ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡಿನಲ್ಲಿ ಸುಲ್ತಾನ್‌ ಬತ್ತೇರಿ ಸದ್ದು : ಗೆದ್ದು ಬಂದ್ರೆ ಪಟ್ಟಣದ ಹೆಸರು ಬದಲಾಯಿಸ್ತೇವೆ ಎಂದ ಬಿಜೆಪಿ ಅಭ್ಯರ್ಥಿ

ವಯನಾಡು (ಕೇರಳ) : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಈಗ ಸುಲ್ತಾನ್‌ ಬತ್ತೇರಿ ಹೆಸರು ಈಗ ಚರ್ಚೆಯಲ್ಲಿದೆ. ರಾಹುಲ್‌ ಗಾಂಧಿ ಎದುರು ಕಣಕ್ಕಿಳಿದಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್‌ ಅವರು ನಾನು ಗೆದ್ದರೆ ಸುಲ್ತಾನ್‌ ಬತ್ತೇರಿ ಪಟ್ಟಣದ ಹೆಸರನ್ನು ಗಣಪತಿ ವಟ್ಟಂ ಎಂದು ಬದಲಾಯಿಸುತ್ತೇನೆ. ಇದೇ ನನ್ನ ಮೊದಲ ಆದ್ಯತೆ ಎಂದು ಹೇಳಿರುವುದು ಈಗ ವಿವಾದ ಸೃಷ್ಟಿಸಿದೆ.
ಮೈಸೂರಿನ ಅರಸ ಟಿಪ್ಪು ಸುಲ್ತಾನ್‌ ಜೊತೆ ಸುಲ್ತಾನ್‌ ಬತ್ತೇರಿ ಪಟ್ಟಣ ಸಂಬಂಧ ಹೊಂದಿದ್ದು, ಕೇರಳದಲ್ಲೂ ಟಿಪ್ಪುವಿನ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.
ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ವಯನಾಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್‌ ಅವರು, ಟಿಪ್ಪು ಸುಲ್ತಾನ್‌ ವಿಶೇಷವಾಗಿ ವಯನಾಡಿನಲ್ಲಿ ಟಿಪ್ಪು ಸುಲ್ತಾನ್‌ ಲಕ್ಷಗಟ್ಟಲೇ ಹಿಂದೂಗಳನ್ನು ಮತಾಂತರ ಮಾಡಿದ್ದ ಎಂದು ಹೇಳಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಯಾರು? ವಯನಾಡು ಮತ್ತು ಅಲ್ಲಿನ ಜನರ ವಿಷಯಕ್ಕೆ ಬಂದಾಗ, ಅವನ ಪ್ರಾಮುಖ್ಯತೆ ಏನು? ಆ ಸ್ಥಳವನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತಿತ್ತು. ಅದು ಜನರಿಗೂ ಗೊತ್ತು ಮತ್ತು ಗಣಪತಿ ವಟ್ಟಂ ಎಂಬ ಹೆಸರನ್ನು ಬಳಸಲಾಗುತ್ತಿತ್ತು. ಆದರೆ, ಅದನ್ನು ಸುಲ್ತಾನ್‌ ಬತ್ತೇರಿ ಎಂದು ಬದಲಾಯಿಸಲಾಗಿತ್ತು. ಕಾಂಗ್ರೆಸ್‌ ಮತ್ತು ಎಲ್‌ಡಿಎಫ್‌ ಇನ್ನೂ ಟಿಪ್ಪು ಸುಲ್ತಾನ್‌ ಜೊತೆಯಲ್ಲಿವೆ. ಟಿಪ್ಪು ಸುಲ್ತಾನ್‌ ಕೇರಳದ ವಯನಾಡು ಮತ್ತು ಮಲಬಾರ್‌ ಪ್ರದೇಶದಲ್ಲಿ ಅನೇಕ ದೇವಾಲಯಗಳ ಮೇಲೆ ದಾಳಿ ಮಾಡಿದ್ದು, ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ್ದ ಎಂದು ಕಿಡಿಕಾರಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಸುರೇಂದ್ರನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಎಡಪಕ್ಷಗಳು ಮತ್ತು ಕಾಂಗ್ರೆಸ್‌ ನಾಯಕರು ಸುರೇಂದ್ರನ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿಕೆ ಕುನ್ಹಾಲಿಕುಟ್ಟಿ ಕೇರಳದಲ್ಲಿ ಅಂತಹದ್ದೇನೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದು ಕೇರಳ ಎಂಬುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಅದೆಲ್ಲಾ ಇಲ್ಲಿ ಆಗುವುದಿಲ್ಲ. ಅದಲ್ಲದೇ ಅವರು ಗೆಲ್ಲುವುದೂ ಇಲ್ಲ, ಹೆಸರನ್ನು ಕೂಡ ಬದಲಾಯಿಸಲು ಆಗುವುದಿಲ್ಲ ಎಂದು ಕುನ್ಹಾಲಿಕುಟ್ಟಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಶಾಸಕ ಟಿ ಸಿದ್ದಿಕ್ ಇದು ಕೇವಲ ಜನರ ಗಮನ ಸೆಳೆಯುವ ಪ್ರಯತ್ನವಷ್ಟೇ ಎಂದು ಹೇಳಿದ್ದಾರೆ.

ಏನಿದು ಸುಲ್ತಾನ್ ಬತ್ತೇರಿ?
ಸುಲ್ತಾನ್ ಬತ್ತೇರಿಯು ವಯನಾಡು ವ್ಯಾಪ್ತಿಯ ಪಟ್ಟಣವಾಗಿದ್ದು, ಪುರಸಭೆ ಆಡಳಿತವಿದೆ. ಕೇರಳ ಪ್ರವಾಸೋದ್ಯಮದ ವೆಬ್‌ಸೈಟ್‌ ಪ್ರಕಾರ, ಸುಲ್ತಾನ್ ಬತ್ತೇರಿಯನ್ನು ಮೊದಲು ಗಣಪತಿ ವಟ್ಟಂ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಕಾಲದಲ್ಲಿ ಇಲ್ಲಿ ಗಣೇಶನ ದೇವಾಲಯ ನಿರ್ಮಿಸಿದ್ದರಿಂದ ಗಣಪತಿ ವಟ್ಟಂ ಎಂಬ ಹೆಸರು ಈ ಪ್ರದೇಶಕ್ಕೆ ಬಂದಿತ್ತು. ಆದರೆ, 1700ರಲ್ಲಿ ಮಲಬಾರ್ ಪ್ರದೇಶದ ಮೇಲೆ ಟಿಪ್ಪು ಸುಲ್ತಾನನ ಆಕ್ರಮಣದ ನಂತರ ಪಟ್ಟಣದ ಹೆಸರನ್ನು ಸುಲ್ತಾನ್‌ ಬತ್ತೇರಿ ಎಂದು ಬದಲಾಯಿಸಲಾಯಿತು.
ಆಕ್ರಮಣದ ವೇಳೆ ಟಿಪ್ಪು ಸುಲ್ತಾನ್‌ ತನ್ನ ಯುದ್ಧ ಸಾಮಗ್ರಿ ಮತ್ತು ಫಿರಂಗಿಗಳನ್ನು ಗಣಪತಿ ವಟ್ಟಂನಲ್ಲಿ ಇಡುತ್ತಿದ್ದ. ಅದಲ್ಲದೆ ಟಿಪ್ಪು ಸುಲ್ತಾನ್‌ ಒಂದು ಕೋಟೆಯನ್ನು ಕೂಡ ನಿರ್ಮಿಸಿದ್ದಾನೆ. ಅದು ಈಗ ಪಾಳುಬಿದ್ದಿದೆ. ಬ್ರಿಟಿಷ್‌ ದಾಖಲೆಗಳಲ್ಲಿ ಈ ಪಟ್ಟಣಕ್ಕೆ ‘ಸುಲ್ತಾನನ ಬ್ಯಾಟರಿ’ ಎಂದು ಕರೆಯಲಾಗುತ್ತಿತ್ತು. ಅದೇ ಮುಂದೆ ಸುಲ್ತಾನ್ ಬತ್ತೇರಿ ಆಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement