ಹರಿದ್ವಾರ: ಉತ್ತರಾಖಂಡದ ಮಾಜಿ ಬಿಜೆಪಿ ನಾಯಕಿಯ ಗೆಳೆಯ ಮತ್ತು ಆತನ ಸಹಾಯಕ ಅವಳ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಇದಕ್ಕೆ ಮಹಿಳೆಯೇ ಅವಕಾಶ ನೀಡಿದ್ದಾಳೆ ಎಂಬ ಆರೋಪ ಹೊರಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ 13 ವರ್ಷದ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹುಡುಗಿಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿ ಮಹಿಳೆ, ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ನಾಯಕಿ ಮತ್ತು ಆಕೆಯ ಗೆಳೆಯ (ಅಪ್ರಾಪ್ತ ವಯಸ್ಕಳ ಗುರುತನ್ನು ಗೌಪ್ಯವಾಗಿಡಲು ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ) ಅವರನ್ನು ಬುಧವಾರ ಹರಿದ್ವಾರದ ಹೊಟೇಲ್ನಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಮೀರತ್ನ ಶಹಪುರದಲ್ಲಿ ಬುಧವಾರ ತಡರಾತ್ರಿ ಮಹಿಳೆಯ ಗೆಳೆಯನ ಸಹಾಯಕನನ್ನು ಸಹ ಬಂಧಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಕೊಟ್ವಾಲಿ ರಾಣಿಪುರದಲ್ಲಿ 245/25 ಸೆಕ್ಷನ್ 70(2), 351(3), 3(5) ಬಿಎನ್ಎಸ್ ಮತ್ತು 3(ಎ)/4(2), 5(ಎಲ್)/6, 16/17 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹುಡುಗಿಯ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಆಘಾತಕಾರಿ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ. ತಂದೆಯ ದೂರಿನ ಪ್ರಕಾರ, ಅವರ 13 ವರ್ಷದ ಮಗಳನ್ನು ಅವರಿಂದ ದೂರವಾದ ಪತ್ನಿ ಜನವರಿ 2025 ರಲ್ಲಿ ತನ್ನ ಗೆಳೆಯ ಮತ್ತು ಆತನ ಸಹಾಯಕನೊಂದಿಗೆ ಬಿಎಚ್ಇಎಲ್ ಕ್ರೀಡಾಂಗಣಕ್ಕೆ ಕಾರಿನಲ್ಲಿ ಕರೆದೊಯ್ದರು. ತನ್ನ ಹೆಂಡತಿಯ ಒಪ್ಪಿಗೆಯೊಂದಿಗೆ, ಇಬ್ಬರು ಪುರುಷರು ಆಗ್ರಾ, ವೃಂದಾವನ ಮತ್ತು ಹರಿದ್ವಾರದಲ್ಲಿ ಐದು ತಿಂಗಳ ಕಾಲ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆಗ್ರಾ ಮತ್ತು ವೃಂದಾವನಕ್ಕೆ ಭೇಟಿ ನೀಡಲು ಪೊಲೀಸ್ ತಂಡಗಳು
ಇಬ್ಬರು ಆಕೆಯ ತಾಯಿಯ ಒಪ್ಪಿಗೆಯೊಂದಿಗೆ ಮತ್ತು ಆಕೆಯ ಸಮ್ಮುಖದಲ್ಲಿ ಅಪರಾಧವನ್ನು ಎಸಗಿದ್ದಾರೆ, ಮತ್ತು ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಬಾಲಕಿಯ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಣಿಪುರ ಕೊತ್ವಾಲಿಯ ಉಸ್ತುವಾರಿ ಕಮಲಮೋಹನ ಭಂಡಾರಿ ಅವರು, ಆರೋಪಿ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡುತ್ತಿದ್ದಳು ಮತ್ತು ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆರೋಪಿ ಮಹಿಳೆ ಹರಿದ್ವಾರದ ಶಿವ ಮೂರ್ತಿ ಚೌಕ್ನಲ್ಲಿರುವ ಹೊಟೇಲ್ನಲ್ಲಿ ತನ್ನ ಗೆಳೆಯನೊಂದಿಗೆ ವಾಸಿಸುತ್ತಿದ್ದಳು. ಲೈಂಗಿಕ ದೌರ್ಜನ್ಯ ನಡೆದ ವೃಂದಾವನ ಮತ್ತು ಆಗ್ರಾಕ್ಕೆ ಪೊಲೀಸರ ತಂಡವನ್ನು ಕಳುಹಿಸಲಾಗುತ್ತಿದೆ ಎಂದು ಭಂಡಾರಿ ಹೇಳಿದರು. ಪೊಲೀಸರು ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಮಹಿಳೆ ತನ್ನ ಮಗಳೊಂದಿಗೆ ಹೋಗಿರುವ ಎಲ್ಲಾ ಸ್ಥಳಗಳಿಗೆ ಹೋಗಿ ಹುಡುಗಿ ಹೇಳಿದಂತೆ ಘಟನೆಯ ಪುರಾವೆಗಳನ್ನು ಸಂಗ್ರಹಿಸುತ್ತಾರೆ” ಎಂದು ಭಂಡಾರಿ ಹೇಳಿದರು.
ತನಿಖಾಧಿಕಾರಿಗಳು ವಶಪಡಿಸಿಕೊಂಡಿರುವ ಆರೋಪಿ ಮಹಿಳೆಯ ಫೋನ್ನಿಂದ ಆಕೆಯ ಕರೆ ವಿವರಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣವೊಣದರಲ್ಲಿ ಮಹಿಳೆ ಹೆಸರು ಕೇಳಿಬಂದ ನಂತರ ಆಕೆಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಮಹಿಳೆ ಆಗಸ್ಟ್ 2024 ರಿಂದ ಯಾವುದೇ ಪಕ್ಷದ ಹುದ್ದೆಯನ್ನು ಹೊಂದಿಲ್ಲ ಎಂದು ಹೇಳಲಾಗಿದೆ.
ಉತ್ತರಾಖಂಡ ಮಹಿಳಾ ಆಯೋಗದಿಂದ ತನಿಖೆ
ಏತನ್ಮಧ್ಯೆ, ಉತ್ತರಾಖಂಡ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ ಕಂಡ್ವಾಲ್ ಅವರು ಆಘಾತಕಾರಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ಗೊತ್ತಾದ ನಂತರ ಹರಿದ್ವಾರ ಪೊಲೀಸರಿಂದ ಪ್ರಕರಣದ ವಿವರಗಳನ್ನು ಕೋರಿದ್ದಾರೆ. ಎಸ್ಪಿ ಪಂಕಜ ಗೈರೋಲಾ ಅವರು ಮಹಿಳಾ ಆಯೋಗದ ಅಧ್ಯಕ್ಷರಿಗೆ ಪ್ರಕರಣದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಮಹಿಳಾ ಆಯೋಗದಿಂದ ಎಲ್ಲಾ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ