ಸುಳ್ಳು ಭರವಸೆ, ವಂಚನೆ ಮಾಡುವ ಚೀನಾ ಕಾಲ್‌ ಸೆಂಟರ್‌ಗಳ ಕೆಲಸಕ್ಕೆ ಬಲವಂತವಾಗಿ ದೂಡುತ್ತಿದ್ದ ವಂಚಕನನ್ನು 2500 ಕಿಮೀ ಬೆನ್ನಟ್ಟಿ ಹಿಡಿದ ಪೊಲೀಸರು…!

ನವದೆಹಲಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಕಲಿ ಕಾಲ್‌ ಸೆಂಟರ್‌ಗಳ ಮೂಲಕ ಸೈಬರ್‌ ಅಪರಾಧ ಎಸಗಲು ಭಾರತದ ಯುವಕರನ್ನು ಬಲವಂತಪಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶನಿವಾರ ಹೈದರಾಬಾದ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಇದಕ್ಕಾಗಿ 2,500 ಕಿ.ಮೀ. ದೂರದ ವರೆಗೆ ಆತನನ್ನು ಬೆನ್ನು ಹಿಡಿದುಬಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ಕಮ್ರಾನ್ ಹೈದರ್ ಅಲಿಯಾಸ್ ಜೈದಿ ಎಂಬಾತನ ಮಾಹಿತಿ ನೀಡಿದವರಿಗೆ ₹ 2 ಲಕ್ಷ ಬಹುಮಾನ ಕೊಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿತ್ತು.
ಕಮ್ರಾನ್ ಹೈದರ್ ಅಲಿಯಾಸ್ ಜೈದಿ ಮತ್ತು ಆತ ಸಹಚರರು ಬಡ ಭಾರತೀಯ ಯುವಕರನ್ನು ಆಗ್ನೇಯ ಏಷ್ಯಾದ ಗೋಲ್ಡನ್ ಟ್ರಯಾಂಗಲ್ ಪ್ರದೇಶಕ್ಕೆ ಸಾಗಿಸುತ್ತಿದ್ದರು, ಅದು ಥೈಲ್ಯಾಂಡ್, ಲಾವೋಸ್ ಮತ್ತು ಮ್ಯಾನ್ಮಾರ್ ಗಡಿಗಳು ಪರಸ್ಪರ ಸೇರುವ ಸ್ಥಳವಾಗಿದೆ. ನಂತರ ಜನರನ್ನು ವಂಚಿಸುವ ಚೀನಾದ ಕಂಪನಿಗಳಲ್ಲಿ ಕೆಲಸ ಮಾಡಲು ಅವರನ್ನು ಬಲವಂತವಾಗಿ ನೂಕುತ್ತಿದ್ದರು. ಅವರು ವಿದೇಶಕ್ಕೆ ಬಂದ ತಕ್ಷಣ ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು ಅವರಿಗೆ ಸೈಬರ್ ಅಪರಾಧಗಳನ್ನು ಮಾಡುವಂತೆ ಬಲವಂತಪಡಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ದೆಹಲಿ ಪೊಲೀಸರ ಪ್ರಕಾರ, ಜೈದಿ ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ ಮತ್ತು ಆತನನ್ನು ಹಿಡಿಯಲು ಪೊಲೀಸರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ತಂಡಗಳನ್ನು ನಿಯೋಜಿಸಿದ್ದರು.ಗುಪ್ತಚರ ಮಾಹಿತಿಗಳು ಮತ್ತು ತಾಂತ್ರಿಕ ಕಣ್ಗಾವಲಿನ ನಂತರ, ಜೈದಿಯ ಸ್ಥಳವನ್ನು ಅಂತಿಮವಾಗಿ ಹೈದರಾಬಾದ್‌ನಲ್ಲಿ ಪತ್ತೆ ಮಾಡಲಾಯಿತು. ಹೈದರಾಬಾದಿನ ನಾಂಪಲ್ಲಿ ರೈಲು ನಿಲ್ದಾಣದ ಬಳಿ ತಂಡವು 2,500 ಕಿಲೋಮೀಟರ್‌ಗಳ ಪ್ರಯಾಣದ ಸುದೀರ್ಘ ಪರಿಶ್ರಮದ ನಂತರ ಆತನನ್ನು ಮತ್ತೊಂದು ಅಡಗುತಾಣಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಸೆಲ್) ಮನೋಜ ಸಿ. ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಮೇ 27 ರಂದು ನರೇಶ ಲಖ್ವತ್ ಎಂಬ ವ್ಯಕ್ತಿಯ ದೂರಿನ ಮೇರೆಗೆ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ ಈತನ ವಂಚನೆ ಬೆಳಕಿಗೆ ಬಂದಿದೆ. ತಾನು ಕೆಲಸ ಹುಡುಕುತ್ತಿರುವಾಗ ಅಲಿ ಇಂಟರ್‌ನೇಷನ್ ಸರ್ವೀಸ್ ಎಂಬ ಹೆಸರಿನ ಸಲಹಾ ಸಂಸ್ಥೆಯನ್ನು ಕಂಡುಕೊಂಡೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು ಸಂಸ್ಥೆಯ ಮೂಲಕ ಥೈಲ್ಯಾಂಡ್ ಮತ್ತು ಲಾವೋಸ್‌ನಿಂದ ಉದ್ಯೋಗದ ಆಫರ್‌ ಪಡೆದೆ. ಕಂಪನಿಯು ಅಂತಿಮವಾಗಿ ತನ್ನನ್ನು ಥೈಲ್ಯಾಂಡ್‌ಗೆ ಕಳುಹಿಸಿತು, ಅಲ್ಲಿ ತನ್ನ ಪಾಸ್‌ಪೋರ್ಟ್ ಅನ್ನು ಕಸಿದುಕೊಳ್ಳಲಾಯಿತು ಮತ್ತು ತನಗೆ ಚೀನಾದ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಬಲವಂತ ಮಾಡಲಾಯಿತು ಎಂದು ಲಖ್ವತ್ ಹೇಳಿದ್ದಾರೆ. ಚೀನಾದ ಕಂಪನಿಯು ಭಾರತೀಯರನ್ನು ಆನ್‌ಲೈನ್‌ನಲ್ಲಿ ಸ್ಕ್ಯಾನ್ ಮಾಡುತ್ತಿತ್ತು ಎಂದು ಲಖ್ವತ್ ಪೊಲೀಸರಿಗೆ ತಿಳಿಸಿದ್ದಾರೆ.

ಇದರ ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಲಾಗಿತ್ತು. ಎನ್‌ಐಎ ನಡೆಸಿದ ತನಿಖೆಯು ಆನ್‌ಲೈನ್‌ ಮೋಸದ ಸಂಪೂರ್ಣ ಮಾಡ್ಯೂಲ್ ಅನ್ನು ಬಹಿರಂಗಪಡಿಸಿತು ಮತ್ತು ಯುವಕರನ್ನು ಗೋಲ್ಡನ್ ಟ್ರಯಾಂಗಲ್‌ಗೆ ಕಳುಹಿಸಲಾಗುತ್ತಿತ್ತು, ಅಲ್ಲಿ ಅವರಿಗೆ ಭಾರತೀಯ, ಯುರೋಪಿಯನ್ ಮತ್ತು ಅಮೇರಿಕನ್ ಪ್ರಜೆಗಳನ್ನು ಆನ್‌ಲೈನ್‌ನಲ್ಲಿ ವಂಚಿಸಲು ಬಲವಂತ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿತ್ತು. ಮಂಜೂರ್ ಆಲಂ ಅಲಿಯಾಸ್ ಗುಡ್ಡು, ಸಾಹಿಲ್, ಆಶಿಶ್ ಅಲಿಯಾಸ್ ಅಖಿಲ, ಪವನ ಯಾದವ್ ಅಲಿಯಾಸ್ ಅಫ್ಜಲ್ ಮತ್ತು ಇವರ ನಾಯಕ ಜೈದಿ ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಉದ್ಯೋಗಕ್ಕಾಗಿ ಭಾರತದಿಂದ ಹೊರ ದೇಶಗಳಿಗೆ ಕಳುಹಿಸಲ್ಪಟ್ಟವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಈ ಮಾನವ ಕಳ್ಳಸಾಗಾಣಿಕೆದಾರರು ತಮ್ಮ ಜಾಲದಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರಿಂದ ಕ್ರಿಪ್ಟೋಕರೆನ್ಸಿ ಮೂಲಕ ಹಣ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement