ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ತಿನಲ್ಲಿ ಮೌನಾಚರಣೆ ; ‘ಕನಿಷ್ಕ ವಿಮಾನ ಸ್ಫೋಟʼ ಘಟನೆ ಸ್ಮರಣೆ ಮೂಲಕ ಭಾರತದ ಪ್ರತ್ಯುತ್ತರ…!

ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ತು ಮೌನ ಆಚರಿಸಿದ ನಂತರ ಭಾರತವು ಸ್ಪಷ್ಟ ಸಂದೇಶ ರವಾನಿಸುವ ಮೂಲಕ ತಿರುಗೇಟು ನೀಡಿದ್ದು, ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರ ಏರ್ ಇಂಡಿಯಾ ಕನಿಷ್ಕ ವಿಮಾನದಲ್ಲಿ ಖಲಿಸ್ತಾನಿ ಬಾಂಬ್ ಸ್ಫೋಟದಿಂದ ಮೃತಪಟ್ಟ 329 ಜನರ ಸ್ಮರಣಾರ್ಥ ಕಾರ್ಯಕ್ರಮ ನಡೆಸುವುದಾಗಿ ಪ್ರಕಟಿಸಿದೆ.
“ಭಾರತವು ಭಯೋತ್ಪಾದನೆಯ ಬೆದರಿಕೆ ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಈ ಜಾಗತಿಕ ಬೆದರಿಕೆಯನ್ನು ನಿಭಾಯಿಸಲು ಎಲ್ಲಾ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. 23 ಜೂನ್ 2024 ರಂದು ಏರ್ ಇಂಡಿಯಾ ವಿಮಾನ 182 (ಕನಿಷ್ಕ)ರಲ್ಲಿ ನಡೆದ ಹೇಡಿತನದ ಭಯೋತ್ಪಾದಕ ಬಾಂಬ್ ಸ್ಫೋಟದ 39ನೇ ವಾರ್ಷಿಕ ದಿನವಾಗಿದೆ. ದುಷ್ಕೃತ್ಯದಿಂದಾಗಿ 86 ಮಕ್ಕಳು ಸೇರಿದಂತೆ 329 ಮುಗ್ಧ ಜನರು ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ಘೋರ ಭಯೋತ್ಪಾದನೆ-ಸಂಬಂಧಿತ ವಾಯು ವಿಪತ್ತುಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂದು ಕಾನ್ಸುಲೇಟ್ ಜನರಲ್ X ನಲ್ಲಿ ಪೋಸ್ಟ್ ಮಾಡಿದೆ.
“ಅವರ ಸ್ಮರಣಾರ್ಥ ಸೇವೆಯನ್ನು ಜೂನ್ 23, 2024 ರಂದು 18;30 ಗಂಟೆಗೆ ಸ್ಟಾನ್ಲಿ ಪಾರ್ಕ್‌ನ ಸೆಪರ್ಲಿ ಆಟದ ಮೈದಾನದ ಏರ್ ಇಂಡಿಯಾ ಸ್ಮಾರಕದಲ್ಲಿ ನಿಗದಿಪಡಿಸಲಾಗಿದೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಪ್ರದರ್ಶನದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಪ್ರೋತ್ಸಾಹಿಸುತ್ತದೆ ಎಂದು ಅದು ಹೇಳಿದೆ.

ಕೆನಡಾದ ಸಿಖ್ ಭಯೋತ್ಪಾದಕರು ಇಟ್ಟ ಬಾಂಬ್ ಮಾಂಟ್ರಿಯಲ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ನೆಲದಿಂದ 31,000 ಅಡಿ ಎತ್ತರದಲ್ಲಿ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಾವಿಗೀಡಾದ 329 ಪ್ರಯಾಣಿಕರಲ್ಲಿ 268 ಕೆನಡಾದ ನಾಗರಿಕರು, 27 ಬ್ರಿಟಿಷ್ ನಾಗರಿಕರು ಮತ್ತು 24 ಭಾರತೀಯ ನಾಗರಿಕರು ಇದ್ದರು. ಈ ಬಾಂಬ್ ಸ್ಫೋಟವು ವಾಯುಯಾನ ಭಯೋತ್ಪಾದನೆಯ ಅತ್ಯಂತ ಮಾರಕ ಕೃತ್ಯಗಳಲ್ಲಿ ಒಂದಾಗಿದೆ.
ಕಳೆದ ವರ್ಷ ಕೆನಾಡದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ನಿಜ್ಜರ್ ಸ್ಮರಣೆಯಲ್ಲಿ ಕೆನಡಾದ ಸಂಸತ್ತು ಒಂದು ಕ್ಷಣ ಮೌನವನ್ನು ಆಚರಿಸಿದ ಬೆನ್ನಲ್ಲೇ ಭಾರತೀಯ ಕಾನ್ಸುಲೇಟ್ ಜನರಲ್ ನಿಂದ ಈ ಪೋಸ್ಟ್ ಬಂದಿದೆ. ಜಸ್ಟಿನ್ ಟ್ರುಡೊ ನೇತೃತ್ವದ ಕೆನಡಾದ ಆಡಳಿತವು ಈ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರು ಭಾಗಿಯಾಗಿರಬಹುದು ಎಂದು ಆರೋಪಿಸಿದೆ. ನವದೆಹಲಿಯು ಆರೋಪಗಳನ್ನು ಕಸದ ಬುಟ್ಟಿಗೆ ಹಾಕಿದೆ, ಅವುಗಳನ್ನು ಪ್ರೇರಿತ ಮತ್ತು ಅಸಂಬದ್ಧ ಎಂದು ಕರೆದಿದೆ. ಅಂದಿನಿಂದ ಎರಡು ದೇಶಗಳ ದ್ವಿಪಕ್ಷೀಯ ಬಾಂಧವ್ಯ ಹಳಸಿದೆ.
ನಿಜ್ಜಾರ್ ಹತ್ಯೆಯ ಕುರಿತು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಲ್ವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ಸುದ್ದಿ ಸಂಸ್ಥೆ IANS ಬಿಡುಗಡೆ ಮಾಡಿದ ವೀಡಿಯೊ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್‌ ಸ್ಮರಣಾರ್ಥ ಕೆನಡಾದ ಸಂಸತ್ತಿನ ಸದಸ್ಯರು ಹೌಸ್ ಆಫ್ ಕಾಮನ್ಸ್‌ನಲ್ಲಿ ಮೌನ ಆಚರಿಸುತ್ತಿರುವುದನ್ನು ತೋರಿಸುತ್ತದೆ. ಸ್ಪೀಕರ್ ಗ್ರೆಗ್ ಫರ್ಗಸ್ ಅವರು “ಸದನದಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ನಡುವಿನ ಚರ್ಚೆಯ ನಂತರ, ಒಂದು ವರ್ಷದ ಹಿಂದೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ನೆನಪಿಗಾಗಿ ಇಂದು ಒಂದು ಕ್ಷಣ ಮೌನವನ್ನು ಆಚರಿಸುವ ನಿರ್ಣಯಕ್ಕೆ ಬರಲಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.
G7 ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಟ್ರುಡೊ ಇಟಲಿಯಲ್ಲಿ ಭೇಟಿಯಾದ ಕೆಲವು ದಿನಗಳ ನಂತರ ಕೆನಡಾದ ಪ್ರಧಾನಿ ಭಾರತದೊಂದಿಗೆ ಹಲವಾರು “ಪ್ರಮುಖ ವಿಷಯಗಳ” ಮೇಲೆ “ಹೊಂದಾಣಿಕೆ” ಇದೆ ಮತ್ತು ಹೊಸ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು “ಅವಕಾಶ”ವನ್ನು ಎದುರು ನೋಡುತ್ತಿರುವಾಗಿ ಹೇಳಿದ ಕೆಲ ದಿನಗಳ ನಂತರ ಕೆನಡಾದ ಸಂಸತ್ತಿನಲ್ಲಿ ಇದು ನಡೆದಿದೆ.
ನಿಜ್ಜರ್ ಹತ್ಯೆಯ ನಂತರ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. ಕೆನಡಾದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಭಾರತ ವಿರೋಧಿ ಅಂಶಗಳಿಗೆ ಜಾಗ ನೀಡಿದ್ದನ್ನು ಭಾರತ ಪದೇ ಪದೇ ಫ್ಲ್ಯಾಗ್ ಮಾಡಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement