ಮಾತುಕತೆಗಳ ನಂತರವೇ ಹಿಟ್-ಅಂಡ್-ರನ್ ಕಾನೂನು ಜಾರಿಗೆ ನಿರ್ಧಾರ : ದೇಶಾದ್ಯಂತ ಮುಷ್ಕರ ಹಿಂಪಡೆದ ಟ್ರಕ್‌ ಚಾಲಕರು

ನವದೆಹಲಿ : ಹಿಟ್‌ ಅಂಡ್‌ ರನ್‌ ವಿರುದ್ಧ ಕಾನೂನನ್ನು ಜಾರಿಗೊಳಿಸುವ ಮೊದಲು ಮಧ್ಯಸ್ಥಗಾರರ ಜತೆ ಸಮಾಲೋಚನೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ದೇಶಾದ್ಯಂತ ಟ್ರಕ್‌ ಚಾಲಕರ ಮುಷ್ಕರವನ್ನು ಹಿಂಪಡೆಯಲಾಗಿದೆ. ಸರ್ಕಾರದ ಜೊತೆ ಸುದೀರ್ಘ ಮಾತುಕತೆಯ ನಂತರ, ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಮುಷ್ಕರವನ್ನು ಹಿಂಪಡೆಯಿತು. “ನಾವು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ … Continued