ವಾರದೊಳಗೆ ಅತಿಕ್ರಮಣ ತೆರವು ಮಾಡಿ : ಭಗವಾನ್‌ ಬಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ…!

ಮೊರೆನಾ: ಭೂ “ಅತಿಕ್ರಮಣ” ತೆರವು ಮಾಡಲು ಸೂಚಿಸಿ ರೈಲ್ವೇ ಇಲಾಖೆಯು ಬಜರಂಗ ಬಲಿ(ಹನುಮಂತ) ದೇವರಿಗೆ ನೋಟಿಸ್ ನೀಡಿದ ವಿದ್ಯಮಾನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ನಡೆದಿದೆ. ತಪ್ಪಿನ ಅರಿವಾದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಫೆಬ್ರವರಿ 8 ರಂದು ಭಗವಾನ್‌ ಬಜರಂಗ ಬಲಿ(ಹನುಮಂತ ದೇವರು)ಗೆ ನೋಟಿಸ್ ಕಳುಹಿಸಲಾಗಿತ್ತು, ಅದರಲ್ಲಿ ಒಂದು ವಾರದಲ್ಲಿ ಅತಿಕ್ರಮಣ ತೆರವು ಮಾಡುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಒಂದು ವೇಳೆ ರೈಲ್ವೆ ಇಲಾಖೆ ಕಟ್ಟಡ ತೆರವಿಗೆ ಕ್ರಮ ಕೈಗೊಂಡರೆ ಅದಕ್ಕೆ ತಗಲುವ ವೆಚ್ಚವನ್ನು ಅತಿಕ್ರಮಣದಾರರೇ ಭರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನಂತರ ಈ ಸೂಚನೆಯನ್ನು ದೇವಸ್ಥಾನದಲ್ಲಿ ಅಂಟಿಸಲಾಯಿತು. ಇದು ನೋಟಿಸ್‌ ವೈರಲ್‌ ಆಗಿ ಕೋಲಾಹಲಕ್ಕೆ ಕಾರಣವಾಯಿತು, ನಂತರ ರೈಲ್ವೆ ಇಲಾಖೆ ತನ್ನ ಎಡವಟ್ಟನ್ನು ಸರಿಪಡಿಸಿಕೊಂಡು ದೇವಸ್ಥಾನದ ಅರ್ಚಕರಿಗೆ ಹೊಸ ನೋಟಿಸ್ ನೀಡಿದೆ. ಝಾನ್ಸಿ ರೈಲ್ವೇ ವಿಭಾಗದ ಪಿಆರ್‌ ಅಧಿಕಾರಿ ಮನೋಜ್ ಮಾಥುರ್ ಅವರು, ಆರಂಭದಲ್ಲಿ ನೋಟಿಸ್‌ ಅನ್ನು ತಪ್ಪಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈಗ, ಹೊಸ ನೋಟಿಸ್ ಅನ್ನು ದೇವಾಲಯದ ಅರ್ಚಕರ ಹೆಸರಿಗೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ಹಿಂದೆ, ಝಾನ್ಸಿ ರೈಲ್ವೇ ವಿಭಾಗದ ಹಿರಿಯ ವಿಭಾಗದ ಇಂಜಿನಿಯರ್ ಅವರು “ಬಜರಂಗ್ ಬಲಿ, ಸಬಲ್ಗಢ” ಹೆಸರಿನಲ್ಲಿ ನೋಟಿಸ್ ನೀಡಿದ್ದರು.
ಶಿಯೋಪುರ್-ಗ್ವಾಲಿಯರ್ ಬ್ರಾಡ್-ಗೇಜ್ ಮಾರ್ಗದ ನಿರ್ಮಾಣಕ್ಕಾಗಿ ಅಲ್ಲಿದ್ದ ಕಟ್ಟಡ ತೆರವು ಮಾಡಬೇಕಾಗಿತ್ತು. ಫೆಬ್ರವರಿ 10 ರಂದು ಹೊರಡಿಸಲಾದ ಹೊಸ ನೋಟೀಸ್ ಅನ್ನು ದೇವಾಲಯದ ಅರ್ಚಕ ಹರಿಶಂಕರ್ ಶರ್ಮಾ ಹೆಸರಿನಲ್ಲಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement