ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ…!

ಹೈದರಾಬಾದ್‌ : ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರಕ್ಕೆ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಡಾ. ಪೆಮ್ಮಸಾನಿ ಚಂದ್ರಶೇಖರ ಅವರು ದೇಶದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿಯಾಗಿದ್ದಾರೆ. ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 5,785.28 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿರುವ ಎನ್‌ಆರ್‌ಐ ವೈದ್ಯರಾಗಿರುವ ಚಂದ್ರಶೇಖರ ಅವರು ಈವರೆಗೆ ಘೋಷಿತ ದೇಶದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿಯಾಗಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯಾದ ಡಾ. ಚಂದ್ರಶೇಖರ ಅವರು ಮೇ 13ರಂದು ನಡೆಯುವ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿಯನ್ನು ಘೋಷಿಸಿದ್ದಾರೆ.
ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೊಂಡ ವಿಶ್ವೇಶ್ವರ ರೆಡ್ಡಿ ಅವರನ್ನು ಹಿಂದಿಕ್ಕಿ ಡಾ. ಚಂದ್ರಶೇಖರ ಅವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಅವರು ತಮ್ಮ ಕುಟುಂಬದ ಆಸ್ತಿ 4,568 ಕೋಟಿ ರೂ.ಎಂದು ಘೋಷಿಸಿಕೊಂಡಿದ್ದಾರೆ. ವಿಶ್ವೇಶ್ವರ ರೆಡ್ಡಿ ಅವರು 2019 ರಲ್ಲಿ 895 ಕೋಟಿ ರೂ ಕುಟುಂಬದ ಆಸ್ತಿಯನ್ನು ಘೋಷಿಸಿಕೊಂಡಿದ್ದರು.

ಅಫಿಡವಿಟ್ ಪ್ರಕಾರ, ಚಂದ್ರಶೇಖರ ಮತ್ತು ಅವರ ಪತ್ನಿ ಕೋನೇರು ಶ್ರೀರತ್ನ ಇಬ್ಬರೂ ವ್ಯವಹಾರ ಮಾಡುತ್ತಿದ್ದಾರೆ. 48 ವರ್ಷದ ಡಾ. ಚಂದ್ರಶೇಖರ ಅವರು 2005 ರಲ್ಲಿ ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿರುವ ಗೀಸಿಂಗರ್ ಮೆಡಿಕಲ್ ಸೆಂಟರ್‌ನಲ್ಲಿ ಇಂಟರ್ನಲ್ ಮೆಡಿಸಿನ್‌ನಲ್ಲಿ ತಮ್ಮ ಎಂ.ಡಿ. (M.D.) ಅಧ್ಯಯನ ಮಾಡಿದರು. ಚಂದ್ರಶೇಖರ ಅವರ ಸ್ಥಿರ ಆಸ್ತಿಯು 2,316.54 ಕೋಟಿ ರೂ.ಗಳಷ್ಟಿದ್ದರೆ ಅವರ ಪತ್ನಿಯದ್ದು 2,289.35 ಕೋಟಿ ರೂ.ಗಳು ಎಂದು ಅವರು ಹೇಳಿದ್ದಾರೆ.
ಅವಲಂಬಿತ ಪುತ್ರ ಅಭಿನವ ಪೆಮ್ಮಸಾನಿ 496.27 ಕೋಟಿ ರೂ. ಚರ ಆಸ್ತಿ ಹೊಂದಿದ್ದರೆ, ಅವಲಂಬಿತ ಪುತ್ರಿ ಸಹಸ್ರಾ ಪೆಮ್ಮಸಾನಿ 496.47 ಕೋಟಿ ರೂ. ಚರ ಆಸ್ತಿ ಹೊಂದಿದ್ದಾರೆ. ದಂಪತಿ ಜಂಟಿಯಾಗಿ ಅಮೆರಿಕದಲ್ಲಿ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿಗಳಲ್ಲಿ 2,402.36 ಕೋಟಿ ರೂ. ಹೂಡಿಕೆ ಹೊಂದಿದ್ದಾರೆ. ಚಂದ್ರಶೇಖರ ಅವರು ಎರಡು ಮರ್ಸಿಡಿಸ್ ಬೆಂಜ್, ಟೆಸ್ಲಾ ಮಾಡೆಲ್ ಎಕ್ಸ್ ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಸೇರಿದಂತೆ 6.11 ಕೋಟಿ ರೂಪಾಯಿ ಮೌಲ್ಯದ ಐದು ವಾಹನಗಳನ್ನು ಹೊಂದಿದ್ದಾರೆ.

ಪ್ರಮುಖ ಸುದ್ದಿ :-   'ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ

ಡಾ. ಚಂದ್ರಶೇಖರ 72 ಕೋಟಿ ಚರ ಆಸ್ತಿ ಹೊಂದಿದ್ದರೆ, ಅವರ ಪತ್ನಿಯ ಆಸ್ತಿ 34.82 ಕೋಟಿ ರೂ. ಅವರು ತಲಾ 519 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ. ಕುಟುಂಬವು ಸಂಚಿತ ಕಡಲಾಚೆ ಒಟ್ಟು 16.51 ಕೋಟಿ ರೂ.ಗಳ ಆಸ್ತಿ ಹೊಂದಿದೆ.
2022 ರ ಕ್ಯಾಲೆಂಡರ್ ವರ್ಷದಲ್ಲಿ, ದಂಪತಿ 605.57 ಕೋಟಿ ರೂ ಜಂಟಿ ಆದಾಯವನ್ನು ಹೊಂದಿದ್ದರು. ಅದೇ 2021 ರಲ್ಲಿ 643.42 ಕೋಟಿ ರೂ.ಗಳ ಆದಾಯ ಹೊಂದಿದ್ದರು. ಡಾ. ಚಂದ್ರಶೇಖರ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ.
ಹಾಲಿ ಸಂಸದ ಮತ್ತು ಉದ್ಯಮಿ ಗಲ್ಲಾ ಜಯದೇವ ಅವರು ರಾಜಕೀಯದಿಂದ ದೂರ ಉಳಿಯಲು ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ನಂತರ ಟಿಡಿಪಿಯು ಡಾ. ಚಂದ್ರಶೇಖರ ಅವರನ್ನು ಗುಂಟೂರಿನಿಂದ ಕಣಕ್ಕಿಳಿಸಲು ನಿರ್ಧರಿಸಿದೆ.

ಗುಂಟೂರು ಜಿಲ್ಲೆಯ ಬುರ್ರಿಪಾಲೆಮ್ ಗ್ರಾಮದವರಾದ ಚಂದ್ರಶೇಖರ ಅವರು 1999 ರಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪೂರ್ಣಗೊಳಿಸಿದರು. ನಂತರ ಅವರು ಅಮೆರಿಕಕ್ಕೆ ತೆರಳಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ವೈದ್ಯರಾಗಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಅವರು ಚಾರಿಟಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ, ವೈದ್ಯಕೀಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಭಾರತದಿಂದ ಅಮೆರಿಕಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾರೆ.
ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಲಾಭೋದ್ದೇಶವಿಲ್ಲದ ಎನ್‌ಜಿಒ (NGO) ಯುವರ್ಲ್ಡ್‌ (UWorld) ಅನ್ನು ಪ್ರಾರಂಭಿಸಿದರು. ಚಂದ್ರಶೇಖರ ಅವರು 2020 ರಲ್ಲಿ ಯುವ ಉದ್ಯಮಿಯಾಗಿ ಅವರು ಅಮೆರಿದಲ್ಲಿ ಪ್ರತಿಷ್ಠಿತ ಅರ್ನ್ಸ್ಟ್ ಮತ್ತು ಯಂಗ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಪೆಮ್ಮಸಾನಿ ಫೌಂಡೇಶನ್ ಅನ್ನು ಸ್ಥಾಪಿಸಿದರು, ಇದು ಗುಂಟೂರು ಮತ್ತು ನರಸರಾವ್‌ಪೇಟೆ ಕ್ಷೇತ್ರಗಳ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತದೆ ಮತ್ತು ಕುಡಿಯುವ ನೀರನ್ನು ಪೂರೈಸುತ್ತದೆ.

ಪ್ರಮುಖ ಸುದ್ದಿ :-   ಟ್ರಂಪ್ ಒತ್ತಡದ ನಂತರವೂ 'ಮೇಕ್ ಇನ್ ಇಂಡಿಯಾ' ಬದ್ಧತೆ ಪುನರುಚ್ಚರಿಸಿದ ಆಪಲ್

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement