“ದಬ್ಬಾಳಿಕೆ ಯುಗದ ಅಂತ್ಯ”: ಬಂಡುಕೋರರು ದಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್

ಬಂಡುಕೋರರು ಸಿರಿಯಾದ ರಾಜಧಾನಿ ದಮಾಸ್ಕಸ್‌ ಅನ್ನು ಪ್ರವೇಶಿಸಿರುವುದಾಗಿ ಘೋಷಿಸಿದ ನಂತರ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಬಂಡುಕೋರರು ಬಶರ್ ಅಲ್-ಅಸ್ಸಾದ್ “ಯುಗ ಅಂತ್ಯ” ಎಂದು ಘೋಷಿಸುತ್ತಿದ್ದಂತೆ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ.
ಯುದ್ಧದ ಮಾನಿಟರ್ ಪ್ರಕಾರ, ಸೇನೆ ಮತ್ತು ಭದ್ರತಾ ಪಡೆಗಳು ದಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಣ ಕಳೆದುಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ (AFP) ವರದಿ ಮಾಡಿದೆ. ಪ್ರಮುಖ ಅಸ್ಸಾದ್ ಪರ ಹೋರಾಟಗಾರರು ಸಿರಿಯನ್ ರಾಜಧಾನಿಯ ಸುತ್ತ ತಮ್ಮ ಸ್ಥಳಗಳನ್ನು ತೊರೆದಿದ್ದಾರೆ ಎಂದು ಹೆಜ್ಬೊಲ್ಲಾಹ್‌ಗೆ ಹತ್ತಿರವಿರುವ ಮೂಲವೊಂದು ಎಎಫ್‌ಪಿಗೆ ತಿಳಿಸಿದೆ.
ಇಸ್ಲಾಮಿ ಹಯಾತ್ ತಹ್ರೀರ್ ಅಲ್-ಶಾಮ್ ಗುಂಪು ತನ್ನ ಪಡೆಗಳು ದಮಾಸ್ಕಸ್‌ಗೆ ಹೋಗುತ್ತಿವೆ ಎಂದು ಹೇಳಿದೆ. ಶೀಘ್ರದಲ್ಲೇ, ಅವರು “ಸೆಡ್ನಾಯಾ ಜೈಲಿನಲ್ಲಿ ದಬ್ಬಾಳಿಕೆಯ ಯುಗದ ಅಂತ್ಯ” ಎಂದು ಘೋಷಿಸಿದರು, ಬಂಡುಕೋರರು ಜೈಲಿಗೆ ನುಗ್ಗಿದರು ಎಂದು AFP ವರದಿ ಮಾಡಿದೆ.

ಈ ಹಿಂದೆ, ರಾಜಧಾನಿಗೆ ಹೋಗುವ ಮಾರ್ಗದಲ್ಲಿ ಆಯಕಟ್ಟಿನ ನಗರವಾದ ಹೋಮ್ಸ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಬಂಡುಕೋರ ಗುಂಪು ಹೇಳಿತ್ತು. ಆದರೆ ಸಿರಿಯಾದ ರಕ್ಷಣಾ ಸಚಿವಾಲಯ ಇದನ್ನು ನಿರಾಕರಿಸಿದೆ ಮತ್ತು ಹೋಮ್ಸ್‌ನಲ್ಲಿ ಪರಿಸ್ಥಿತಿ “ಸುರಕ್ಷಿತ ಮತ್ತು ಸ್ಥಿರವಾಗಿದೆ” ಎಂದು ಹೇಳಿದೆ.
ವರ್ಷಗಳ ಕಾಲ ಅಸ್ಸಾದ್ ಆಡಳಿತವನ್ನು ಬೆಂಬಲಿಸಿದ ಹಿಜ್ಬುಲ್ಲಾ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಹೆಜ್ಬೊಲ್ಲಾಹ್ “ತನ್ನ ಹೋರಾಟಗಾರರಿಗೆ ಹೋಮ್ಸ್ ಪ್ರದೇಶದಿಂದ ಹಿಂದೆ ಸರಿಯುವಂತೆ ಸೂಚಿಸಿದೆ, ಕೆಲವರು ಲಟಾಕಿಯಾಕ್ಕೆ (ಸಿರಿಯಾದಲ್ಲಿ) ಮತ್ತು ಇತರರು ಲೆಬನಾನ್‌ನ ಹರ್ಮೆಲ್ ಪ್ರದೇಶಕ್ಕೆ ಹೋಗುತ್ತಿದ್ದಾರೆ” ಎಂದು ಮೂಲವೊಂದು ಎಎಫ್‌ಪಿಗೆ ತಿಳಿಸಿದೆ.
. ದಮಾಸ್ಕಸ್ ಉಪನಗರದಲ್ಲಿ, ಪ್ರತಿಭಟನಾಕಾರರು ಅಸ್ಸಾದ್ ಅವರ ತಂದೆ ದಿವಂಗತ ನಾಯಕ ಹಫೀಜ್ ಅಲ್-ಅಸ್ಸಾದ್ ಅವರ ಪ್ರತಿಮೆಯನ್ನು ಉರುಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.
” ಪಲಾಯನ” ಮಾಡಿದ ನೂರಾರು ಸಿರಿಯನ್ ಸೈನಿಕರಿಗೆ ಬಾಗ್ದಾದ್ ಅವಕಾಶ ನೀಡಿದೆ ಎಂದು ಇರಾಕಿನ ಭದ್ರತಾ ಮೂಲವು AFP ಗೆ ತಿಳಿಸಿದೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಬಶರ್ ಅಲ್-ಅಸ್ಸಾದ್ ಆಡಳಿತದ ಅಂತ್ಯವು 13 ವರ್ಷಗಳ ದಂಗೆ ಕಾರಣವಾಗಿದೆ. ಅದು ಅಧ್ಯಕ್ಷ ಅಸ್ಸಾದ್ ವಿರುದ್ಧ ಶಾಂತಿಯುತ ದಂಗೆಯಾಗಿ ಪ್ರಾರಂಭವಾಯಿತು ಮತ್ತು ಸಿರಿಯಾವನ್ನು ಧ್ವಂಸಗೊಳಿಸಿದ ಪೂರ್ಣ ಪ್ರಮಾಣದ ಅಂತರ್ಯುದ್ಧವಾಗಿ ಮಾರ್ಪಟ್ಟಿತು.
ಹಯಾತ್ ತಹ್ರೀರ್ ಅಲ್-ಶಾಮ್ ಅನ್ನು 2012 ರಲ್ಲಿ ಅಲ್-ನುಸ್ರಾ ಹೆಸರಿನಲ್ಲಿ ರಚಿಸಲಾಯಿತು. ಇದು ಮುಂದಿನ ವರ್ಷ ಅಲ್-ಖೈದಾಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿತು. ಆದಾಗ್ಯೂ, 2016 ರಲ್ಲಿ, ಇದು ಅಲ್-ಖೈದಾದೊಂದಿಗೆ ಸಂಬಂಧವನ್ನು ಮುರಿದುಕೊಂಡು ಹಯಾತ್ ತಹ್ರೀರ್ ಅಲ್-ಶಾಮ್ ಎಂಬ ಹೆಸರನ್ನು ಪಡೆದುಕೊಂಡಿತು. ಅಮೆರಿಕ ಮತ್ತು ಯುಕೆ ಸೇರಿದಂತೆ ಜಾಗತಿಕ ಶಕ್ತಿಗಳು ಇದನ್ನು ಅಲ್-ಖೈದಾ ಅಂಗಸಂಸ್ಥೆಯಾಗಿ ಈಗಲೂ ನೋಡುತ್ತಿವೆ. ಸಂಘಟನೆಯು ಇತ್ತೀಚಿನ ದಿನಗಳಲ್ಲಿ ತನ್ನ ಇಮೇಜ್ ಅನ್ನು ಮೃದುಗೊಳಿಸಲು ಪ್ರಯತ್ನಿಸಿದೆ ಮತ್ತು ತಾನು ನಿಯಂತ್ರಿಸುವ ಪ್ರದೇಶಗಳಲ್ಲಿನ ಅಲ್ಪಸಂಖ್ಯಾತ ಸಮೂಹಗಳು ಯಾವುದೇ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದೆ.
ಹಯಾತ್ ತಹ್ರೀರ್ ಅಲ್-ಶಾಮ್ ಇದ್ಲಿಬ್ ಮತ್ತು ಅಲೆಪ್ಪೊದಲ್ಲಿ ತನ್ನ ಅಧಿಕಾರವನ್ನು ಕ್ರೋಢೀಕರಿಸಿತು ಮತ್ತು ಪ್ರದೇಶದಲ್ಲಿ ಆಡಳಿತ ನಿರ್ವಹಿಸಲು ಸಿರಿಯನ್ ಸಾಲ್ವೇಶನ್ ಸರ್ಕಾರವನ್ನು ರಚಿಸಿತು. 2020 ರಲ್ಲಿ, ಇದ್ಲಿಬ್ ಅನ್ನು ಮರುಪಡೆಯಲು ಬಶರ್ ಅಲ್-ಅಸ್ಸಾದ್ ಆಡಳಿತ ಮುಂದಾಗುವುದನ್ನು ತಡೆಯಲು ಟರ್ಕಿ ಮತ್ತು ರಷ್ಯಾ ಕದನ ವಿರಾಮವನ್ನು ಮಧ್ಯಸ್ಥಿಕೆ ವಹಿಸಿದವು.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಕಳೆದ ಎರಡು ತಿಂಗಳುಗಳಲ್ಲಿ, ಬಂಡುಕೋರರು ತಮ್ಮ ಆಕ್ರಮಣ ತೀವ್ರಗೊಳಿಸಿದರು. ಸಿರಿಯನ್ ಸರ್ಕಾರದ ಮಿತ್ರರಾಷ್ಟ್ರಗಳು ಇತರ ಘರ್ಷಣೆಗಳಲ್ಲಿ ತೊಡಗಿಕೊಂಡಿದ್ದರಿಂದ ಬಂಡುಕೋರರು ತಮ್ಮ ಆಕ್ರಮಣವನ್ನು ತೀವ್ರಗೊಳಿಸಿದರು. ಇಸ್ರೇಲ್ ಆಕ್ರಮಣದ ನಂತರ ಹಿಜ್ಬುಲ್ಲಾ ಮತ್ತು ಇರಾನ್ ಹೊಡೆತ ಅನುಭವಿಸಿವೆ ಮತ್ತು ರಷ್ಯಾ ಉಕ್ರೇನ್ ವಿರುದ್ಧ ಹೋರಾಡುತ್ತಿದೆ. ಇದು ಬಶರ್ ಅಲ್-ಅಸ್ಸಾದ್ ಬೆಂಬಲಕ್ಕೆ ಯಾರೂ ಬರದಂತೆ ಮಾಡಿತು.
ಸಿರಿಯಾದ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ತೊಡಗಿಸಿಕೊಳ್ಳುವುದು ಬೇಡ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಸಿರಿಯಾದ ಭೂಪ್ರದೇಶವನ್ನು “ಭಯೋತ್ಪಾದಕ ಗುಂಪು ನಿಯಂತ್ರಣಕ್ಕೆ ತೆಗೆದುಕೊಳ್ಳಲು” ಅನುಮತಿಸುವುದು “ಅಸ್ವೀಕಾರಾರ್ಹ” ಎಂದು ಹೇಳಿದ್ದಾರೆ. ರಷ್ಯಾ ಮತ್ತು ಇರಾನ್‌ ಯುದ್ಧದ ಸಮಯದಲ್ಲಿ ಅಸ್ಸಾದ್ ಸರ್ಕಾರ ಮತ್ತು ಸೈನ್ಯವನ್ನು ಬೆಂಬಲಿಸಿದವು.
ಉತ್ತರ ಸಿರಿಯಾದಲ್ಲಿ ಕೆಲವು ಸಶಸ್ತ್ರ ಗುಂಪುಗಳನ್ನು ಬೆಂಬಲಿಸುವ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಸರ್ಕಾರವು ಸಿರಿಯಾ “ಯುದ್ಧ, ರಕ್ತ ಮತ್ತು ಕಣ್ಣೀರಿನಿಂದ ಬೇಸತ್ತಿದೆ” ಎಂದು ಶನಿವಾರ ಹೇಳಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement