‘ಭಾರತದ ಮೇಲೆ ಆಕ್ರಮಣ ಮಾಡಿ ಮೋದಿಯನ್ನು ಸರಪಳಿ ಹಾಕಿ ಬಂಧಿಸ್ತೇವೆ’: ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ | ವೀಡಿಯೊ ವೀಕ್ಷಿಸಿ

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ಅಪಹಾಸ್ಯ ಮಾಡುತ್ತಿರುವಾಗ, ಅದರ ಹಿರಿಯ ಸೇನಾಧಿಕಾರಿ ಇತ್ತೀಚೆಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಷ ಕಕ್ಕುತ್ತಿರುವುದು ಕಂಡುಬಂದಿದೆ.
ಪಾಕಿಸ್ತಾನದ ಹಿರಿಯ ಸೇನಾಧಿಕಾರಿಯೊಬ್ಬರು ಗುಂಪನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತವನ್ನು ವಶಪಡಿಸಿಕೊಳ್ಳುವುದು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸಿ ಇಸ್ಲಾಮಿಕ್ ರಾಷ್ಟ್ರಕ್ಕೆ ಸರಪಳಿಯಲ್ಲಿ ಕರೆತರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲ, ಭಾರತವನ್ನು ಆಕ್ರಮಿಸಿದ ನಂತರ ಪ್ಯಾಲೆಸ್ತೀನ್ ಅನ್ನು ಇಸ್ರೇಲಿನಿಂದ ವಿಮೋಚನೆಗೊಳಿಸ್ತೇವೆ ಎಂದು ಪಾಕಿಸ್ತಾನಿ ಸೇನೆಯ ಹಿರಿಯ ಅಧಿಕಾರಿ ಹೇಳಿದ್ದಾನೆ. ವಿಚಿತ್ರವೆಂದರೆ ಅಲ್ಲಿ ನಿಂತಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಈ ವೀಡಿಯೊ ನೋಡುತ್ತಿರುವ ನೆಟ್ಟಿಗರು ಪಾಕಿಸ್ತಾನದ ಸೇನೆ ಬಗ್ಗೆ ಹಲವು ಉದಾಹರಣೆ ನೀಡಿ ಟ್ರೋಲ್ ಮಾಡುತ್ತಿದ್ದಾರೆ.
ನಮ್ಮ ದೇಶದ ಮೇಲೆ ಆಕ್ರಮಣ ಮಾಡುವ ಕನಸು ಕಾಣುವ ಮೊದಲು ನಿಮ್ಮ ದೇಶದ ಪ್ರಜೆಗಳಿಗೆ ಮೊದಲು ಹೊಟ್ಟೆಗೆ ಹಾಕುವ ಬಗ್ಗೆ ಯೋಚನೆ ಮಾಡಿ ಎಂದು ಅನೇಕರು ಪಾಕಿಸ್ತಾನದ ಕಾಲೆಳೆದಿದ್ದಾರೆ.
ಭಾರತದ ಪ್ರಧಾನಿಯನ್ನ ಬಂಧಿಸುವ ಮುನ್ನ ಪಾಕಿಸ್ತಾನ 1971ರ ಯುದ್ಧವನ್ನು ನೆಪಿಸಿಕೊಳ್ಳಲಿ. ಇಡೀ ವಿಶ್ವದ ಯುದ್ಧಗಳಲ್ಲಿ ಅತಿ ಹೆಚ್ಚು ಸೈನಿಕರು ಶರಣಾಗಿದ್ದು ನಿಮ್ಮ ದೇಶದಿಂದಲೇ ಎಂದು ಫೋಟೋ ಸಮೇತ ಪೋಸ್ಟ್​ ಮಾಡಿ ಪಾಕಿಸ್ತಾನದ ಸೇನೆಯನ್ನ ಟ್ರೋಲ್ ಮಾಡಲಾಗುತ್ತಿದೆ. ಬಾಂಗ್ಲಾದೇಶ ವಿಮೋಚನೆಗಾಗಿ ನಡೆದ ಯುದ್ದದಲ್ಲಿ ಬಾಂಗ್ಲಾಕ್ಕೆ ಬೆಂಬಲ ಸೂಚಿಸಿ ನಡೆಸಿದ ಯುದ್ಧದ ವೇಳೆ ಬರೋಬ್ಬರಿ 93 ಸಾವಿರ ಪಾಕಿಸ್ತಾನದ ಸೈನಿಕರು ಶರಣಾಗತರಾಗಿದ್ದರು. ಇದು ಇಂದಿಗೂ ಅತಿ ಹೆಚ್ಚು ಸೈನಿಕರು ಯುದ್ಧದಲ್ಲಿ ಶರಣಾದ ದಾಖಲೆಯಾಗಿ ಉಳಿದುಕೊಂಡಿದೆ ಎಂದು ಕೆಲವರು ಅಪಹಾಸ್ಯ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ....| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ...!

ನಿವೃತ್ತ ಮೇಜರ್ ಜನರಲ್ ಗೌರವ್ ಆರ್ಯ ಅವರು ಪಾಕಿಸ್ತಾನಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಮತ್ತು “ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಮಾತನಾಡುವ ಮೊದಲು ತೂಕ ಇಳಿಸಿಕೊಳ್ಳಲು ನಾನು ಈ ಪಾಕಿಸ್ತಾನದ ಸೇನಾ ಅಧಿಕಾರಿಗೆ ಸಲಹೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement