ನಾವು ಭಯೋತ್ಪಾದನೆ ಬೀಜ ಬಿತ್ತಿದ್ದೇವೆ, ಇಸ್ರೇಲ್‌-ಭಾರತದಲ್ಲೂ ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಟ್ಟಿಲ್ಲ; ಪೇಶಾವರ ಸ್ಫೋಟದ ಬಗ್ಗೆ ಪಾಕ್ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಂಗಳವಾರ ತಮ್ಮ ದೇಶವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ “ಭಾರತ ಅಥವಾ ಇಸ್ರೇಲ್‌ನಲ್ಲಿಯೂ ಸಹ ಪ್ರಾರ್ಥನೆಯ ಸಮಯದಲ್ಲಿ ಯಾರೂ ಕೊಲ್ಲಲ್ಪಟ್ಟಿಲ್ಲ, ಆದರೆ ಇದು ಪಾಕಿಸ್ತಾನದಲ್ಲಿ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಪೇಶಾವರದ ಮಸೀದಿಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 100 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡ ಒಂದು ದಿನದ ನಂತರ ಪಾಕಿಸ್ತಾನದ ರಕ್ಷಣಾ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿ ಸೋಮವಾರ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆಗಾಗಿ 300 ರಿಂದ 400 ಪೊಲೀಸರು ಜಮಾಯಿಸಿದ್ದರು, ಆ ವೇಳೆ ಆತ್ಮಾಹುತಿ ಬಾಂಬರ್‌ ಬಾಂಬ್‌ ಸ್ಫೋಟಗೊಳಿಸಿಕೊಂಡಿದ್ದು, ಮಸೀದಿಯ ಸಂಪೂರ್ಣ ಗೋಡೆ ಮತ್ತು ಮೇಲ್ಛಾವಣಿ ಹಾರಿಹೋಗಿ, ಜನರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಆಸಿಫ್, “ನಾನು ಹೆಚ್ಚು ಕಾಲ ಮಾತನಾಡುವುದಿಲ್ಲ ಆದರೆ ಆರಂಭದಲ್ಲಿ ನಾವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ ಎಂದು ಸಂಕ್ಷಿಪ್ತವಾಗಿ ಹೇಳುತ್ತೇನೆ” ಎಂದು ಹೇಳಿದರು.
ಇದಲ್ಲದೆ, ಪೇಶಾವರದ ಮಸೀದಿ ಆವರಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬರ್ ಜುಹರ್ ಪ್ರಾರ್ಥನೆಯ ಸಮಯದಲ್ಲಿ ಮುಂಭಾಗದಲ್ಲಿ ನಿಂತಿದ್ದ ಎಂದು ಅವರು ಹೇಳಿದರು.ವರದಿಯ ಪ್ರಕಾರ, ಪೇಶಾವರ ಮಸೀದಿ ಸ್ಫೋಟಕ್ಕೆ ಯಾರು ಹೊಣೆಗಾರರಾಗುತ್ತಾರೆ ಎಂದು ಆಸಿಫ್ ಪ್ರಶ್ನಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಇಡೀ ರಾಷ್ಟ್ರ ಒಗ್ಗಟ್ಟಾಗಬೇಕಾದ ಅಗತ್ಯವಿದ್ದು, ಆಗ ಮಾತ್ರ ಅದರ ವಿರುದ್ಧ ಹೋರಾಡಲು ಸಾಧ್ಯ ಎಂದು ಸಚಿವರು ಹೇಳಿದರು.
“ಭಯೋತ್ಪಾದನೆಯು ಯಾವುದೇ ಧರ್ಮ ಅಥವಾ ಪಂಥದ ನಡುವೆ ವ್ಯತ್ಯಾಸ ಹೊಂದಿಲ್ಲ. ಭಯೋತ್ಪಾದನೆಯನ್ನು ಧರ್ಮದ ಹೆಸರಿನಲ್ಲಿ ಅಮೂಲ್ಯವಾದ ಜೀವಗಳನ್ನು ತೆಗೆಯಲು ಬಳಸಲಾಗುತ್ತದೆ” ಎಂದು ಸಚಿವರ ಹೇಳಿಕೆ ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ದಾಳಿಯ ಕುರಿತು ಮಾತನಾಡಿದ ಆಸಿಫ್, “ಭಾರತ ಅಥವಾ ಇಸ್ರೇಲ್‌ನಲ್ಲಿಯೂ ಸಹ ಪ್ರಾರ್ಥನೆಯ ಸಮಯದಲ್ಲಿ ಪ್ರಾರ್ಥಿಸುವವರು ಕೊಲ್ಲಲ್ಪಟ್ಟಿಲ್ಲ ಆದರೆ ಅದು ಪಾಕಿಸ್ತಾನದಲ್ಲಿ ಸಂಭವಿಸಿದೆ” ಎಂದು ಹೇಳಿದರು. ಭಯೋತ್ಪಾದನೆ ಎದುರಿಸಲು ಪಾಕಿಸ್ತಾನವು ತನ್ನ “ಮನೆಯನ್ನು” ಹೊಂದಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಏಕತೆಗಾಗಿ ಕರೆ ನೀಡಿದ ಅವರು ಪಾಕಿಸ್ತಾನವು ತನ್ನ “ಮನೆಯನ್ನು ಸರಿಯಾಗಿ” ಹೊಂದಿಸಿಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಈ ಹಿಂದೆ ಅಫ್ಘಾನಿಸ್ತಾನದ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಮಾತನಾಡಿದ ಪಾಕಿಸ್ತಾನ ರಕ್ಷಣಾ ಸಚಿವರು, ರಷ್ಯಾ ಅಫ್ಘಾನಿಸ್ತಾನವನ್ನು ಆಕ್ರಮಿಸಿದಾಗ, ಪಾಕಿಸ್ತಾನವು ತನ್ನ ಸೇವೆಗಳನ್ನು ಅಮೆರಿಕಕ್ಕೆ ‘ಬಾಡಿಗೆ’ ನೀಡಿತು ಎಂದು ಅವರು ಹೇಳಿದರು. “ಜನರಲ್ ಜಿಯಾ ಆ ಸಮಯದಲ್ಲಿ ಆಡಳಿತಗಾರರಾಗಿದ್ದರು … ಅಮೆರಿಕ ಜೊತೆ ಮಾಡಿಕೊಂಡ ಒಪ್ಪಂದವು ಎಂಟರಿಂದ ಒಂಬತ್ತು ವರ್ಷಗಳವರೆಗೆ ಮುಂದುವರೆಯಿತು, ನಂತರ ಅಮೆರಿಕ ವಾಷಿಂಗ್ಟನ್‌ಗೆ ಹಿಂತಿರುಗಿ ರಷ್ಯಾವನ್ನು ಸೋಲಿಸಿದ ಸಂಗತಿಯನ್ನು ಆಚರಣೆ ಮಾಡಿತು” ಎಂದು ಅವರು ಹೇಳಿದ್ದಾರೆ. ಮುಂದಿನ 10 ವರ್ಷಗಳ ನಂತರ ಪಾಕಿಸ್ತಾನ ಭಯೋತ್ಪಾದನೆ ಎದುರಿಸಲು ಪಾಕಿಸ್ತಾನಕ್ಕೆ ಬಿಡಲಾಯಿತು” ಎಂದು ಆಸಿಫ್ ಹೇಳಿದ್ದಾರೆ ಎಂದು ಡಾನ್ ವರದಿ ಹೇಳಿದೆ.
ಆ 10 ವರ್ಷಗಳು ಕಳೆದ ನಂತರ, 9/11 ಸಂಭವಿಸಿತು. ಅಲ್ಲಿಂದ ಬೆದರಿಕೆ ಬಂದಿತು ಮತ್ತು ನಾವು ಮತ್ತೊಂದು ಯುದ್ಧದಲ್ಲಿ ತೊಡಗಿದ್ದೇವೆ” ಎಂದು ಅವರು ಹೇಳಿದರು.
ಈ ವಿಷಯದ ಬಗ್ಗೆ ವಿವಿಧ ಅಭಿಪ್ರಾಯಗಳ ಹೊರತಾಗಿಯೂ, ಯಾವುದೇ “ನಿರ್ಣಾಯಕ ನಿರ್ಧಾರ” ತೆಗೆದುಕೊಳ್ಳಲಾಗಿಲ್ಲ ಎಂದು ರಕ್ಷಣಾ ಸಚಿವರು ಹೇಳಿದರು. ಆಫ್ಘನ್ನರು ಪಾಕಿಸ್ತಾನಕ್ಕೆ ಬಂದು ನೆಲೆಸಿದ ನಂತರ ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಡಾನ್ ವರದಿ ತಿಳಿಸಿದೆ.
ಏತನ್ಮಧ್ಯೆ, ಪೇಶಾವರ ಮಸೀದಿ ಸ್ಫೋಟದಲ್ಲಿ ಸತ್ತವರ ಸಂಖ್ಯೆ ಬುಧವಾರ 100 ಕ್ಕೆ ಏರಿದೆ. ಸ್ಫೋಟದಲ್ಲಿ ಕನಿಷ್ಠ 170 ಜನರು ಗಾಯಗೊಂಡರು, ಇದು ನೂರಾರು ಜನರು ಮಧ್ಯಾಹ್ನದ ಪ್ರಾರ್ಥನೆಯನ್ನು ನಡೆಸುತ್ತಿದ್ದಾಗ ಆತ್ಮಾಹುತಿ ಬಾಂಬರ್‌ ಸ್ಫೋಟಿಸಿಕೊಂಡಿದ್ದಾನೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement