ಬಿಹಾರದಲ್ಲಿ ಬಿಜೆಪಿ ಶಿಸ್ತು ಕ್ರಮ: ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್, ಇನ್ನಿಬ್ಬರು ಅಮಾನತು

ನವದೆಹಲಿ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅವರನ್ನು ಶನಿವಾರ (ನವೆಂಬರ್ 15) ಬಿಜೆಪಿಯು ಪಕ್ಷದಿಂದ ಅಮಾನತುಗೊಳಿಸಿದೆ.
ಮೋದಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದ ಮತ್ತು ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿಯಾಗಿದ್ದ ಆರ್.ಕೆ. ಸಿಂಗ್ ಅವರು ಭ್ರಷ್ಟಾಚಾರ ಮತ್ತು ಗುಂಪುಗಾರಿಕೆಗಾಗಿ ಅವರು ಎನ್‌ಡಿಎಯ ಹಲವಾರು ನಾಯಕರನ್ನು ಟೀಕಿಸಿದ್ದರು. ಅಲ್ಲದೆ, ಚುನಾವಣಾ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ನಿರ್ವಹಿಸುವ ಬಗ್ಗೆ ಚುನಾವಣಾ ಆಯೋಗದ ಕ್ರಮವನ್ನು ಅವರು ಬಹಿರಂಗವಾಗಿ ಪ್ರಶ್ನಿಸಿದ್ದರು, ವಿಶೇಷವಾಗಿ ಮೊಕಾಮಾದಲ್ಲಿ ನಡೆದ ಹಿಂಸಾಚಾರವನ್ನು ಆಡಳಿತ ಮತ್ತು ಚುನಾವಣಾ ಸಂಸ್ಥೆಯ ವೈಫಲ್ಯ ಎಂದು ಬೊಟ್ಟು ಮಾಡಿದ್ದರು.

ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಅನಂತ್ ಸಿಂಗ್ ಸೇರಿದಂತೆ ಎನ್‌ಡಿಎಯ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಸಿಂಗ್ ಅವರು ಬಿಹಾರ ಮತದಾರರನ್ನು ಒತ್ತಾಯಿಸಿದ್ದರು. ಅವರ ಈ ನಿಷ್ಠುರ ನಿಲುವು ಮತ್ತು ಪಕ್ಷದ ನಾಯಕರ ವಿರುದ್ಧದ ಆರೋಪಗಳು ಅವರ ದೂರವಾಗಲು ಕಾರಣವಾಯಿತು, ಅಂತಿಮವಾಗಿ ಇದು ಅವರ ಅಮಾನತಿಗೆ ದಾರಿ ಮಾಡಿಕೊಟ್ಟಿತು. ಆರ್.ಕೆ. ಸಿಂಗ್ ಅವರ ಅಮಾನತು, ಎನ್‌ಡಿಎಯ ಚುನಾವಣಾ ಯಶಸ್ಸಿನ ನಂತರ ಹೆಚ್ಚಿದ ಆಂತರಿಕ ಶಿಸ್ತನ್ನು ಸೂಚಿಸುತ್ತದೆ, ಆದರೆ ಬಿಜೆಪಿಯೊಳಗೆ ಅಸಮಾಧಾನವು ಬೆಳೆಯುತ್ತಿರುವ ಸುಳಿವನ್ನೂ ನೀಡುತ್ತದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಎಂಎಲ್‌ಸಿ ಅಶೋಕ ಅಗರವಾಲ್ ಮೇಯರ್ ಉಷಾ ಅಗರವಾಲ್ ಅಮಾನತು
ಆರ್.ಕೆ. ಸಿಂಗ್ ಅವರ ಅಮಾನತಿನ ಜೊತೆಗೆ, ಬಿಹಾರ ಬಿಜೆಪಿ ಘಟಕವು ಎಂಎಲ್‌ಸಿ ಅಶೋಕಕುಮಾರ ಅಗರವಾಲ್ ಮತ್ತು ಅವರ ಪತ್ನಿ, ಕಟಿಹಾರ್ ಮೇಯರ್ ಉಷಾ ಅಗರವಾಲ್ ಅವರನ್ನು ‘ಪಕ್ಷ ವಿರೋಧಿ ಚಟುವಟಿಕೆ’ಗಳ ಕಾರಣ ನೀಡಿ ಅಮಾನತುಗೊಳಿಸಿದೆ. ಅಶೋಕ್ ಅಗರವಾಲ್ ಅವರು ತಮ್ಮ ಪುತ್ರ ಸೌರವ್ ಅಗರವಾಲ್ ಅವರನ್ನು ಕಟಿಹಾರ್‌ನಿಂದ ವಿಐಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಇದು ಪಕ್ಷದ ನಿರ್ದೇಶನಗಳಿಗೆ ವಿರುದ್ಧವಾದ ನಡೆಯಾಗಿದೆ. ಪಕ್ಷದ ಶಿಸ್ತು ಮತ್ತು ಆಂತರಿಕ ಸುವ್ಯವಸ್ಥೆಯ ಬಗ್ಗೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳುತ್ತಿರುವ ಬಿಜೆಪಿಯ ಕ್ರಮವಾಗಿ, ಇಬ್ಬರೂ ಒಂದು ವಾರದೊಳಗೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಕೇಳಲಾಗಿದೆ.

ಚುನಾವಣಾ ಹಿಂಸಾಚಾರ ಮತ್ತು ಆಡಳಿತಾತ್ಮಕ ವೈಫಲ್ಯಗಳ ಪ್ರಸ್ತಾಪ
ಪ್ರಚಾರದ ಸಮಯದಲ್ಲಿ ಮೊಕಾಮಾದಲ್ಲಿ ಜನ ಸುರಾಜ್‌ ಪಕ್ಷದ ಬೆಂಬಲಿಗ ದುಲಾರಚಂದ ಯಾದವ್ ಅವರ ಕೊಲೆಯ ನಂತರ, ನೀತಿ ಸಂಹಿತೆಯನ್ನು (MCC) ಎತ್ತಿಹಿಡಿಯುವಲ್ಲಿ ವಿಫಲವಾದ ಚುನಾವಣಾ ಆಯೋಗವನ್ನು (EC) ಆರ್.ಕೆ. ಸಿಂಗ್ ತೀವ್ರವಾಗಿ ಟೀಕಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದು “ಜಂಗಲ್ ರಾಜ್” ಮತ್ತು ಆಡಳಿತದ ಸ್ವೀಕಾರಾರ್ಹವಲ್ಲದ ವೈಫಲ್ಯ ಎಂದು ಸಿಂಗ್ ಬಣ್ಣಿಸಿದ್ದರು. ವಿಪಕ್ಷದ ನಾಯಕರು ಸಹ ಚುನಾವಣೆಗಳ ಸಂದರ್ಭದಲ್ಲಿ ಕ್ಷೀಣಿಸುತ್ತಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಗಳು ಬಿಹಾರ ಬಿಜೆಪಿಯಲ್ಲಿ ಚುನಾವಣಾ ನಂತರದ ರಾಜಕೀಯ ಗೊಂದಲವನ್ನು ಎತ್ತಿ ತೋರಿಸುತ್ತಿದ್ದು, ಪಕ್ಷವು ರಾಜ್ಯದಲ್ಲಿ ಅಧಿಕಾರವನ್ನು ಬಲಪಡಿಸಲು ನಾಯಕತ್ವದ ಪಾತ್ರಗಳನ್ನು ಮರುಮೌಲ್ಯಮಾಪನ ಮಾಡುತ್ತಿದೆ ಮತ್ತು ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಲು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement