ನವದೆಹಲಿ: ಇಂದು, ಭಾನುವಾರ 2026ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಮಿಕಂಡಕ್ಟರ್ ಕ್ಷೇತ್ರಕ್ಕಾಗಿ 40,000 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದರು. ಸೆಮಿಕಂಡಕ್ಟರ್ ಮಿಷನ್ನ ವೇಗವನ್ನು ಹೆಚ್ಚಿಸಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0’ ಅನ್ನು ಅವರು ಪ್ರಕಟಿಸಿದರು. ಅಲ್ಲದೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅವಕಾಶ ನೀಡುವುದನ್ನು ಪ್ರಸ್ತಾಪಿಸಲಾಗಿದೆ.
ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಮಹಾತ್ಮ ಗಾಂಧಿ ಹೆಸರು ಯೋಜನೆಯನ್ನು ಘೋಷಿಸಿದೆ.
ಸೆಮಿಕಂಡಕ್ಟರ್ ಮಿಷನ್ 2.0: ಈ ಯೋಜನೆಯು ಸಂಪೂರ್ಣವಾಗಿ ಭಾರತೀಯ ಬೌದ್ಧಿಕ ಆಸ್ತಿ (IP) ಹೊಂದಿರುವ ಉಪಕರಣಗಳು ಮತ್ತು ಸಾಮಗ್ರಿಗಳನ್ನು ತಯಾರಿಸುವತ್ತ ಗಮನ ಹರಿಸಲಿದೆ. ಉದ್ಯಮ-ಚಾಲಿತ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳಿಗೆ ಆದ್ಯತೆ ನೀಡಲಾಗುವುದು.
ಚಿಪ್ ಉತ್ಪಾದನೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದಂತೆ, 2026ರಲ್ಲಿ ಭಾರತದಲ್ಲಿ ವಾಣಿಜ್ಯಿಕ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಆರಂಭವಾಗಲಿದೆ. ಈ ವರ್ಷ ನಾಲ್ಕು ಪ್ಲಾಂಟ್ಗಳು ಕಾರ್ಯಾರಂಭ ಮಾಡಲಿವೆ.
ಎಲೆಕ್ಟ್ರಾನಿಕ್ ಘಟಕಗಳ ಯೋಜನೆಗೆ 40,000 ಕೋಟಿ ರೂ. ಘೋಷಿಸಿದ ಬೆನ್ನಲ್ಲೇ ಇಎಂಎಸ್ (EMS) ಷೇರುಗಳ ಮೌಲ್ಯ ಏರಿಕೆಯಾಗಿದೆ.
ಬೆಂಗಳೂರು ಸೇರಿ ಏಳು ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆ ಘೋಷಣೆ
2026ರ ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಬೆಂಗಳೂರು -ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ನಡುವೆ ಬಹುಮಹತ್ವದ ಹೈಸ್ಪೀಡ್ ರೈಲು ಕಾರಿಡಾರ್ಅನ್ನು ಘೋಷಣೆ ಮಾಡಿದ್ದಾರೆ. ಇದಲ್ಲದೆ, ಮುಂಬೈನಿಂದ ಪುಣೆ, ಪುಣೆಯಿಂದ ಹೈದರಾಬಾದ್, ಹೈದರಾಬಾದ್ನಿಂದ ಚೆನ್ನೈ, ದೆಹಲಿಯಿಂದ ವಾರಣಾಸಿ ಹಾಗೂ ವಾರಣಾಸಿಯಿಂದ ಸಿಲಿಗುರಿಗೆ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲ ಮಾರ್ಗ ನಿರ್ಮಾಣ
ಪ್ರಮುಖ ಬಂದರು ಸಂಪರ್ಕಿಸಲು ಇದು ಸಹಕಾರಿ. ಇದರಿಂದ ರಫ್ತು ಉತ್ತೇಜನಕ್ಕೆ ಒತ್ತು.
ಪವರ್, ಸ್ಟೀಲ್, ರಿಫೈನರೀಸ್, ಕೆಮಿಕಲ್ ಸೇರಿ ಐದು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು.
2-3ನೇ ಹಂತದ ನಗರಗಳಿಗೆ ಮೂಲ ಸೌಕರ್ಯ ಹೆಚ್ಚಿಸಿ, ಭಾರತದ ಪ್ರತಿಯೊಂದೂ ನಗರವೂ ದೇಶದ ಆರ್ಥಿಕತೆಗೆ ಪುಷ್ಠಿ ನೀಡುವಂತೆ ಅಭಿವೃದ್ಧಿ ಪಡಿಸಲು ಆದ್ಯತೆ.
ಶಿಕ್ಷಣ ವಲಯದಲ್ಲಿ ಎಐಗೆ ಒತ್ತು
ಶಿಕ್ಷಣ ವಲಯದಲ್ಲಿ ಎಐ (Artificial Intelligence) ಅಥವಾ ಕೃತಕ ಬುದ್ಧಿಮತ್ತೆಗೆ ವಿಶೇಷ ಒತ್ತು ನೀಡಲಾಗಿದೆ. ಎಐ ಸಂಶೋಧನೆಗಾಗಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲು 500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಐಐಟಿಗಳನ್ನ ವಿಸ್ತರಣೆ ಮಾಡಿ, ಭವಿಲೈ, ಧಾರವಾಡ, ಗೋವಾ, ಜಮ್ಮು ಮತ್ತು ತಿರುಪತಿಯಲ್ಲಿ ಹೊಸ ಸೌಲಭ್ಯಗಳನ್ನ ಕಲ್ಪಿಸಲಾಗುವುದು.
ರಾಜ್ಯಗಳಿಗೆ ಅನುದಾನ ಮತ್ತು ಹಣಕಾಸು ಆಯೋಗ
16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ. 41 ರಷ್ಟು ಮುಂದುವರಿಸಲು ಸರ್ಕಾರ ಒಪ್ಪಿಕೊಂಡಿದೆ. 2026-27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಹೊಸ ಸಂಸ್ಥೆಗಳು: 3 ಹೊಸ ಏಮ್ಸ್ (AIIMS), 3 ಆಯುರ್ವೇದ ಸಂಸ್ಥೆಗಳು ಮತ್ತು ಒಂದು ವಿನ್ಯಾಸ ಶಾಲೆಯನ್ನು (Design School) ಘೋಷಿಸಲಾಗಿದೆ. ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದ, ಯೋಗ ಅಭಿವೃದ್ಧಿಗೆ ಯೋಜನೆ ಘೋಷಿಸಿದ ನಿರ್ಮಲಾ, ಮೆಡಿಕಲ್ ಟೂರಿಸಮ್ ಅಭಿವೃದ್ಧಇಗೆ ಐದು ಮೆಡಿಕಲ್ ರೀಜಿನಲ್ ಹಬ್ಸ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ವೈದ್ಯರು, ಪ್ಯಾರಾ ಮೆಡಿಕಲು ಪದವೀಧರರು ಹಾಗೂ ಹಲವರಿಗೆ ಉದ್ಯೋಗ ಸಿಗಲಿದೆ. ದೇಶದ ಮೂರು ಕಡೆ ಆಯುರ್ವೇದ ಸಂಸ್ಥೆಗಳನ್ನು ನಿರ್ಮಿಸಲು ನಿರ್ಧಾರ. ಖಾಸಗಿ ವಲಯದ ಜೊತೆ ಕೈ ಜೋಡಿಸಿ, ಮೆಡಿಕಲ್ ಹಬ್ ಅಭಿವೃದ್ಧಿಗೆ ಒತ್ತು.
ಉದ್ಯೋಗ ಸೃಷ್ಟಿ: ಮುಂದಿನ ಐದು ವರ್ಷಗಳಲ್ಲಿ ಆಪ್ಟೋಮೆಟ್ರಿ, ರೇಡಿಯಾಲಜಿ ಸೇರಿದಂತೆ 10 ವಿಭಾಗಗಳಲ್ಲಿ 1 ಲಕ್ಷ ಸಂಯೋಜಿತ ಆರೋಗ್ಯ ವೃತ್ತಿಪರರನ್ನು (Allied Health Professionals) ಸೃಷ್ಟಿಸುವ ಗುರಿ ಹೊಂದಲಾಗಿದೆ.
ಮಹಿಳಾ ಸಬಲೀಕರಣ: ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ಬಾಲಕಿಯರ ವಸತಿ ನಿಲಯ (Girls Hostel) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ವಿದೇಶಿ ಹೂಡಿಕೆ ಮತ್ತು ಷೇರು ಮಾರುಕಟ್ಟೆ
ವಿದೇಶಿ ಹೂಡಿಕೆದಾರರಿಗೆ ಅವಕಾಶ: ವಿದೇಶಿ ವ್ಯಕ್ತಿಗಳು ಇನ್ನು ಮುಂದೆ ನೇರವಾಗಿ ಭಾರತೀಯ ಷೇರುಗಳನ್ನು ಖರೀದಿಸಬಹುದು. ವೈಯಕ್ತಿಕ ಹೂಡಿಕೆ ಮಿತಿಯನ್ನು ಶೇ. 5 ರಿಂದ ಶೇ. 10 ಕ್ಕೆ ಏರಿಸಲಾಗಿದೆ. ಅಂತಹ ಎಲ್ಲಾ ಹೂಡಿಕೆದಾರರಿಗೆ ಸಂಯೋಜಿತ ಮಿತಿಯನ್ನು 10% ರಿಂದ 24% ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ
ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಷ್ಟ್ರೀಯ ಆತಿಥ್ಯ ಸಂಸ್ಥೆ (National Institute of Hospitality) ಸ್ಥಾಪನೆ, ಟ್ರೆಕ್ಕಿಂಗ್ ಅನುಭವ ಸುಧಾರಣೆ, ಪಕ್ಷಿ ವೀಕ್ಷಣೆ ಹಾದಿ ಮತ್ತು 15 ಪುರಾತತ್ವ ತಾಣಗಳ ಅಭಿವೃದ್ಧಿ.
ಧಾರ್ಮಿಕ ಪ್ರವಾಸೋದ್ಯಮ: ಎಲ್ಲಾ ಆಧ್ಯಾತ್ಮಿಕ ಮತ್ತು ಪರಂಪರೆಯ ಪ್ರಾಮುಖ್ಯತೆಯ ಸ್ಥಳಗಳನ್ನು ದಾಖಲಿಸಲು ಪ್ರಸ್ತಾಪಿಸಲಾಗಿದೆ.
ಇತರ ಪ್ರಮುಖ ಘೋಷಣೆಗಳು
ಪ್ರಾಣಿ ಸಂಗೋಪನೆ: ಖಾಸಗಿ ಪಶುವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಸಾಲದ ನೆರವು ಹಾಗೂ 20,000 ವೃತ್ತಿಪರರ ಸೇರ್ಪಡೆ.
ಆರೆಂಜ್ ಎಕಾನಮಿ: ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರಗಳಿಗೆ ಬೆಂಬಲ.


ನಿಮ್ಮ ಕಾಮೆಂಟ್ ಬರೆಯಿರಿ