ನಲ್ಲಿ ನೀರು ವಿವಾದ: ಕೇಂದ್ರ ಸಚಿವರ ಇಬ್ಬರು ಸೋದರಳಿಯಂದಿರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

ಪಾಟ್ನಾ: ಹರ್ ಘರ್ ಕೋ ನಲ್-ಜಲ್ ಯೋಜನೆಯಡಿ ಸರ್ಕಾರ ಸ್ಥಾಪಿಸಿದ ನಲ್ಲಿಯಿಂದ ಬಕೆಟ್ ನೀರು ತರುವ ಜಗಳ ವಿಕೋಪಕ್ಕೆ ಹೋಗಿ ಒಬ್ಬ ಸಹೋದರ ಮತ್ತೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ಬಿಹಾರದ ನೌಗಾಚಿಯಾ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಪರ್ಬಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗತ್‌ಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಶ್ವಜೀತ್ ಯಾದವ್ ಮತ್ತು ಅವರ ಹಿರಿಯ ಸಹೋದರ ಜಯಜೀತ್ ಯಾದವ್ ಅವರು ನೀರಿನ ವಿಷಯದಲ್ಲಿ ಜಗಳವಾಡಿದರು.
ವಿಶ್ವಜೀತ್ ಪಿಸ್ತೂಲ್ ಹೊರತೆಗೆದು ಜೈಜೀತ್ ಮೇಲೆ ಗುಂಡು ಹಾರಿಸಿದಾಗ ವಾಗ್ವಾದವು ಉಲ್ಬಣಗೊಂಡಿತು. ಆದರೆ, ಜಯಜೀತ್ ಆಯುಧವನ್ನು ಕಸಿದುಕೊಂಡು ಪ್ರತಿಯಾಗಿ ಗುಂಡು ಹಾರಿಸಿದ್ದು, ವಿಶ್ವಜೀತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಾಯಿ ಹೀನಾ ದೇವಿ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಅವರಿಗೂ ಗುಂಡು ತಗುಲಿದೆ.

ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಓಂ ಪ್ರಕಾಶ ಅವರು ವಿಶ್ವಜೀತ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು, ಜಯಜೀತ್ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಫೊರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಅಪರಾಧದಲ್ಲಿ ಬಳಸಿದ ಆಯುಧವನ್ನು ಮರುಪಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ,” ಅವರು ಹೇಳಿದರು.
ನೌಗಾಚಿಯಾ ಪೊಲೀಸ್ ವರಿಷ್ಠಾಧಿಕಾರಿ ಪ್ರೇರಣಾ ಕುಮಾರ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. “ತನಿಖಾಧಿಕಾರಿಯು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ನಾವು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಜೈ ಜೀತ್ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದು, ಈ ಹಿಂದೆ ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಸ್ಥಳದಿಂದ ಲೈವ್ ಕಾರ್ಟ್ರಿಡ್ಜ್ ಮತ್ತು ಖಾಲಿ ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜಗತ್‌ಪುರ ಪಂಚಾಯತದ ಮುಖ್ಯಸ್ಥ ಪ್ರದೀಪ್ ಯಾದವ್ ಅವರು, ಸರ್ಕಾರದ ಯೋಜನೆಯಡಿ ತಮ್ಮ ನಿವಾಸದ ಹೊರಗೆ ಅಳವಡಿಸಿರುವ ನಲ್ಲಿಯಿಂದ ನೀರು ಸೇದುವ ವಿಚಾರದಲ್ಲಿ ವಿವಾದ ಆರಂಭವಾಗಿದೆ ಎಂದು ಖಚಿತಪಡಿಸಿದ್ದಾರೆ.
ಜಗಳವಾಡಿಕೊಂಡ ಸಹೋದರರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ನಿತ್ಯಾನಂದ ರೈ ಅವರ ಹತ್ತಿರದ ಸಂಬಂಧಿಗಳು ಎಂದು ವರದಿಯಾಗಿದೆ. ಅವರ ತಂದೆ ಬುಲ್ಲೋ ಯಾದವ್ ರೈ ಅವರ ಸೋದರ ಸಂಬಂಧಿ ಎಂದು ಹೇಳಲಾಗುತ್ತದೆ ಮತ್ತು ಹೀನಾ ದೇವಿ ಸಚಿವರ ಸೋದರಸಂಬಂಧಿ ಎಂದು ವರದಿಯಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement