ಮಳೆಗೆ ಸಂಪರ್ಕ ರಸ್ತೆ ಮುಳುಗಡೆ: ರಬ್ಬರ್ ಟ್ಯೂಬ್‌ಗೆ ಶವ ಕಟ್ಟಿ ತುಂಬಿದ ನದಿಯಲ್ಲೇ ಸಾಗಿಸಿದ ಗ್ರಾಮಸ್ಥರು | ವೀಕ್ಷಿಸಿ

ದಿಂಡೋರಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ರಾಮಸ್ಥರ ಗುಂಪೊಂದು ಪ್ರವಾಹದಿಂದ ತುಂಬಿರುವ ನರ್ಮದಾ ನದಿಯನ್ನು ದಾಟಿ ತಮ್ಮ ಗ್ರಾಮವನ್ನು ತಲುಪಲು ತೇಲುವ ರಬ್ಬರ್ ಟ್ಯೂಬ್‌ಗೆ ವ್ಯಕ್ತಿಯ ಶವವನ್ನು ಕಟ್ಟಿ ಒಯಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಮುಳುಗಿರುವ ವಿದ್ಯಮಾನ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ.
ನದಿಗೆ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ ಮೃತ ವ್ಯಕ್ತಿಯ ಶವವನ್ನು ತೇಲುವ ರಬ್ಬರ್ ಟ್ಯೂಬ್‌ಗೆ ಕಟ್ಟಿ ನರ್ಮದಾ ನದಿ ದಾಟ ಬೇಕಾಯಿತು. ಮೃತರ ಸಂಬಂಧಿಕರಿಗೆ ಅಂತ್ಯಕ್ರಿಯೆ ಮಾಡಲು ದೇಹವನ್ನು ರಬ್ಬರ್ ಟ್ಯೂಬ್ ಮೂಲಕ ನದಿಯನ್ನು ದಾಟದೆ ಬೇರೆ ದಾರಿ ಇರಲಿಲ್ಲ.

ಸ್ಥಳೀಯ ಪೊಲೀಸರ ಪ್ರಕಾರ, ಮೃತರನ್ನು ಅನುಪ್ಪುರ ತಾಡಪಥರಾ ಗ್ರಾಮದ ನಿವಾಸಿ ವಿಶ್ಮತ್ ನಂದ (55) ಎಂದು ಗುರುತಿಸಲಾಗಿದ್ದು, ಭಾನುವಾರ ಹೃದಯಾಘಾತದಿಂದ ನೆರೆಯ ದಿಂಡೋರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಈಗ ವೈರಲ್ ಆಗಿರುವ ವೀಡಿಯೊ, ಕೆಲವರು ಶವವನ್ನು ನದಿಯ ಮೂಲಕ ಅನುಪ್ಪುರ ಜಿಲ್ಲೆಯ ತಮ್ಮ ಗ್ರಾಮಕ್ಕೆ ಸಾಗಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿತು, ನಂತರ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಪಥರಕುಚ ಗ್ರಾಮದವರೆಗೆ ಶವವನ್ನು ಆಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗಿದೆ, ಆದರೆ ನದಿಯ ಪ್ರವಾಹದಿಂದ ತಡಪಥರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮತ್ತು ಸೇತುವೆಯಿಲ್ಲದ ಕಾರಣ ಆಂಬುಲೆನ್ಸ್‌ ಅನ್ನು ಅಲ್ಲಿಯೇ ನಿಲ್ಲಿಸಬೇಕಾಯಿತು. ಗ್ರಾಮಕ್ಕೆ ಯಾವುದೇ ಸಂಪರ್ಕ ಇಲ್ಲದ ಕಾರಣ ಅನಿವಾರ್ಯವಾಗಿ ಶವವನ್ನು ಗಾಳಿ ತುಂಬಿದ ಟ್ಯೂಬ್‌ಗೆ ಕಟ್ಟಿ ಒಯ್ಯಬೇಕಾಯಿತು.
ಗಮನಾರ್ಹವೆಂದರೆ, ಮಧ್ಯಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ, ಜನಜೀವನ ಅಸ್ತವ್ಯಸ್ತವಾಗಿದೆ, ಅನೇಕ ಸ್ಥಳಗಳಲ್ಲಿ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಅನೇಕ ಸ್ಥಳಗಳಲ್ಲಿ ಸೇತುವೆಗಳು ಕುಸಿದಿವೆ.
ವಿಶೇಷವಾಗಿ ನರ್ಮದಾ ನದಿಯ ಜಲಾನಯನ ಪ್ರದೇಶಗಳಲ್ಲಿ ರಾಜ್ಯ ಆಡಳಿತವು ಎಚ್ಚರಿಕೆಯನ್ನು ನೀಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಲಿಕಾಪ್ಟರ್ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಲು ನಿರ್ಧರಿಸಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement