ಪ್ರತಿ ಲೀಟರ್‌ ಪೆಟ್ರೋಲಿಗೆ ೨.೫ ರೂ. ಕೃಷಿ ಸೆಸ್‌

ನವದೆಹಲಿ:  2021-22ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಇಂಧನದ ಮೇಲೆ ಕೃಷಿ ಸೆಸ್ ಅನ್ನು ಪ್ರಸ್ತಾಪಿಸಲಾಗಿದೆ.   ಬಜೆಟ್ ಅಡಿಯಲ್ಲಿ, ಸರ್ಕಾರವು ಪೆಟ್ರೋಲಿಗೆ  ಪ್ರತಿ ಲೀಟರಿಗೆ 2.5 ರೂ. ಹಾಗೂ ಪ್ರತಿ ಲೀಟರ್‌ ಡೀಸೆಲ್‌ಗೆ 4 ರೂ.ಗಳ ಕೃಷಿ ಸೆಸ್ ಅನ್ನು ಹಾಕುವ ಬಗ್ಗೆ  ಪ್ರಸ್ತಾಪಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ … Continued

೭೫ ವರ್ಷ ಮೇಲ್ಪಟ್ಟವರಿಗೆ ತೆರಿಗೆ ರಿಟರ್ನ್ಸ್‌ ವಿನಾಯ್ತಿ

  2021-22ರ ಆರ್ಥಿಕ ವರ್ಷಕ್ಕೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ  ಯಾವುದೇ ಪ್ರಮುಖ ಪ್ರಕಟಣೆಗಳನ್ನು ಮಾಡಿಲ್ಲ. ಇದರಿಂದ ಸಂಬಳ ಪಡೆಯುವ ತೆರಿಗೆದಾರರಿಗೆ ಸ್ವಲ್ಪ ನಿರಾಸೆಯಾಗಿದೆ. ಆದರೆ  ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರಿಗೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ  ಘೋಷಿಸಿದ್ದಾರೆ.  75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ … Continued

ತೆರಿಗೆದಾರರಿಗೆ ದೊಡ್ಡ ರಿಲೀಫ್‌

ನವದೆಹಲಿ,: ಗಂಭೀರ ತೆರಿಗೆ ಪ್ರಕರಣಗಳನ್ನು ಹೊರತುಪಡಿಸಿ ತೆರಿಗೆದಾರರಿಗೆ ದೊಡ್ಡ ಪರಿಹಾರವಾಗಿ  ಆದಾಯ ತೆರಿಗೆ ಕಾಯ್ದೆಯಡಿ ಮೌಲ್ಯಮಾಪನ ಕಾರ್ಯವಿಧಾನಗಳನ್ನು ಮತ್ತೆ ತೆರೆಯುವ ಸಮಯ ಮಿತಿಯನ್ನು 6 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ. 50 ಲಕ್ಷ  ರೂ. ಅಥವಾ ಅದಕ್ಕಿಂತ ಹೆಚ್ಚಿನ ಆದಾಯ   ಮರೆಮಾಚುವ ಪುರಾವೆಗಳ  ಮರು-ತೆರೆಯುವಿಕೆಯನ್ನು    ಪಿಆರ್  ಆದಾಯ ತೆರಿಗೆ ಮುಖ್ಯ ಆಯುಕ್ತರ ಅನುಮೋದನೆಯೊಂದಿಗೆ ಮಾತ್ರ … Continued

ಕೇಂದ್ರ ಬಜೆಟ್‌:ಮೂಲ ಸೌಕರ್ಯಕ್ಕೆ ಉತ್ತೇಜನ

  ನವ ದೆಹಲಿ: ಭಾರತದ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬದ್ಧತೆಯೊಂದಗೆ ಹಣಕಾಸು ಸಚಿವರು  ಹಲವಾರು ಘೋಷಣೆಗಳನ್ನು ಮಾಡಿದ್ದು,   ಮುಂಬರುವ ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ವಲಯಕ್ಕೆ ಭಾರಿ ಉತ್ತೇಜನ ನೀಡುವ ನಿರೀಕ್ಷೆಯಿದೆ. ಸೋಮವಾರ,  ನಿರ್ಮಲಾ, ತಮ್ಮ ಬಜೆಟ್ ಭಾಷಣದಲ್ಲಿ ರಾಷ್ಟ್ರದಾದ್ಯಂತ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಗಳಿಗೆ ಮಾರ್ಚ್ 2022 ರೊಳಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.  … Continued

ಬಜೆಟ್‌ ೨೦೨೧-೨೨: ಆರ್ಥಿಕ ಚೇತರಿಕೆಗೆ ಹಲವಾರು ಕ್ರಮ

ನವ ದೆಹಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ್ದಾರೆ. ಅವರು ಕೊರೋನಾದಿಂದ(ಕೋವಿಡ್ -19)  ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯ ಚೇತರಿಕೆಗೆ ನೆರವಾಗುವ ಅನೇಕ ಕ್ರಮಗಳನ್ನು ಪ್ರಕಟಿಸಿದರು. ಕೆಲವೇ ತಿಂಗಳಲ್ಲಿ ನಡೆಯಲಿರುವ  ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಮೂಲಸೌಕರ್ಯ ಯೋಜನೆಗಳನ್ನು ಪ್ರಕಟಿಸುವ ಮೂಲಕ ಕೇಂದ್ರದ ಎನ್‌ಡಿಎ … Continued

ಮ್ಯಾನ್ಮಾರ್‌ನಲ್ಲಿ ಮತ್ತೆ ಸೈನ್ಯ ಕ್ರಾಂತಿ

ಯಾಂಗೊನ್: ನಾಗರಿಕ ನಾಯಕ ಆಂಗ್ ಸಾನ್ ಸೂಕಿ ಮತ್ತು ಅವರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ  ಮ್ಯಾನ್ಮಾರ್ ಮಿಲಿಟರಿ ಸೋಮವಾರ ಆಡಳಿತವನ್ನು ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯ ನಂತರ ಮೊದಲ ಸಂಸತ್ ಅಧಿವೇಶನ ನಡೆಯಬೇಕಿದ್ದ   ದಿನವೇ  ಸೇನೆಯು ಸೂಕಿ ಮತ್ತು ಇತರ ಉನ್ನತ ನಾಗರಿಕ ನಾಯಕರನ್ನು ವಶಕ್ಕೆ ಪಡೆಯಿತು. 2017ರಲ್ಲಿ ರೋಹಿಂಗ್ಯಾ … Continued

ಕೃಷಿ ಕಾನೂನು: ಪ್ರತ್ಯೇಕ ಚರ್ಚೆಗೆ ವಿಪಕ್ಷಗಳ ಒತ್ತಾಯ

ನವ ದೆಹಲಿ: ಕೃಷಿ ಕಾನೂನುಗಳಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಪ್ರತ್ಯೇಕ ಚರ್ಚೆ ನಡೆಸಬೇಕು ಎಂಬ  ಪ್ರತಿಪಕ್ಷದ ಬೇಡಿಕೆಗೆ ಕೇಂದ್ರ ಸರ್ಕಾರ ಸಿದ್ಧವಾಗಿಲ್ಲ. ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ರೈತರ ಆಂದೋಲನದ ಬಗ್ಗೆ ಪ್ರಧಾನವಾಗಿ  ಚರ್ಚೆ  ನಡೆಯುವ ಸಾಧ್ಯತೆ ಬಗ್ಯಿಗೆ ಸರ್ಕಾರ ಏನೂ ಹೇಳಿಲ್ಲ. ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಭಾನುವಾರ ಮೇಲ್ಮನೆಯ  (ರಾಜ್ಯಸಭೆ) ನಾಯಕರ … Continued

ಬಿಎಸ್ ವೈ ಸಿಂಹ ಘರ್ಜನೆ ಎಲ್ಲಿ ಅಡಗಿಹೋಯಿತು?

  ಅರುಣಕುಮಾರಹಬ್ಬು ಕರ್ನಾಟಕದ ರಾಜಕೀಯದಲ್ಲಿ ನಿರಂತರ ಸಿಂಹ ಘರ್ಜನೆ ಮಾಡುತ್ತಾ ಮೆರೆಯುತ್ತಿದ್ದ ಸಿಂಹದ ಧ್ವನಿ ಅಡಗಿ ಹೋಯಿತೇ? ಏನಾಯಿತು ಈ ಸಿಂಹಕ್ಕೆ? ಉತ್ಸಾಹ ಕುಸಿಯಿತೇ? ಇಲ್ಲವೇ ರಾಜಕೀಯದ ಒಳಸುಳಿಗಳಿಗೆ ಸಿಕ್ಕು ದುರ್ಬಲಗೊಂಡಿತೇ? ರಾಜಕೀಯದ ಓಘ ಹೀಗೇ ಎಂದು ಹೇಳುವಂತಿಲ್ಲ. ಅದು ಎಂದಿಗಾದರೂ ಯಾವುದಾದರೂ ತಿರುವು ಪಡೆಯಬಹುದು ಎನ್ನುವುದಕ್ಕೆಈಗಿನ ರಾಜಕೀಯ ಬೆಳವಣಿಗೆಗಳುಉದಾಹರಣೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ … Continued