ಅಕ್ಕಪಕ್ಕದವರು, “ಯಾರಾದರೂ ಹಾವಿನ ತಲೆಯನ್ನು ಕಚ್ಚಿ ಅದರ ಮೇಲೆ ಮಲಗುತ್ತಾರೆ ಎಂದು ಊಹಿಸುವುದು ಕಷ್ಟ. ಆತನ ಕೃತ್ಯಗಳನ್ನು ನೋಡಿ ನಾವು ಅಕ್ಷರಶಃ ಆಘಾತಕ್ಕೊಳಗಾಗಿದ್ದೇವೆ” ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ