ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಾರು ಎಳೆದೊಯ್ದ ವೀಡಿಯೊ ಹೊರಬಿತ್ತು| ವೀಡಿಯೊ

ನವದೆಹಲಿ: ಪಾನಮತ್ತ ಚಾಲಕನೊಬ್ಬ ತನಗೆ ಕಿರುಕುಳ ನೀಡಿ ಎಳೆದೊಯ್ದಿದ್ದಾನೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆರೋಪಿಸಿದ ಒಂದು ದಿನದ ನಂತರ, ಘಟನೆಯದ್ದು ಎಂದು ಹೇಳಲಾದ ವೀಡಿಯೊ ಹೊರಬಿದ್ದಿದೆ.
ವಾಹನದ ಕಿಟಕಿಗೆ ತನ್ನ ಕೈಯನ್ನು ಸಿಕ್ಕಿಸಿ ಎಐಐಎಂಎಸ್ ಹೊರಗೆ 10-15 ಮೀಟರ್ ತನ್ನ ಕಾರಿನಿಂದ ಎಳೆದೊಯ್ದಿದ್ದಾನೆ ಎಂದು ಆರೋಪಿಸಿ ಒಂದು ದಿನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಘಟನೆಯ ವೀಡಿಯೊ ಹೊರಬಿದ್ದಿದೆ.
ಗುರುವಾರ, ಸ್ವಾತಿ ಮಲಿವಾಲ್ ಅವರು ತಮ್ಮ ತಂಡದೊಂದಿಗೆ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಸ್ಥಿತಿ ಪರಿಶೀಲಿಸಲು ಬೀದಿಗಳಲ್ಲಿ ರೌಂಡ್ಸ್‌ನಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
“ದೇವರು ಜೀವ ಉಳಿಸಿದ. ಮಹಿಳಾ ಆಯೋಗದ ಅಧ್ಯಕ್ಷರು ದೆಹಲಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಪರಿಸ್ಥಿತಿಯನ್ನು ಊಹಿಸಿ ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಮಲಿವಾಲ್ ಅವರು ಇದನ್ನು “ನಿಜವಾಗಿಯೂ ಭಯಾನಕ” ಘಟನೆ ಎಂದು ಕರೆದರು ಮತ್ತು ಅವರ ತಂಡವು ಮಧ್ಯಪ್ರವೇಶಿಸದಿದ್ದರೆ ತಾನು “ಮುಂದಿನ ಅಂಜಲಿ” ಆಗುತ್ತಿದ್ದೆ ಎಂದು ಹೇಳಿದ್ದಾರೆ. ಹೊಸ ವರ್ಷದ ದಿನದಂದು ಕಾರಿನಲ್ಲಿ 13 ಕಿ.ಮೀ ಎಳೆದೊಯ್ದ ನಂತರ ಮೃತಪಟ್ಟ ದೆಹಲಿ ಯುವತಿಯನ್ನು ಅವರು ಉಲ್ಲೇಖಿಸಿದ್ದಾರೆ.
ನಂತರ, ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ದ ಹೇಳಿಕೆಯನ್ನು ಬಿಡುಗಡೆ ಮಾಡಿತು, ಕಾರು ಅವರ ಬಳಿಗೆ ಬಂದಾಗ ಮಲಿವಾಲ್ ಏಮ್ಸ್ ಎದುರು ರಿಂಗ್ ರಸ್ತೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಚಾಲಕ ಕಿಟಕಿಯ ಕೆಳಗೆ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ. ಆದರೆ ಮಲಿವಾಲ್‌ ನಿರಾಕರಿಸಿದರು. ಆ ವ್ಯಕ್ತಿ ಸ್ವಲ್ಪ ಸಮಯದವರೆಗೆ ದಿಟ್ಟಿಸಿ ನೋಡಿ ನಂತರ ಸ್ಥಳ ತೊರೆದ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಅ ಬಂದ. ಆತ ಮತ್ತೆ ಾವರಿಗೆ ತನ್ನ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ. ಅವರು ಮತ್ತೆ ನಿರಾಕರಿಸಿದರು. ಆಗ ಆತ ಅ ಅಶ್ಲೀಲ ಸನ್ನೆಗಳನ್ನು ಮಾಡಲು ಪ್ರಾರಂಭಿಸಿದ, ”ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

“ಅವರು ಅವನಿಗೆ ಛೀಮಾರಿ ಹಾಕಲು ಅವನ ಬಳಿಗೆ ಬಂದಾಗ, ಆತ ಮತ್ತೆ ಅಸಭ್ಯವಗಿ ಸನ್ನೆ ಮಾಡಿದನ. ಆಗ ಮಲಿವಾಲ್‌ ಆತನನ್ನು ಹಿಡಿಯಲು ಚಾಲಕನ ಬದಿಯ ಕಾರಿನ ಕಿಟಕಿ ಬಳಿ ಬಂದು ಹಿಡಿಯಲು ಪ್ರಯತ್ನಿಸಿದಾಗ ಆತ ತಕ್ಷಣವೇ ಕಿಟಕಿ ಮುಚ್ಚಿದ., ಇದರಿಂದಾಗಿ ಮಲಿವಾಲ್‌ ಅವರ ಕೈ ಅದರಲ್ಲಿ ಸಿಲುಕಿಕೊಂಡಿತು. ನಂತರ ಆತ ಕಾರಿ ಚಲಾಯಿಸಿ ಹಲವಾರು ಮೀಟರ್‌ಗಳವರೆಗೆ ಅವರನ್ನು ಎಳೆದೊಯ್ದ. ಮಲಿವಾಲ್‌ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಹೇಳಿಕೆ ಮತ್ತಷ್ಟು ಹೇಳಿದೆ.
ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸರಿಂದ ವರದಿ ಕೇಳಿದೆ. ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿ, “ಆಘಾತಕಾರಿ ಘಟನೆ. ರಾಷ್ಟ್ರೀಯ ಮಹಿಳಾ ಆಯೋಗ (NCW) ದೆಹಲಿ ಪೊಲೀಸರಿಂದ ವರದಿಯನ್ನು ಕೇಳುತ್ತಿದೆ ಮತ್ತು ಅಪರಾಧ ಮಾಡಿದವನ ವಿರುದ್ಧ ಕಠಿಣ ಕ್ರಮಕ್ಕಾಗಿ ಬರೆಯುತ್ತಿದೆ.

ಪೊಲೀಸ್ ಉಪ ಕಮಿಷನರ್ (ದಕ್ಷಿಣ) ಚಂದನ್ ಚೌಧರಿ ಅವರು, ಬೆಳಿಗ್ಗೆ 3.05 ರ ಸುಮಾರಿಗೆ ಏಮ್ಸ್ ಎದುರಿನ ಪಾದಚಾರಿ ಮಾರ್ಗದಲ್ಲಿ ಗಸ್ತು ವಾಹನವೊಂದು ಅವರನ್ನು ಗುರುತಿಸಿತು ಮತ್ತು ತೊಂದರೆಯಲ್ಲಿದ್ದೀರಾ ಎಂದು ಅವರನ್ನು ವಿಚಾರಿಸಿದೆ. ಮಲಿವಾಲ್ ಪರಿಸ್ಥಿತಿ ವಿವರಿಸಿದ ನಂತರ, ಪೊಲೀಸರು ಕಾರನ್ನು ಟ್ರ್ಯಾಕ್ ಮಾಡಿ ಅದರ ಚಾಲಕ ಹರೀಶ್ ಚಂದ್ರನನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 , 354 ಮತ್ತು 509 ಅಡಿಯಲ್ಲಿ ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185ರ ಅಡಿಯಲ್ಲಿ ಕೋಟ್ಲಾ ಮುಬಾರಕ್ ಪುರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚೌಧರಿ ಹೇಳಿದ್ದಾರೆ. ಘಟನೆಯ ನಂತರ ದಕ್ಷಿಣ ದೆಹಲಿಯ ಸಂಗಮ್ ವಿಹಾರ್‌ನಲ್ಲಿ ವಾಸಿಸುತ್ತಿರುವ 47 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿವಾಲ್ ವರದಿ ಮಾಡಿದ 22 ನಿಮಿಷಗಳಲ್ಲಿ ಹರೀಶ್ ಚಂದ್ರ (47) ಎಂಬಾತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement