ವಾರಾಣಸಿ : 45 ವರ್ಷದ ಮಹಿಳೆ ಮತ್ತು ಆಕೆಯ 25, 17 ಮತ್ತು 15 ವರ್ಷದ ಮೂವರು ಮಕ್ಕಳ ಶವಗಳು ಸೋಮವಾರ ಬೆಳಿಗ್ಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿವೆ. ಪತಿ ನಾಪತ್ತೆಯಾಗಿದ್ದು, ಹತ್ಯೆಯಲ್ಲಿ ಆತನ ಪಾತ್ರವಿರಬಹುದೆಂದು ಪೊಲೀಸರು ಶಂಕಿಸಿದ ಗಂಟೆಗಳ ನಂತರ, ಪತಿಯ ಶವವನ್ನು ನಿರ್ಮಾಣ ಸ್ಥಳದಿಂದ ವಶಪಡಿಸಿಕೊಳ್ಳಲಾಯಿತು. ಗುಂಡಿನ ಗಾಯವಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಾರಾಣಸಿಯ ಭದಾಯಿನಿ ಪ್ರದೇಶದಲ್ಲಿರುವ ರಾಜೇಂದ್ರ ಗುಪ್ತಾ ಅವರ ಮನೆಯಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಬಾಡಿಗೆಗೆ ಇವೆ. ರಾಜೇಂದ್ರ ಗುಪ್ತಾ ತಾಯಿ ಮನೆ ಬಾಗಿಲು ಬಡಿದ ನಂತರ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅಕ್ಕಪಕ್ಕದವರನ್ನು ಕರೆದಿದ್ದಾರೆ. ನಂತರ ಅವರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಶವಗಳ ಪತ್ತೆಗೆ ಕಾರಣವಾಯಿತು. ನೀತು (45), ನವನೀಂದ್ರ ಗುಪ್ತಾ (25), ಗೌರಂಗಿ (16) ಮತ್ತು ಶುಭೇಂದ್ರ ಗುಪ್ತಾ (15) ಮೃತದೇಹಗಳು ಪತ್ತೆಯಾಗಿವೆ. ರಾಜೇಂದ್ರ ನಾಪತ್ತೆಯಾಗಿದ್ದ. ಗಂಟೆಗಳ ನಂತರ, ಆತ ಕೂಡ ಶವವಾಗಿ ಪತ್ತೆಯಾಗಿದ್ದಾರೆ. ಗುಪ್ತಾ ತನ್ನ ಕುಟುಂಬವನ್ನು ಕೊಲೆ ಮಾಡಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಹೇಳಿದ್ದೇನು…?
ಗುಪ್ತಾ ಮೃತದೇಹ ಪತ್ತೆಯಾಗುವ ಮುನ್ನ ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಬನ್ಸ್ವಾಲ್ ಅವರು ಸೋಮವಾರ ಬೆಳಿಗ್ಗೆ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಯಿತು ಎಂದು ತಾಯಿ ಹೇಳಿದ್ದಾರೆ. ರಾಜೇಂದ್ರ ಗುಪ್ತಾ ಈ ಹಿಂದೆ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. “ಶವಗಳ ಸ್ಥಿತಿಯು ಅವರು ಗುಂಡು ಹಾರಿಸಿದಾಗ ಪತ್ನಿ ಹಾಗೂ ಮಕ್ಕಳು ಮಲಗಿದ್ದರು ಎಂದು ಸೂಚಿಸುತ್ತದೆ. ಮೇಲ್ನೋಟಕ್ಕೆ, ಪಿಸ್ತೂಲ್ ಬಳಸಲಾಗಿದೆ ಎಂದು ತೋರುತ್ತಿದೆ. ನಮಗೆ ಬುಲೆಟ್ ಕೇಸಿಂಗ್ಗಳು ಕಂಡುಬಂದಿವೆ. ಆಸ್ತಿ ವಿವಾದವು ಅಪರಾಧಕ್ಕೆ ಕಾರಣವಾಗಿದ್ದರೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ಗುಪ್ತಾ ಅವರು ಅನೇಕ ಆಸ್ತಿಗಳನ್ನು ಹೊಂದಿದ್ದಾರೆ, 8-10 ಮನೆಗಳನ್ನು ಹೊಂದಿದ್ದರು ಮತ್ತು ಪ್ರತಿ ತಿಂಗಳು ಬಾಡಿಗೆಯಿಂದ ಹಣ ಬರುತ್ತಿತ್ತು. ಅಲ್ಲದೆ, ಮದ್ಯದ ವ್ಯಾಪಾರ ಸಹ ಹೊಂದಿದ್ದರು ಎಂದು ಹೇಳಲಾಗಿದೆ.
ರಕ್ತಸಿಕ್ತ ಇತಿಹಾಸ…
ರಾಜೇಂದ್ರ ಗುಪ್ತಾ, ಈ ಹಿಂದೆ ಹಲವು ಕೊಲೆ ಪ್ರಕರಣಗಳನ್ನು ಎದುರಿಸಿದ್ದು, ಜಾಮೀನಿನ ಮೇಲೆ ಹೊರಗಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧದ ಪ್ರಕರಣಗಳಲ್ಲಿ ತನ್ನ ತಂದೆ, ಸಹೋದರ ಮತ್ತು ಸೊಸೆಯನ್ನು ಕೊಲೆ ಮಾಡಿದ ಆರೋಪವೂ ಸೇರಿತ್ತು. ನೀತು ಗುಪ್ತಾ ಅವರ ಎರಡನೇ ಪತ್ನಿಯಾಗಿದ್ದು, ಅವರು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗುಪ್ತಾ, ಒಂದು ವರ್ಷದಿಂದ ಬೇರೆಡೆ ಇದ್ದು, ದೀಪಾವಳಿಗೆ ಮನೆಗೆ ಬಂದಿದ್ದ ಎಂದು ತಿಳಿದುಬಂದಿದೆ. ಕೆಲವು ವರದಿಗಳು ಆತ ತಾಂತ್ರಿಕನೊಬ್ಬನ ಸಂಪರ್ಕದಲ್ಲಿದ್ದ ಎಂದು ಹೇಳುತ್ತದೆ. ಇದು ಆತ ತನ್ನ ಕುಟುಂಬವನ್ನು ಹತ್ಯೆ ಮಾಡಲು ಕಾರಣವಾಗಿರಬಹುದು ಎಂಬ ವರದಿಗಳೂ ಇವೆ. ಆದರೆ, ಪೊಲೀಸರು ಖಚಿತಪಡಿಸಿಲ್ಲ ಮತ್ತು ಅವರು ಪ್ರತಿಯೊಂದು ಕೋನವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ