ಜಾತಿ ಗಣತಿ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ಕಾಂಗ್ರೆಸ್ ಸಂಸದನ ಭಿನ್ನ ನಿಲುವು

ನವದೆಹಲಿ : ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಅಭಿಷೇಕ ಮನು ಸಿಂಘ್ವಿ ಅವರು “ಜಿತ್ನಿ ಅಬಾದಿ ಉತ್ನಾ ಹಕ್” (ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು) ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿಲುವಿಗಿಂತ ಭಿನ್ನವಾದ ನಿಲುವನ್ನು ತೆಗೆದುಕೊಂಡಿದ್ದಾರೆ.
ಅಭಿಷೇಕ ಮನು ಸಿಂಗ್ವಿ ಅವರು X ನಲ್ಲಿನ ಪೋಸ್ಟ್‌ನಲ್ಲಿಜನಸಂಖ್ಯಾ ಆಧಾರಿತ ಹಕ್ಕು’ಗಳ ಬಗ್ಗೆ ಅಂದರೆ ‘ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕುಗಳು’ ಎಂಬ ಕಲ್ಪನೆಯು ಅಂತಿಮವಾಗಿ ‘ಬಹುಸಂಖ್ಯಾತ ವಾದ’ದಲ್ಲಿ ಕೊನೆಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
ಜನಸಂಖ್ಯೆಯ ಆಧಾರದ ಮೇಲೆ ಹಕ್ಕುಗಳಿಗಾಗಿ ಬ್ಯಾಟಿಂಗ್ ಮಾಡುವವರು ಈ ತರಹದ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. “ಅವಕಾಶದ ಸಮಾನತೆ ಎಂದಿಗೂ ಫಲಿತಾಂಶಗಳ ಸಮಾನತೆಯಲ್ಲ. ʼಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕುʼ ಎಂಬುದನ್ನು ಅನುಮೋದಿಸುವ ಜನರು ಮೊದಲು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಇದು ಅಂತಿಮವಾಗಿ ʼಬಹುಸಂಖ್ಯಾತ ವಾದದ ಪರಾಕಾಷ್ಠೆʼಯಾಗುತ್ತದೆ ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಗಮನಾರ್ಹವೆಂದರೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ‘”ಜಿತ್ನಿ ಆಬಾದಿ ಉತ್ನಾ ಹಕ್” ಘೋಷಣೆಯನ್ನು ಅನುಮೋದಿಸಿದ್ದಾರೆ ಹಾಗೂ ಇದು ಕಾಂಗ್ರೆಸ್‌ನ ಪ್ರತಿಜ್ಞೆಯಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಬಿಹಾರ ರಾಜ್ಯ ಸರ್ಕಾರ ತನ್ನ ಜಾತಿ ಆಧಾರಿತ ಸಮೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ನಂತರ, ರಾಹುಲ್ ಗಾಂಧಿ ಮತ್ತೊಮ್ಮೆ ಜನಸಂಖ್ಯೆ ಆಧಾರಿತ ಹಕ್ಕುಗಳಿಗೆ ಕರೆ ನೀಡಿದರು.
“ಬಿಹಾರದ ಜಾತಿ ಗಣತಿಯು ಅಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಜನಸಂಖ್ಯೆಯ 84%ರಷ್ಟಿವೆ ಎಂದು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ, ಕೇವಲ 3 ಹಿಂದುಳಿದ ವರ್ಗಳ ಕಾರ್ಯದರ್ಶಿಗಳಿದ್ದಾರೆ, ಭಾರತದ ಬಜೆಟ್‌ನ 5% ಅನ್ನು ಮಾತ್ರ ಅವರು ನಿರ್ವಹಿಸುತ್ತಾರೆ! ಆದ್ದರಿಂದ, ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಭಾರತದಜಿತ್ನಿ ಅಬಾದಿ ಉತ್ನಾ ಹಕ್” (ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕು)’ – ಇದು ನಮ್ಮ ಪ್ರತಿಜ್ಞೆ” ಎಂದು ರಾಹುಲ್ ಗಾಂಧಿ ಸೋಮವಾರ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್‌ ರೆಡ್ಡಿ ಆಯ್ಕೆ

ಬಿಹಾರ ಸರ್ಕಾರವು ಸೋಮವಾರ ಜಾತಿ ಸಮೀಕ್ಷೆಯ ಡೇಟಾವನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಅಂಕಿಅಂಶಗಳೊಂದಿಗೆ, ಇತರೆ ಹಿಂದುಳಿದ ಜಾತಿ (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಒಟ್ಟಾಗಿ ರಾಜ್ಯದ ಜನಸಂಖ್ಯೆಯ 63 ಪ್ರತಿಶತದಷ್ಟಿದೆ ಎಂದು ಇದು ತೋರಿಸುತ್ತದೆ.
ಜ್ಯಾದಾ ಅಬಾದಿ ಉತ್ನಾ ಹಕ್” (ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕು)’ ಹೇಳಿಕೆಯ ಬಗ್ಗೆ ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಮೇರೆ ಲಿಯೇ ಗರೀಬ್ ಸಬ್ಸೆ ಬಡಿ ಅಬಾದಿ ಹೈ’ (ನನಗೆ, ದೊಡ್ಡ ಜನಸಂಖ್ಯೆ ಬಡವರು) ಎಂದು ಹೇಳಿದ್ದಾರೆ.
ಬಡವರಿಗೆ ಸಂಪನ್ಮೂಲ ನೀಡಲು ಮೊದಲ ಆದ್ಯತೆ ನೀಡುವುದು ನನ್ನ ಏಕೈಕ ಗುರಿಯಾಗಿದೆ” ಎಂದು ಚುನಾವಣಾ ಕಣದಲ್ಲಿರುವ ಛತ್ತೀಸ್‌ಗಢದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು, ಮುಸ್ಲಿಮರಿಗೆ ಹೆಚ್ಚು ಹಕ್ಕಿದೆ ಎಂದು ಹೇಳುತ್ತಿದ್ದರು ಆದರೆ ಕಾಂಗ್ರೆಸ್ ಈಗ ಬೇರೆಯದನ್ನು ಹೇಳುತ್ತಿದೆ ಎಂದು ಹೇಳಿದರು.
‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏನು ಯೋಚಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ, ಅವರು ಅಲ್ಪಸಂಖ್ಯಾತರಿಗೆ ದೇಶದ ಸಂಪನ್ಮೂಲಗಳಲ್ಲಿ ಮೊದಲ ಹಕ್ಕು ಮತ್ತು ಮುಸ್ಲಿಮರದು ಮೊದಲ ಹಕ್ಕು ಎಂದು ಹೇಳುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಸಮುದಾಯದ ಜನಸಂಖ್ಯೆಯು ಜನರ ಹಕ್ಕನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಿದೆ. ದೇಶದ ಸಂಪನ್ಮೂಲಗಳ ಮೊದಲ ಹಕ್ಕು ಯಾರಿಗೆ ಇರುತ್ತದೆ ? ಹಾಗಾದರೆ ಈಗ ಅವರು (ಕಾಂಗ್ರೆಸ್) ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತಾರೆಯೇ? ಅವರು ಅಲ್ಪಸಂಖ್ಯಾತರನ್ನು ತೆಗೆದುಹಾಕಲು ಬಯಸುತ್ತಾರೆಯೇ? ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹಿಂದೂಗಳು ಮುಂದೆ ಬರಬೇಕು ಮತ್ತು ಅವರ ಎಲ್ಲಾ ಹಕ್ಕುಗಳನ್ನು ತೆಗೆದುಕೊಳ್ಳುವರೇ ಎಂದು ಮೋದಿ ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಸಿಂಘ್ವಿ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ತಮ್ಮ ಪಕ್ಷದ ಸಹೋದ್ಯೋಗಿ ಹೇಳಿಕೆ ಅವರ ವೈಯಕ್ತಿಕ ದೃಷ್ಟಿಕೋನವಾಗಿದೆ, ಇದು ಕಾಂಗ್ರೆಸ್‌ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.
ಡಾ. ಸಿಂಘ್ವಿಯವರ ಟ್ವೀಟ್ ಅವರ ವೈಯಕ್ತಿಕ ದೃಷ್ಟಿಕೋನದ ಪ್ರತಿಬಿಂಬವಾಗಿರಬಹುದು ಆದರೆ ಯಾವುದೇ ರೀತಿಯಲ್ಲಿ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾನವನ್ನು ಪ್ರತಿಬಿಂಬಿಸುವುದಿಲ್ಲ – ಇದರ ಸಾರವು ಫೆಬ್ರವರಿ 26, 2023 ರಂದು ರಾಯ್‌ಪುರ ಘೋಷಣೆಯಲ್ಲಿ ಮತ್ತು ಸೆಪ್ಟೆಂಬರ್ 16, 2023 ಸಿಡಬ್ಲ್ಯುಸಿ ನಿರ್ಣಯದಲ್ಲಿ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ರಮೇಶ್ ಅವರ ಪ್ರತಿಕ್ರಿಯೆಯ ನಂತರ, ಸಿಂಘ್ವಿ ತಮ್ಮ ಪೋಸ್ಟ್ ಅನ್ನು ಎಕ್ಸ್‌ನಿಂದ ಅಳಿಸಿದ್ದಾರೆ.

ಬಿಹಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು ಶೇ.19.65 ಮತ್ತು ಪರಿಶಿಷ್ಟ ಪಂಗಡಗಳು ಶೇ.1.68 ರಷ್ಟಿವೆ. ಜನಸಂಖ್ಯೆಯಲ್ಲಿ ಹಿಂದೂಗಳು 81.99%, ಮುಸ್ಲಿಮರು 17.7%, ಕ್ರಿಶ್ಚಿಯನ್ನರು 0.05%, ಸಿಖ್ಖರು 0.01%, ಬೌದ್ಧರು 0.08% ಮತ್ತು ಇತರ ಧರ್ಮಗಳು 0.12% ಎಂದು ಅಂಕಿಅಂಶಗಳು ತಿಳಿಸಿವೆ. ಒಬಿಸಿಯಲ್ಲಿ ಯಾದವರ ಗುಂಪು ದೊಡ್ಡದಾಗಿದೆ ಮತ್ತು ರಾಜ್ಯದ ಜನಸಂಖ್ಯೆಯ ಶೇಕಡಾ 14.27 ರಷ್ಟಿದೆ ಎಂದು ಡೇಟಾ ಹೇಳಿದೆ.
ಕುಶ್ವಾಹ ಮತ್ತು ಕುರ್ಮಿ ಸಮುದಾಯಗಳು ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ ಎಂದು ಜಾತಿ ಸಮೀಕ್ಷೆ ಹೇಳಿದೆ. ಜನಸಂಖ್ಯೆಯಲ್ಲಿ ಭೂಮಿಹಾರ್‌ಗಳು ಶೇಕಡಾ 2.86, ಬ್ರಾಹ್ಮಣರು 3.66 ಶೇಕಡಾ ಮತ್ತು ಮುಸಾಹರ್‌ಗಳು 3 ಶೇಕಡಾ ಇದ್ದಾರೆ ಎಂದು ಸಮೀಕ್ಷೆ ಹೇಳಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement