ಸುಪ್ರೀಂ ಕೋರ್ಟ್ ತೀರ್ಪಿನ ಕೆಲವೇ ಗಂಟೆಗಳ ನಂತರ ಸೇವಾ ಕಾರ್ಯದರ್ಶಿಯನ್ನು ತೆಗೆದುಹಾಕಿದ ದೆಹಲಿ ಕೇಜ್ರಿವಾಲ್ ಸರ್ಕಾರ

ನವದೆಹಲಿ : ಅಧಿಕಾರಶಾಹಿಗಳ ನಿಯಂತ್ರಣ ಮತ್ತು ನಿಯೋಜನೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ ನಂತರ ದೆಹಲಿಯ ಅರವಿಂದ ಕೇಜ್ರಿವಾಲ್‌ ಸರ್ಕಾರ, ದೆಹಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್‌ ಮೋರೆ ಅವರನ್ನು ಎತ್ತಂಗಡಿ ಮಾಡಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಮುಖ ಆಡಳಿತಾತ್ಮಕ ಪುನರ್ರಚನೆಯ ಎಚ್ಚರಿಕೆಯೊಂದಿಗೆ ಹಲವು ವರ್ಗಾವಣೆಗಳಲ್ಲಿ ಮೊದಲನೆಯ ಕ್ರಮ ಕೈಗೊಂಡಿದ್ದಾರೆ. ಸುಪ್ರೀಂ … Continued

ಒಂದೇ ದಿನದಲ್ಲಿ ಹೊಸದಾಗಿ 1,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೆಹಲಿ, ಮಹಾರಾಷ್ಟ್ರ

ನವದೆಹಲಿ: ಮಹಾರಾಷ್ಟ್ರವು ಬುಧವಾರ 1,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಮತ್ತು ಒಂಬತ್ತು ಸಾವುಗಳನ್ನು ವರದಿ ಮಾಡಿದೆ. ರಾಜ್ಯವು 1,115 ಹೊಸ ಸೋಂಕುಗಳನ್ನು ವರದಿ ಮಾಡಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 5,421 ಕ್ಕೆ ಒಯ್ದಿದೆ. ಮುಂಬೈನಲ್ಲಿ ಅತಿ ಹೆಚ್ಚು 1,577 ಪ್ರಕರಣಗಳು, ನಂತರ ಥಾಣೆಯಲ್ಲಿ 953, ಪುಣೆಯಲ್ಲಿ 776 ಮತ್ತು ನಾಗ್ಪುರದಲ್ಲಿ 548 … Continued

ನಡ್ಡಾ ಭೇಟಿಯಿಂದ ಸಮಾಧಾನವಾಗಿದೆ, ಎರಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ: ಜಗದೀಶ ಶೆಟ್ಟರ್

ನವದೆಹಲಿ : ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ನಡ್ಡಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಶೆಟ್ಟರ್ ಅವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಧನಾತ್ಮಕ ಚರ್ಚೆ ನಡೆದಿದ್ದು, … Continued

ಟಿಕೆಟ್​ ಗೊಂದಲ: ಹೈಕಮಾಂಡ್​ ಬುಲಾವ್ ನಂತರ ದೆಹಲಿಗೆ ಹೊರಟ ಜಗದೀಶ ಶೆಟ್ಟರ

ಹುಬ್ಬಳ್ಳಿ: ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ, ತಮ್ಮ ಹೆಸರು ಇಲ್ಲದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಅವರನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ದೆಹಲಿಗೆ ಹೋಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ದೆಹಲಿಗೆ ಬರುವಂತೆ … Continued

ದೆಹಲಿ : ವಿಮಾನದ ಟಾಯ್ಲೆಟ್‌ನಲ್ಲಿ 1.95 ಕೋಟಿ ಮೌಲ್ಯದ ಚಿನ್ನ ಪತ್ತೆ…!

ನವದೆಹಲಿ: ವಿಮಾನದ ಶೌಚಾಲಯಲ್ಲಿ ಅಡಗಿಸಿಟ್ಟಿದ್ದ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಗಟ್ಟಿಗಳನ್ನು ದೆಹಲಿಯಲ್ಲಿ ವಶ ಪಡಿಸಿಕೊಳ್ಳಲಾಗಿದೆ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೊದಲು ಪ್ರಯಾಣಿಕರು ಘನಿಕೃತರೂಪದ ಚಿನ್ನವನ್ನು ಒಳ ಉಡುಪು, ಸೂಟ್‍ಕೇಸ್, ಶೂ, ಬೆಲ್ಟ್ ಹಾಗೂ ಇತರ ರೂಪದಲ್ಲಿ … Continued

ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿದ ಮಹಿಳಾ ಪ್ರತಿಭಟನಾಕಾರರು

ನವದೆಹಲಿ: ಭಾನುವಾರ ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಮೆಣಸಿನ ಪುಡಿ ಎರಚಿದ ಆರೋಪದ ಮೇಲೆ ಕೆಲವು ಮಹಿಳಾ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯರು ಅತಿಕ್ರಮಣ ವಿರೋಧಿ ಅಭಿಯಾನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈವರೆಗೆ, ಶುಕ್ರವಾರ ಮೆಹ್ರೌಲಿ ಪುರಾತತ್ವ ಪಾರ್ಕ್ ಪ್ರದೇಶದಲ್ಲಿ ಸುಮಾರು 1200 ಚದರ ಮೀಟರ್ ಸರ್ಕಾರಿ … Continued

5ನೇ ತರಗತಿ ಬಾಲಕಿಗೆ ಕತ್ತರಿಯಿಂದ ಹೊಡೆದ ನಂತರ ಶಾಲೆಯ 1ನೇ ಮಹಡಿಯಿಂದ ಎಸೆದ ಶಿಕ್ಷಕಿ…!

ನವದೆಹಲಿ; ಆಘಾತಕಾರಿ ಘಟನೆಯೊಂದರಲ್ಲಿ, 5ನೇ ತರಗತಿಯ ವಿದ್ಯಾರ್ಥಿನಿಯನ್ನು ಕತ್ತರಿಯಿಂದ ಹೊಡೆದು ನಂತರ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿಯನ್ನು ಮಧ್ಯ ದೆಹಲಿಯ ಮಾಡೆಲ್ ಬಸ್ತಿ ಪ್ರದೇಶದ ಪ್ರಾಥಮಿಕ ವಿದ್ಯಾಲಯದ ತರಗತಿ ಶಿಕ್ಷಕಿ ಗೀತಾ ದೇಶ್ವಾಲ್ ಎಂದು ಗುರುತಿಸಲಾಗಿದ್ದು, ಮೊದಲು ಬಾಲಕಿಯನ್ನು ಸಣ್ಣ ಕತ್ತರಿಗಳಿಂದ ಹೊಡೆದು ನಂತರ … Continued

ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯತ್ತಿದ್ದ ಪೊಲೀಸ್​​ ವ್ಯಾನ್​​ ಮೇಲೆ ಮಾರಕಾಸ್ತ್ರ ಹಿಡಿದು ದಾಳಿ

ನವದೆಹಲಿ: ಲಿವ್‌ ಇನ್‌ ಗೆಳತಿ ಶ್ರದ್ಧಾ ವಾಕರ್‌ ಅವರನ್ನು ಕೊಂದ ಆರೋಪಿ ಅಫ್ತಾಬ್ ಪೂನಾವಾಲಾ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ಸೋಮವಾರ ದೆಹಲಿಯಲ್ಲಿ ದಾಳಿ ನಡೆಸಲಾಗಿದೆ. ದೆಹಲಿಯ ಎಫ್‌ಎಸ್‌ಎಲ್ ಕಚೇರಿಯ ಹೊರಗೆ ಹಿಂದೂ ಸೇನೆಯೆಂದು ಹೇಳಿಕೊಂಡ ಕತ್ತಿಗಳನ್ನು ಹೊತ್ತಿದ್ದ ಕನಿಷ್ಠ ಇಬ್ಬರು ವ್ಯಕ್ತಿಗಳು ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಇಬ್ಬರನ್ನು ವಶಕ್ಕೆ … Continued

ದೆಹಲಿ ಆಪ್ ನಾಯಕ ಸಂದೀಪ ಭಾರದ್ವಾಜ್ ನಿವಾಸದಲ್ಲಿ ಶವವಾಗಿ ಪತ್ತೆ

ನವದೆಹಲಿ : ಆಘಾತಕಾರಿ ಘಟನೆಯೊಂದರಲ್ಲಿ, ಆಮ್ ಆದ್ಮಿ ಪಕ್ಷದ ಟ್ರೇಡ್ ವಿಂಗ್ ಕಾರ್ಯದರ್ಶಿ ಸಂದೀಪ ಭಾರದ್ವಾಜ ಅವರು ರಾಜೌರಿ ಗಾರ್ಡನ್ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಭಾರದ್ವಾಜ ಅವರನ್ನು ಅವರ ಸ್ನೇಹಿತರೊಬ್ಬರು “ಕುಕ್ರೇಜಾ ಆಸ್ಪತ್ರೆಗೆ” ಕರೆದೊಯ್ದರು. ಸಂದೀಪ್ ಭಾರದ್ವಾಜ್ (55 ವರ್ಷ) ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು … Continued

ಪುನರ್ವಸತಿ ಕೇಂದ್ರದಿಂದ ಹಿಂದುರುಗಿದ ಕೆಲವೇ ದಿನಗಳಲ್ಲಿ ಇಡೀ ಕುಟುಂಬವನ್ನೇ ಕೊಂದ ಮಾದಕ ವ್ಯಸನಿ

ನವದೆಹಲಿ: ಮಾದಕ ವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯನ್ನು ಬೆಚ್ಚಿಬೀಳಿಸಿದೆ. 25 ವರ್ಷದ ಕೇಶವ ಎಂಬಾತ ಜಗಳದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಇಂದು, ಬುಧವಾರ ತಿಳಿಸಿದ್ದಾರೆ. ನೈಋತ್ಯ ದೆಹಲಿಯ ಪಾಲಮ್‌ನಲ್ಲಿರುವ ಅವರ ಮನೆಯಲ್ಲಿ ನಿನ್ನೆ … Continued