ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು…!

ನವದೆಹಲಿ: ಗಡಿ ನಿಯಂತ್ರಣ ರೇಖೆ(LoC)ಯಾದ್ಯಂತ ನಾಲ್ಕು ದಿನಗಳ ನಿಖರವಾದ ಕ್ಷಿಪಣಿ ದಾಳಿಗಳು, ಡ್ರೋನ್ ಆಕ್ರಮಣಗಳು ಮತ್ತು ಫಿರಂಗಿ ಯುದ್ಧಗಳ ನಂತರ, ಭಾರತ ಮತ್ತು ಪಾಕಿಸ್ತಾನವು ಮೇ 10 ರ ಸಂಜೆಯಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ. ಕದನ ವಿರಾಮದ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನವು ಶ್ರೀನಗರ ಮತ್ತು ಗುಜರಾತ್‌ನ ಕೆಲವು ಭಾಗಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಡ್ರೋನ್‌ಗಳು ಮೂಲಕ ದಾಳಿ ಮಾಡುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿತು. ಪಾಕಿಸ್ತಾನ ಡ್ರೋನ್‌ಗಳನ್ನು ಭಾರತೀಯ ಸೇನೆ ಮಾರ್ಗ ಮಧ್ಯೆಯೇ ತಟಸ್ಥಗೊಳಿಸಿತು.
ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಭಾರತ ಹೇಳಿದ್ದು, ಸಶಸ್ತ್ರ ಪಡೆಗಳು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ಭಾರತೀಯ ಸೇನೆ ಸೂಕ್ತ ಉತ್ತರ ನೀಡುತ್ತದೆ ಎಂದು ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಪತ್ರಿಕಾಗೋಷ್ಠಿಯಲ್ಲಿ, ಭಾರತವು “ಈ ಉಲ್ಲಂಘನೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ” ಎಂದು ಒತ್ತಿ ಹೇಳಿದ್ದಾರೆ.

ಪಾಕಿಸ್ತಾನ ಕದನ ವಿರಾಮಕ್ಕೆ ದುಂಬಾಲು ಬಿದ್ದಿದ್ದು ಏಕೆ…?
ಸರ್ಕಾರಿ ಮೂಲಗಳ ಪ್ರಕಾರ, ಮೇ 10 ರಂದು ಬೆಳಗಿನ ಜಾವ, ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಪ್ರಮುಖ ವಾಯುಪಡೆಯ (ಪಿಎಎಫ್) ನೆಲೆಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್-ಎ (ವಾಯು-ಉಡಾವಣಾ) ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದವು. ಮೊದಲು ರಾವಲ್ಪಿಂಡಿ ಬಳಿಯ ಚಕ್ಲಾಲಾ ಮತ್ತು ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ದಾಳಿಗಳಿಂದ ಸ್ಫೋಟಗಳು ಸಂಭವಿಸಿದವು. ಪಾಕಿಸ್ತಾನ ವಾಯುಪಡೆಯ ಎರಡೂ ನೆಲೆಗಳು ಧ್ವಂಸಗೊಂಡವು. ಇದು ಪಾಕಿಸ್ತಾನ ಸೇನೆಗೆ ಕಾರ್ಯತಂತ್ರದ ವಾಯು ನೆಲೆಗಳಾಗಿದ್ದವು. ಮಾನವ ಮತ್ತು ಮುಕ್ತ ಮೂಲ ಗುಪ್ತಚರ ಮೂಲಕ ಹಾನಿಯ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಯು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಜಕೋಬಾಬಾದ್, ಭೋಲಾರಿ ಮತ್ತು ಸ್ಕಾರ್ಡುವಿನಲ್ಲಿರುವ ಹೆಚ್ಚುವರಿ ನೆಲೆಗಳ ಮೇಲೆ ದಾಳಿ ನಡೆಸಿತು ಎಂಬ ದೃಢೀಕರಣವು ಸಂಜೆಯ ನಂತರ ಬಂದಿತು.
ಭಾರತೀಯ ಯುದ್ಧ ವಿಮಾನಗಳು ಹಾಗೂದ್ರೋಣ್‌ಗಳು ಪಾಕಿಸ್ತಾನದ 11 ವಾಯು ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಉಂಟಾದ ಹಾನಿಯಿಂದ ಪಾಕಿಸ್ತಾನ ಸೇನೆ ಬೆಚ್ಚಿಬಿದ್ದಿತು. ಪಾಕಿಸ್ತಾನದ ರಕ್ಷಣಾ ಜಾಲಗಳಲ್ಲಿ ಪ್ರಮುಖವಾದ ಪರಮಾಣು ಕಮಾಂಡ್ ಮತ್ತು ಅದರ ನಿಯಂತ್ರಣದ ಮೂಲಸೌಕರ್ಯದ ಮೇಲೆ ಭಾರತವು ದಾಳಿ ನಡೆಸಬಹುದು ಎಂಬ ನಂಬಿಕೆಯನ್ನು ಸೂಚಿಸುವ ಹೈ ಅಲರ್ಟ್ ಸಂದೇಶಗಳನ್ನು ಪಾಕಿಸ್ತಾನವು ಕಳುಹಿಸಿತು. ಇದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿದವು. ಪಾಕಿಸ್ತಾನದ ಕಾರ್ಯತಂತ್ರ ಯೋಜನೆ ವಿಭಾಗಕ್ಕೆ ಸಂಬಂಧಿಸಿದ ಕಚೇರಿಗಳು ಸೇರಿದಂತೆ ರಾವಲ್ಪಿಂಡಿಯಲ್ಲಿರುವ ಕಾರ್ಯತಂತ್ರದ ಘಟಕಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು ಎಂದು ವರದಿಯಾಗಿದೆ.

ಯಾವಾಗ ತನ್ನ ಪರಮಾಣು ಕಮಾಂಡ್‌ ಹಾಗೂ ನಿಯಂತ್ರಣದ ನೆಲೆಗಳನ್ನು ಗುರಿಯಾಗಿಸಿ ಭಾರತವು ದಾಳಿ ಮಾಡಬಹುದು ಎಂದು ಪಾಕಿಸ್ತಾನಕ್ಕೆ ಅನ್ನಿಸಿತೋ ಅದು ತಕ್ಷಣವೇ ತುರ್ತು ಮಧ್ಯಪ್ರವೇಶ ಮಾಡುವಂತೆ ಅಮೆರಿಕಕ್ಕೆ ದುಂಬಾಲು ಬಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಉದ್ವಿಗ್ನತೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಅಮೆರಿಕದ ಅಧಿಕಾರಿಗಳು ಎರಡೂ ಕಡೆಯವರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಪಾಕಿಸ್ತಾನ ಮಿಲಿಟರಿಯ ಕಾರ್ಯತಂತ್ರದ ಘಟಕಗಳ ಮೇಲೆ ಭಾರತ ದಾಳಿ ಮಾಡಬಹುದು ಎಂಬ ಪಾಕಿಸ್ತಾನ ನೀಡಿದ ಮಾಹಿತಿಯ ನಂತರ ವಾಷಿಂಗ್ಟನ್ ಹೆಚ್ಚು ನಿರ್ಣಾಯಕವಾಗಿ ಹೆಜ್ಜೆ ಹಾಕಲು ಕಾರಣವಾಯಿತು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ ಅವರಿಂದ ಮುನೀರ್‌ಗೆ ಬಂದ ನಿರ್ಣಾಯಕ ಕರೆಯಿಂದಾಗಿ ಸೇನಾ ಮುಖ್ಯಸ್ಥರು ಪಾಕಿಸ್ತಾನದ ರಾಜಕೀಯ ನಾಯಕತ್ವದ ಮಾತನ್ನು ಕೇಳುತ್ತಿಲ್ಲ ಮತ್ತು ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮೆರಿಕ ಅರಿತುಕೊಂಡಿದೆ ಎಂದು ತೋರಿಸಿತು.
ಅಮೆರಿಕವು ಈ ಕರೆಯನ್ನು ಮಾಡಿದ್ದು ಯಾಕೆಂದರೆ ಭಾರತದ ದಾಳಿಗೆ ಅಮೆರಿಕವು ಸಹ ಒಂದು ಕ್ಷಣ ಆಶ್ಚರ್ಯಚಕಿತವಾಯಿತು. ಸಾರ್ವಜನಿಕವಾಗಿ ತಟಸ್ಥ ನಿಲುವನ್ನು ಕಾಯ್ದುಕೊಂಡರೂ ವಾಸ್ತವದಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ದೃಢ ಸಂದೇಶವನ್ನು ರವಾನಿಸಿತು ಎಂದು ತಿಳಿದುಬಂದಿದೆ. ಅಧಿಕೃತ ಮಿಲಿಟರಿ ಹಾಟ್‌ಲೈನ್ ಬಳಸಿ ಮತ್ತು ಮತ್ತಷ್ಟು ವಿಳಂಬ ಮಾಡದೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತಕ್ಷಣವೇ ಭಾರತೀಯ ಸೇನೆಯನ್ನು ನೇರವಾಗಿ ಸಂಪರ್ಕ ಮಾಡಿ ಎಂದು ಅಮೆರಿಕವು ಪಾಕಿಸ್ತಾನಕ್ಕೆ ಸೂಚನೆ ನೀಡಿತುಯಾಕೆಂದರೆ ಭಾರತದ ದಾಳಿಗೆ ಅಮೆರಿಕವು ಸಹ ಒಂದು ಕ್ಷಣ ಆಶ್ಚರ್ಯಚಕಿತವಾಯಿತು. ಸಾರ್ವಜನಿಕವಾಗಿ ತಟಸ್ಥ ನಿಲುವನ್ನು ಕಾಯ್ದುಕೊಂಡರೂ ವಾಸ್ತವದಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ದೃಢ ಸಂದೇಶವನ್ನು ರವಾನಿಸಿತು ಎಂದು ತಿಳಿದುಬಂದಿದೆ. ಅಧಿಕೃತ ಮಿಲಿಟರಿ ಹಾಟ್‌ಲೈನ್ ಬಳಸಿ ಮತ್ತು ಮತ್ತಷ್ಟು ವಿಳಂಬ ಮಾಡದೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತಕ್ಷಣವೇ ಭಾರತೀಯ ಸೇನೆಯನ್ನು ನೇರವಾಗಿ ಸಂಪರ್ಕ ಮಾಡಿ ಎಂದು ಅಮೆರಿಕವು ಪಾಕಿಸ್ತಾನಕ್ಕೆ ಸೂಚನೆ ನೀಡಿತು.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟ ಮಧ್ಯೆ ಪಾಕ್‌ ಜತೆ ಟ್ರಂಪ್ ಕುಟುಂಬದ ರಹಸ್ಯ ಕ್ರಿಪ್ಟೋ ಒಪ್ಪಂದ...! ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆ ?!

ಮೇ 10 ರ ಮಧ್ಯಾಹ್ನದ ವೇಳೆಗೆ, ಪಾಕಿಸ್ತಾನದ ಹಲವಾರು ಆಕ್ರಮಣಕಾರಿ ಯುದ್ಧತಂತ್ರವನ್ನು ಭಾರತವು ವಿಫಲಗೊಳಿಸಿದ ನಂತರ ಹಾಗೂ ಭಾರತದ ವಾಯದಾಳಿಯು ಪಾಕಿಸ್ತಾನಕ್ಕೆ ಹೆಚ್ಚಿನ ಹಾನಿ ಮಾಡಬಹುದು ಎಂಬ ಭಯದಿಂದ ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಭಾರತದ ಡಿಜಿಎಂ ಲೆಫ್ಟಿನೆಂಟ್ ಜನರಲ್ ರಾಜೀವ ಘಾಯ್ ಅವರಿಗೆ ನೇರವಾಗಿ ಕರೆ ಮಾಡಿದರು. ಕರೆಯ ಸಮಯ ಭಾರತೀಯ ಕಾಲಮಾನ ಶನಿವಾರ ಅಪರಾಹ್ನ 15:35 ಎಂದು ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದರು.
ಶಿಷ್ಟಾಚಾರದ ಹೊರತಾಗಿ ಪಾಕಿಸ್ತಾನದೊಂದಿಗೆ ಯಾವುದೇ ಔಪಚಾರಿಕ ರಾಜತಾಂತ್ರಿಕ ಅಥವಾ ಮಿಲಿಟರಿ ಮಾತುಕತೆಗಳಲ್ಲಿ ತೊಡಗುವುದಿಲ್ಲ ಎಂಬ ತನ್ನ ನಿಲುವಿಗೆ ಭಾರತ ಬದ್ಧವಾಗಿತ್ತು. ಇದರರ್ಥ ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ, ಭಾರತ ಮಾತುಕತೆಯಲ್ಲಿ ತೊಡಗಲಿಲ್ಲ ಮತ್ತು ಬದಲಾಗಿ ಭಾರತೀಯ ಸಶಸ್ತ್ರ ಪಡೆಗಳು ಮುಂದಿನ ಹಂತದ ದಾಳಿಗೆ ಸಿದ್ಧವಾಗಿವೆ ಎಂದು ಸೂಚಿಸಿತು, ಇದು ಪಾಕಿಸ್ತಾನದ ಇಂಧನ ಮತ್ತು ಆರ್ಥಿಕ ಗುರಿಗಳ ಮೇಲೆ ಸಂಘಟಿತ ದಾಳಿಗಳು ಮತ್ತು ಬಲವಾದ ಕಾರ್ಯತಂತ್ರದ ಕಮಾಂಡ್ ರಚನೆಗಳನ್ನು ಒಳಗೊಂಡಿರಬಹುದು ಎಂದು ವರದಿಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಜಂಘಾಬಲ ಉಡುಗಿದ್ದು ಏಕೆ..?
ಪಾಕಿಸ್ತಾನವು ಭಾರತದ ಹಲವೆಡೆ ಕ್ಷಿಪಣಿ ಹಾಗೂ ದ್ರೋಣ್‌ ದಾಳಿಗಳನ್ನು ನಡೆಸಿದ ನಂತರ ಅದನ್ನು ತಟಸ್ಥಗೊಳಿಸಿದ ಭಾರತದ ಸೇನೆ ಅದಕ್ಕೆ ಪ್ರತೀಕಾರವಾಗಿ ಬ್ರಹ್ಮೋಸ್, ಹ್ಯಾಮರ್ ಮತ್ತು ಸ್ಕಲ್ಪ್‌ (SCALP) ಕ್ಷಿಪಣಿಗಳ ಮೂಲಕ 10 ಪಾಕಿಸ್ತಾನಿ ವಾಯುನೆಲೆಗಳನ್ನು ಧ್ವಂಸಗೊಳಿಸಿತು.
ಪ್ರಧಾನಿ ನರೇಂದ್ರ ಮೋದಿ ಅನುಮೋದಿಸಿದ ಭಾರತದ ಪ್ರತೀಕಾರದ ದಾಳಿಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ “ಮೇ 7 ರಂದು ನಡೆದ ಆಪರೇಷನ್ ಸಿಂಧೂರಕ್ಕಿಂತ ದೊಡ್ಡ ದಾಳಿಯ ಯೋಜನೆಯಾಗಿತ್ತು” ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪಾಕಿಸ್ತಾನವು ಇದರಿಂದ ತಾನು ಖಂಡಿತವಾಗಿ”ವಿನಾಶ”ಕ್ಕೆ ಒಳಗಾಗುವುದನ್ನು ಅರಿತುಕೊಂಡಿತು ಮತ್ತು ಅದರ ಪರಮಾಣು ಸೌಲಭ್ಯಗಳನ್ನು ಗುರುಯಾಗಿಸಿ ದಾಳಿ ನಡೆದರೆ ಏನು ಮಾಡುವುದು ಎಂದು ತಿಳಿಯದೆ ಕಂಗಾಲಾಗಿ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ಗೋಗರೆಯಿತು.
ಯಾಕೆಂದರೆ ಪಾಕಿಸ್ತಾನವು ಭಾರತದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ನಂತರ ಪಾಕಿಸ್ತಾನದ ಮೇಲೆ ಭಾರತದ ವಾಯು ದಾಳಿ ಎಷ್ಟು ತೀವ್ರವಾಗಿತ್ತೆಂದರೆ ಅದು ಹಿಂದಿನ ಯುದ್ಧಗಳಲ್ಲಿ ಕಾಣದ ಪ್ರಮಾಣದಲ್ಲಿ ಹಾನಿ ಮಾಡಿತು. ಪಾಕಿಸ್ತಾನದ ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಿರ್ಸಾ ಬಳಿ ಕೆಡವಿ ನಾಶಪಡಿಸಲಾಯಿತು ಮತ್ತೊಂದೆಡೆ, ಭಾರತದ ಎಲ್ಲಾ ಕ್ಷಿಪಣಿಗಳು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್ ಬಳಿಯಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ಮಿಲಿಟರಿಯ ಅನೇಕ ನೆಲೆಗಳನ್ನು ಧ್ವಂಸಗೊಳಿಸಿತು.

ಪ್ರಮುಖ ಸುದ್ದಿ :-   ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು...

90 ನಿಮಿಷಗಳಲ್ಲಿ, ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ, ಜಾಕೋಬಾಬಾದ್ ವಾಯುನೆಲೆ ಮತ್ತು ಪಸ್ರೂರ್ ಏರ್‌ಸ್ಟ್ರಿಪ್ ಮೇಲೆ ಕ್ಷಿಪಣಿ ದಾಳಿ ನಡೆಸಿ ಧ್ವಂಸಗೊಳಿಸಿತು.
ಭಾರತದ ವಾಯು ದಾಳಿಯು ಪಾಕಿಸ್ತಾನದ ಚುನಿಯನ್ ರಾಡಾರ್ ವ್ಯವಸ್ಥೆಯನ್ನೂ ಸಹ ನಾಶಪಡಿಸಿತು. ಭಾರತವು ತನ್ನ ಅತಿದೊಡ್ಡ ದಾಳಿಗಳಲ್ಲಿ ಒಂದಾದ ಬ್ರಹ್ಮೋಸ್ ಕ್ಷಿಪಣಿಗಳನ್ನು ಮತ್ತು ರಫೇಲ್ ಫೈಟರ್ ಜೆಟ್‌ಗಳಿಂದ ಹ್ಯಾಮರ್ ಮತ್ತು ಸ್ಕಲ್ಪ್ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆಯ ಕಾರ್ಯತಂತ್ರದ ಈ ವಾಯುನೆಲೆಗಳ ಮೇಲೆ ಹಾರಿಸಿ ಧ್ವಂಸಗೊಳಿಸಿತು.

ಭಾರತವು ನೂರ್ ಖಾನ್ ವಾಯುನೆಲೆಯ ಮೇಲೆ ಯಾವಾಗ ದಾಳಿ ಮಾಡಿ ಹಾನಿ ಮಾಡಿತೋ ಅಮೆರಿಕದಲ್ಲಿ ಎಚ್ಚರಿಕೆಯ ಗಂಟೆಗಳು ಜೋರಾಗಿ ಮೊಳಗಿದವು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. “ಈ ವಾಯು ನೆಲೆಯು ಪಾಕಿಸ್ತಾನ ಸೇನೆಯ ಕಾರ್ಯತಂತ್ರದ ಪ್ರಮುಖ ವಾಯು ನೆಲೆಯಾಗಿದೆ. ಅಲ್ಲದೆ, ದೇಶದ ಪರಮಾಣು ಶಸ್ತ್ರಾಗಾರವನ್ನು ನೋಡಿಕೊಳ್ಳುವ ಮತ್ತು ರಕ್ಷಿಸುವ ಪಾಕಿಸ್ತಾನದ ಕಾರ್ಯತಂತ್ರದ ಯೋಜನೆ ವಿಭಾಗದ ಪ್ರಧಾನ ಕಚೇರಿಯಿಂದ ಇದು ಸ್ವಲ್ಪ ದೂರದಲ್ಲಿದೆ” ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತದೆ.
ಪಾಕಿಸ್ತಾನದ ವಾಯು ಸಾಗಣೆ ಮತ್ತು ಉನ್ನತ ಮಟ್ಟದ ಮಿಲಿಟರಿ ಸಮನ್ವಯದ ಕೇಂದ್ರ ಭಾಗವಾದ ನೂರ್ ಖಾನ್ ಮತ್ತು ರಫೀಕಿ ವಾಯುನೆಲೆಗಳ ಮೇಲಿನ ಭಾರತದ ದಾಳಿಗಳು ನಿರ್ಣಾಯಕವಾಗಿದ್ದವು. ನೂರ್ ಖಾನ್ ವಾಯು ನೆಲೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿಗೆ ಹತ್ತಿರದಲ್ಲಿದೆ ಮತ್ತು ಇದನ್ನು ಹೆಚ್ಚಾಗಿ ವಿಐಪಿ ಸಾರಿಗೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್‌ಗಾಗಿ ಬಳಸಲಾಗುತ್ತದೆ. ಇದು ಭಾರತದ ದಾಳಿಯಿಂದ ಧ್ವಂಸಗೊಂಡಿದ್ದರಿಂದ ಯುದ್ಧದ ಸಮಯದಲ್ಲಿ ಬೇಕಾದ ಪಾಕಿಸ್ತಾನ ವಾಯುಪಡೆ (ಪಿಎಎಫ್) ನಾಯಕತ್ವ ಮತ್ತು ಅದರ ಕಾರ್ಯಾಚರಣೆಯ ಘಟಕಗಳ ನಡುವಿನ ನಿರ್ಣಾಯಕ ಸಂಪರ್ಕವನ್ನೇ ಕಡಿದುಹಾಕಿತು ಎಂದು ಮೂಲಗಳು ತಿಳಿಸಿವೆ.

ಮುಂಚೂಣಿಯ ಯುದ್ಧ ಸ್ಕ್ವಾಡ್ರನ್‌ಗಳನ್ನು ಆಯೋಜಿಸುವ ಪ್ರಮುಖ ಫೈಟರ್ ಬೇಸ್ ರಫೀಕಿಯನ್ನು ಸಹ ನಿಷ್ಕ್ರಿಯಗೊಳಿಸಲಾಯಿತು. ಪಾಕಿಸ್ತಾನದ ವಿಮಾನ ಶೆಲ್ಟರ್‌ಗಳು ಮತ್ತು ರನ್‌ ವೇ ಮೂಲಸೌಕರ್ಯಗಳ ನಾಶವು ಪಾಕಿಸ್ತಾನ ಸೇನೆಯು ಭಾರತದ ವಿರುದ್ಧ ಪ್ರತಿ-ದಾಳಿ ಪ್ರಾರಂಭಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ದುರ್ಬಲಗೊಳಿಸಿತು. ಭಾರತದ ಈ ದಾಳಿಯು ಪಾಕಿಸ್ತಾನ ವಾಯುಪಡೆಯ (PAF) ಅತ್ಯಂತ ತೀಕ್ಷ್ಣವಾದ ಆಕ್ರಮಣಕಾರಿ ಸಾಧನಗಳಲ್ಲಿ ಒಂದನ್ನು ನಾಶ ಮಾಡಿತು.
ಮುರಿಯದ್ ವಾಯುನೆಲೆಯನ್ನು ಗುರಿಯಾಗಿಸುವ ಮೂಲಕ, ಭಾರತವು ಪಾಕಿಸ್ತಾನ ಸೇನೆಯ ಒಂದು ಪ್ರಮುಖ ತರಬೇತಿ ಮತ್ತು ಸಂಭಾವ್ಯ ಕ್ಷಿಪಣಿ ಸಂಗ್ರಹಣಾ ಕೇಂದ್ರಕ್ಕೆ ಹಾನಿ ಮಾಡಿತು. ಈ ದಾಳಿಯು ಪಾಕಿಸ್ತಾನದ ದೀರ್ಘಕಾಲೀನ ವಾಯುಪಡೆಯ ಸಿದ್ಧತೆಯನ್ನು ಕುಗ್ಗಿಸಿತು, ಪೈಲಟ್ ತರಬೇತಿ ವ್ಯವಸ್ಥೆಯನ್ನು ಹಾಳು ಮಾಡಿತು.
ಸರ್ಗೋಧಾ ನಾಶವು ಭಾರತದ ಸೇನೆಯ ಕಾರ್ಯತಂತ್ರದ ಒಂದು ಮಾಸ್ಟರ್ ಸ್ಟ್ರೋಕ್ ಆಗಿತ್ತು. ಪಾಕಿಸ್ತಾನದ ಅತ್ಯಂತ ನಿರ್ಣಾಯಕ ನೆಲೆಗಳಲ್ಲಿ ಒಂದಾದ ಇದು ಯುದ್ಧ ಕಮಾಂಡರ್‌ಗಳ ತರಬೇತಿ ಶಾಲೆ, ಪರಮಾಣು ಶಸ್ತ್ರಾಗಾರದ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಮುಖ ಸ್ಕ್ವಾಡ್ರನ್‌ಗಳಿಗೆ ನೆಲೆಯಾಗಿದೆ – ಇದರ ನಾಶವು ಪಾಕಿಸ್ತಾನ ಸೇನೆಯ ಆಜ್ಞೆ ಮತ್ತು ನಿಯಂತ್ರಣ ರಚನೆಯನ್ನು ದುರ್ಬಲಗೊಳಿಸಿತು. ಇವೆಲ್ಲವುಗಳಿಂದ ಮುಂದಿನ ದಾಳಿಯಲ್ಲಿ ಸಂಭಾವ್ಯ ವಿನಾಶದ ಬಗ್ಗೆ ಅರಿತ ಪಾಕಿಸ್ತಾನ ಅಮೆರಿಕವನ್ನು ಸಂಪರ್ಕಿಸಿ ಮಧ್ಯಸ್ಥಿಕೆ ವಹಿಸುವಂತೆ ದುಂಬಾಲು ಬಿತ್ತು. ನಂತರ ಅಮೆರಿಕ ಎರಡೂ ದೇಶಗಳನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಮುನ್ನುಡಿ ಬರೆಯಿತು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ತೆಗೆದುಕೊಂಡ ನಿರ್ಧಾರಗಳು – ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಸೇರಿದಂತೆ – ಕದನ ವಿರಾಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತ ದೃಢಪಡಿಸಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement