ಮನ ಕಲಕುವ ವೀಡಿಯೊ | ಅಕಾಲಿಕ ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಧಾನ್ಯ ಉಳಿಸಲು ರೈತನ ಹತಾಶ ಪ್ರಯತ್ನ ; ನಂತರ ಕೇಂದ್ರ ಸಚಿವರಿಂದ ಕರೆ

ನವದೆಹಲಿ: ಮಹಾರಾಷ್ಟ್ರದ ರೈತನೊಬ್ಬ ತನ್ನ ಬೆಳೆಯನ್ನು ಭಾರೀ ಮಳೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಹತಾಶ ಪ್ರಯತ್ನ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ವೀಡಿಯೊದಲ್ಲಿರುವ ರೈತ ಗೌರವ ಪನ್ವಾರ್ ಮಹಾರಾಷ್ಟ್ರದ ವಾಶಿಮ್‌ನ ಮಾರುಕಟ್ಟೆಗೆ ತನ್ನ ಕಡಲೆಕಾಯಿ ಬೆಳೆಯನ್ನು ತಂದಿದ್ದರು. … Continued

ಆಭರಣ ಮಳಿಗೆ ಮೇಲೆ ಐಟಿ ದಾಳಿ ; 26 ಕೋಟಿ ರೂ. ನಗದು ಜಪ್ತಿ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಮೂಲದ ಸುರಾನಾ ಜ್ಯುವೆಲರ್ಸ್ ಮಾಲೀಕರು ಅಘೋಷಿತ ವಹಿವಾಟು ನಡೆಸಿದ ಆರೋಪದ ಆದಾಯ ತೆರಿಗೆ ಇಲಾಖೆ ಮೇಲೆ ಭಾನುವಾರ ಸುರಾನಾ ಜ್ಯುವೆಲರ್ಸ್ ಮೇಲೆ ದಾಳಿ ನಡೆಸಿದೆ. ಐಟಿ ಇಲಾಖೆ ಅಧಿಕಾರಿಗಳ ಪ್ರಕಾರ, ಸುಮಾರು 26 ಕೋಟಿ ರೂಪಾಯಿ ನಗದು ಮತ್ತು 90 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ಶೋಧದ … Continued

ಜನ್ಮ ದಿನಾಚರಣೆಗೆ ದುಬೈಗೆ ಕರೆದೊಯ್ಯಲು ನಿರಾಕರಿಸಿದ ಪತಿ : ಮುಖಕ್ಕೆ ಪತ್ನಿ ಗುದ್ದಿದ ರಭಸಕ್ಕೆ ಗಂಡನ ಪ್ರಾಣವೇ ಹಾರಿಹೋಯ್ತು…!

ಪುಣೆ: ತನ್ನ ಜನ್ಮದಿನದ ಆಚರಣೆಗಾಗಿ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣಕ್ಕೆ ಪತ್ನಿಯು ತನ್ನ ಗಂಡನ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಗಂಡ ಪ್ರಾಣ ಕಳೆದುಕೊಂಡ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯ ವನವಡಿ ಪ್ರದೇಶದಲ್ಲಿ ದಂಪತಿ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ನಿಖಿಲ್ ಖನ್ನಾ (36) ಎಂದು … Continued

ಮಹಾರಾಷ್ಟ್ರ: 26 ಸಾವಿರ ಸಮೀಪ ಬಂದ ಕೊರೊನಾ ಪ್ರಕರಣಗಳ ಸಂಖ್ಯೆ..!

ಮುಂಬೈ: ಮಹಾರಾಷ್ಟ್ರವು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಕಳೆದ 24 ತಾಸಿನಲ್ಲಿ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನದಲ್ಲಿ 25,833 ಸೋಂಕುಗಳು ವರದಿಯಾಗಿವೆ, ಬುಧವಾರ ರಾಜ್ಯವು 23,000ಕ್ಕೂ ಹೆಚ್ಚು ಹೊಸ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿತ್ತು. ಆದಾಗ್ಯೂ, ವೈರಸ್ ಸಂಬಂಧಿತ ಸಾವುನೋವುಗಳು ಇಳಿಮುಖವಾಗಿವೆ. ಗುರುವಾರ … Continued