10 ತಿಂಗಳ ಮಗುವಿನ ಹೊಟ್ಟೆಯಲ್ಲಿ 3 ಭ್ರೂಣಗಳು ಪತ್ತೆ..!

ಅಪರೂಪದ ಪ್ರಕರಣವೊಂದರಲ್ಲಿ ಅಸ್ಸಾಂನ ದಿಬ್ರುಗಢದ ಅಪೇಕ್ಷಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ, 10 ತಿಂಗಳ ಗಂಡು ಮಗುವಿನ ಹೊಟ್ಟೆಯಿಂದ ಮೂರು ಭ್ರೂಣಗಳನ್ನು ತೆಗೆದುಹಾಕಲಾಗಿದೆ. ಅಪೇಕ್ಷಾ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ತಂಡ ಹೇಳಿರುವಂತೆ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ‘ಫೋಟಸ್ ಇನ್ ಫೀಟೊ’ ಎಂದು ಹೇಳಲಾಗಿದೆ. ದೊಡ್ಡ ಹೊಟ್ಟೆಯನ್ನು ಹೊಂದಿದ್ದ 10 ತಿಂಗಳ ಬಾಲಕನನ್ನು ಅಪೇಕ್ಷಾ ಆಸ್ಪತ್ರೆಯಲ್ಲಿ … Continued

ಬಳ್ಳಾರಿಯಲ್ಲಿ ಗಾಯಕಿ​ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ

ಬಳ್ಳಾರಿ: ಬಳ್ಳಾರಿಯಲ್ಲಿ ತೆಲುಗು ಮೂಲದ ಗಾಯಕಿ ಮಂಗ್ಲಿ ಕಾರಿನ ಮೇಲೆ ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಗಾಯಕಿ ಮಂಗ್ಲಿ ಆಗಮಿಸಿದ್ದರು. ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ … Continued

ತಮ್ಮ 93ನೇ ಜನ್ಮದಿನದಂದು 4ನೇ ಬಾರಿಗೆ ವಿವಾಹವಾದ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಎಂದು ಖ್ಯಾತಿ ಪಡೆದ ಬಜ್ ಆಲ್ಡ್ರಿನ್…!

ಅಮೆರಿಕದ ಮಾಜಿ ಗಗನಯಾತ್ರಿ ಬಜ್ ಆಲ್ಡ್ರಿನ್ ತಮ್ಮ 93ನೇ ಜನ್ಮದಿನದಂದು ನಾಲ್ಕನೇ ಬಾರಿಗೆ ವಿವಾಹವಾದರು. ಆಲ್ಡ್ರಿನ್ ಅವರು 1969 ರಲ್ಲಿ ಚಂದ್ರನ ಮೇಲೆ ಇಳಿದ ಐತಿಹಾಸಿಕ ಅಪೊಲೊ-11 ಬಾಹ್ಯಾಕಾಶ ನೌಕೆಯ ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು, ಮಿಷನ್‌ನ ಕಮಾಂಡರ್ ನೀಲ್ ಆರ್ಮ್‌ಸ್ಟ್ರಾಂಗ್ ನಂತರ ಚಂದ್ರನ ಮೇಲೆ ನಡೆದ ವ್ಯಕ್ತಿಗಳಾಗಿ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಚಂದ್ರನ ಮೇಲೆ ಕಾಲಿಟ್ಟಿರುವ ಜೀವಂತವಾಗಿರುವ … Continued

ಮೈಸೂರು: ಚಿರತೆ ದಾಳಿಗೆ ಬಾಲಕ ಸಾವು, ಗ್ರಾಮದ ಸಮೀಪ ಚಿರತೆ ಎಳೆದೊಯ್ದ ಶವ ಪತ್ತೆ

ಮೈಸೂರು : ಜಿಲ್ಲೆಯ ಟಿ.ನರಸಿಪುರ ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಈಗ 11 ವರ್ಷದ ಬಾಲಕನನ್ನ ಚಿರತೆ ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೃತ ಬಾಲಕನನ್ನು ಹೊರಳಹಳ್ಳಿ ಗ್ರಾಮದ ಜಯಂತ (11) ಎಂದು ಗುರುತಿಸಲಾಗಿದೆ. ಬಾಲಕ ಜಯಂತನ ಶವಕ್ಕಾಗಿ ರಾತ್ರಿಯೆಲ್ಲಾ ಗ್ರಾಮಸ್ಥರು ಹುಡುಕಾಟ ನಡೆಸಿದ್ದು ಘಟನಾ ಸ್ಥಳದಿಂದ 1 ಕಿಮೀ … Continued

ಯಾವುದೇ ಜಾಹೀರಾತುಗಳಿಲ್ಲದ ಚಂದಾದಾರಿಕೆಯ ಮಾದರಿ ಹೊರತರಲಿರುವ ಟ್ವಿಟರ್‌ : ಎಲೋನ್ ಮಸ್ಕ್

ಟ್ವಿಟರ್ ಬಳಕೆದಾರರಿಗೆ ಯಾವುದೇ ಜಾಹೀರಾತುಗಳಿಲ್ಲದ ಹೆಚ್ಚಿನ ಬೆಲೆಯ ಚಂದಾದಾರಿಕೆ ಯೋಜನೆ ಪರಿಚಯಿಸಲು ಎಲೋನ್ ಮಸ್ಕ್ ಯೋಜಿಸುತ್ತಿದ್ದಾರೆ. ಅವರು ಈ ಬಗ್ಗೆ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, ಜಾಹೀರಾತುಗಳು “ಟ್ವಿಟರ್‌ನಲ್ಲಿ ತುಂಬಾ ದೊಡ್ಡದಾಗಿದೆ” ಮತ್ತು ಮುಂಬರುವ ವಾರಗಳಲ್ಲಿ ಆ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. “ಅಲ್ಲದೆ, ಶೂನ್ಯ ಜಾಹೀರಾತುಗಳನ್ನು ಅನುಮತಿಸಲು … Continued

ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ರಾಮಚಂದ್ರ ಹುದ್ದಾರ್‌, ವೆಂಕಟೇಶ ನಾಯಕ್‌ ನೇಮಕ

ಬೆಂಗಳೂರು: ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ ವೆಂಕಟೇಶ ನಾಯಕ್‌ ಅವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ. ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಮತ್ತು ವೆಂಕಟೇಶ್ … Continued