ಶ್ರೀಲಂಕಾ ಬಿಕಟ್ಟು: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಈಜುಕೊಳದಲ್ಲಿ ಈಜಿದರು…! ನಿವಾಸದಲ್ಲಿ ಅಡುಗೆ ಮಾಡಿದರು…!! | ವೀಕ್ಷಿಸಿ

ಕೊಲಂಬೊ: ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕ ಆಕ್ರೋಶದ ನಡುವೆ ಶ್ರೀಲಂಕಾ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಧಕ್ಷರ ನಿವಾಸದ ಕೊಳದಲ್ಲಿ ಈಜಾಡಿದ್ದಾರೆ. ಮತ್ತು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.
ದೇಶದ ರಾಷ್ಟ್ರಧ್ವಜಗಳನ್ನು ಬೀಸುತ್ತಾ ಪ್ರತಿಭಟನಾಕಾರರ ಗುಂಪೊಂದು ಶ್ರೀಲಂಕಾದ ಅಧ್ಯಕ್ಷರ ನಿವಾಸದ ಕೊಳವನ್ನು ಸುತ್ತುವರೆದಿತ್ತು.
ಅಷ್ಟರಲ್ಲಾಗಲೇ ಅಡುಗೆ ಮನೆಯೊಳಗೆ ನುಗ್ಗಿದ ಗುಂಪು ದೊಡ್ಡ ಟೇಬಲ್ ಸುತ್ತಲೂ ಪಾತ್ರೆಗಳು ಮತ್ತಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿತು. ಇನ್ನೊಂದು ಗುಂಪು ಅಡುಗೆ ಮಾಡುತ್ತಿರುವುದು ಕಾಣಿಸಿತು.

ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ ಎಂದು ಗುಪ್ತಚರ ವರದಿಗಳು ಎಚ್ಚರಿಕೆ ನೀಡಿದ ನಂತರ ಅಧ್ಯಕ್ಷ ರಾಜಪಕ್ಸೆ ಅವರನ್ನು ಕಳೆದ ವರ್ಷ ಸೇನಾ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಗಿತ್ತು ಎಂದು ಸರ್ಕಾರದ ಉನ್ನತ ಮೂಲವೊಂದು ಎನ್‌ಡಿಟಿವಿಗೆ ತಿಳಿಸಿದೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಪಕ್ಷದ ನಾಯಕರ ತುರ್ತು ಸಭೆಯನ್ನು ಕರೆದಿದ್ದು, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲು ನಿರ್ಧರಿಸಿದ್ದಾರೆ. ಅವರು ಸಂಸತ್ತನ್ನು ಕರೆಯುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಶ್ರೀಲಂಕಾವು ಆಹಾರ ಮತ್ತು ಇಂಧನದ ಕೊರತೆಯನ್ನು ಎದುರಿಸುತ್ತಿದೆ, ಜೊತೆಗೆ ದ್ವೀಪ ರಾಷ್ಟ್ರವು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ಮೀಸಲು ಖಾಲಿಯಾದ ನಂತರ ದೀರ್ಘಾವಧಿಯ ಬ್ಲ್ಯಾಕ್‌ಔಟ್ ಮತ್ತು ರನ್‌ಅವೇ ಹಣದುಬ್ಬರವನ್ನು ಎದುರಿಸುತ್ತಿದೆ. ಅಧ್ಯಕ್ಷ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಮಂದಿ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿರೋಧ ಪಕ್ಷಗಳು ಪೊಲೀಸ್ ಮುಖ್ಯಸ್ಥರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ ನಂತರ ಇಂದಿನ ಬೃಹತ್ ರ್ಯಾಲಿಗೆ ಮುನ್ನ ನಿನ್ನೆ ವಿಧೀಸಲಾಗಿದ್ದು ಕರ್ಫ್ಯೂ ಅನ್ನು ತೆಗೆದುಹಾಕಲಾಯಿತು.

ಪ್ರಮುಖ ಸುದ್ದಿ :-   ವಿಡಿಯೊಗಳು | ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ; ಸುನಾಮಿ ಭೀತಿ : ಭೂಮಿ ಹೇಗೆ ನಡುಗಿತು ನೋಡಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement