ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮದ ಕೊಪ್ಪ ಮಜರೆಯಲ್ಲಿ ಶನಿವಾರ (ಮೇ 18)ರಂದು ಸಿಡಿಲು ಬಡಿದು ಏಳು ಹಸುಗಳು ಸಾವಿಗೀಡಾಗಿವೆ ಎಂದು ವರದಿಯಾಗಿದೆ.
ಶನಿವಾರ 4 ಗಂಟೆಗೆ ಸುಮಾರಿಗೆ ಸುರಿದ ಭಾರಿ ಮಳೆಯ ಸಮಯದಲ್ಲಿ ಕೊಂಡ್ಲಿ ಗ್ರಾಮದ ಕೊಪ್ಪ ಮಜರೆಯಲ್ಲಿ ಸಿಡಿಲು ಬಡಿದು ಬೂರಿಯಾ ಕನ್ನಾ ನಾಯ್ಕ ಎಂಬವರಿಗೆ ಸೇರಿದ 2 ಹಸು, ನಾರಾಯಣ ರಾಮ ನಾಯ್ಕ ಎಂಬವರಿಗೆ ಸೇರಿದ 2 ಹಸು, ನಾರಾಯಣ ಕನ್ನಾ ನಾಯ್ಕ ಎಂಬವರಿಗೆ ಸೇರಿದ ಒಂದು ಹಸು, ಗಣಪತಿ ಕನ್ನಾ ನಾಯ್ಕ ಎಂಬವರಿಗೆ ಸೇರಿದ ಒಂದು ಹಸು ಲಕ್ಷ್ಮಣ ಗೋವಿಂದ ನಾಯ್ಕ ಎಂಬವರಿಗೆ ಸೇರಿದ ಒಂದು ಹಸು ಸೇರಿದಂತೆ ದನ ಒಟ್ಟೂ 7 ಹಸುಗಳು ಸಾವಿಗೀಡಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಶನಿವಾರ ಸಂಜೆ ಸಿದ್ದಾಪುರ ತಾಲೂಕಿನ ಹಲವೆಡೆ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಆರ್ಭಟಿಸಿದೆ ಎಂದು ವರದಿಯಾಗಿದೆ,

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement