ಜಾರ್ಖಂಡದ ದಿಯೋಗರ್ನಲ್ಲಿ ಭಾನುವಾರ ರಾತ್ರಿ ವಿಪರೀತ ಚಳಿಯಿಂದಾಗಿ ಮದುಮಗ ಮೂರ್ಛೆ ಹೋಗಿದ್ದು, ನಂತರ ಮದುಮಗಳು ವರನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯೇ ರದ್ದುಗೊಂಡ ಘಟನೆ ನಡೆದ ವರದಿಯಾಗಿದೆ.
ಡಿಸೆಂಬರ್ 15 ರಂದು, ದಿಯೋಘರ್ನ ಘೋರ್ಮಾರಾದಿಂದ ವರ ಅರ್ನವ್ ಬಿಹಾರದ ಭಾಗಲ್ಪುರದ ಅಂಕಿತಾ ಅವರನ್ನು ವಿವಾಹ ಆಗಬೇಕಿತ್ತು. ಆದರೆ, ಅರ್ನವ್ ಅವರಿಗೆ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ ಮದುವೆ ವೇಳೆಯೇ ಎಚ್ಚರ ತಪ್ಪಿದೆ. ಇದರಿಂದಾಗಿ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.
ಮದುವೆಯು ಮದುಮಗನ ಪಟ್ಟಣದಲ್ಲಿ ನಡೆಯುತ್ತಿತ್ತು, ಭಾನುವಾರ ಘೋರ್ಮರದ ಖಾಸಗಿ ಉದ್ಯಾನದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ವಧುವಿನ ಕುಟುಂಬ ಮತ್ತು ಸಂಬಂಧಿಕರು ಸಂಭ್ರಮದಿಂದ ವರನ ಸ್ಥಳವನ್ನು ತಲುಪಿದರು. ಸಂಪ್ರದಾಯದಂತೆ ಸಕಲ ವಿಧಿವಿಧಾನಗಳು ನೆರವೇರಿದ್ದು, ಚಳಿಯ ವಾತಾವರಣದ ನಡುವೆ ಬಯಲು ಜಾಗದಲ್ಲಿ ವರ ಮಾಲೆ ಸಮಾರಂಭವೂ ಸಂತಸದಿಂದ ನೆರವೇರಿತು.
ನಂತರ ಎರಡು ಕುಟುಂಬಗಳು ವಧು-ವರರ ಸಮೇತ ಭೋಜನ ಸವಿದು ನಂತರ ಸಪ್ತಪದಿ ಕಾರ್ಯಕ್ರಮಕ್ಕೆ ಸಿದ್ಧರಾಗಿದ್ದರು. ಸಪ್ತಪದಿ ಕಾರ್ಯಕ್ರಮಕ್ಕೆ ಪುರೋಹಿತರು ಮದುವೆಯ ಮಂತ್ರಗಳನ್ನು ಪಠಿಸಲು ಪ್ರಾರಂಭಿಸಿದಾಗ ವರನು ನಡುಗಲು ಪ್ರಾರಂಭಿಸಿದ್ದಾನೆ. ನಂತರ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ.
ಗಾಬರಿಯಾದ ಮದುಮಗನ ಮನೆಯವರು ಆತನನ್ನು ಸಮೀಪದ ಕೋಣೆಗೆ ಕರೆದೊಯ್ದು ಆತನ ಅಂಗೈ ಮತ್ತು ಪಾದವನ್ನು ಉಜ್ಜಿ ಆತನಿಗೆ ಪ್ರಜ್ಞೆ ತರಲು ಪ್ರಯತ್ನಿಸಿದರು. ನಂತರ ಸ್ಥಳೀಯ ವೈದ್ಯರನ್ನು ಕರೆಸಲಾಯಿತು, ಅವರು ಒಂದೂವರೆ ಗಂಟೆಗಳ ನಂತರ ಅರ್ನವ್ ಗೆ ಪ್ರಜ್ಞೆ ಬಂತು. ಆದರೆ, ವಧು ಮದುವೆಯಾಗಲು ನಿರಾಕರಿಸಿದಳು.
ಅರ್ನವ್ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತ ಚಳಿಯಲ್ಲಿ ಮೂರ್ಛೆ ಹೋಗಿದ್ದಾನೆ ಎಂಬ ಆತಂಕದಿಂದ ಮದುವೆಯಾಗಲು ನಿರಾಕರಿಸಿದೆ ಎಂದು ಅಂಕಿತಾ ಹೇಳಿದ್ದಾರೆ. ನಂತರ ಎರಡು ಕುಟುಂಬಗಳ ನಡುವೆ ಜಗಳ ನಡೆದು ಗೊಂದಲ ಉಂಟಾಯಿತು. ವಧುವಿನ ಮನೆಯವರು ನಂತರ ಪೊಲೀಸರಿಗೆ ಕರೆ ಮಾಡಿದರು. ವಿವಾಹದ ಮುಂದುವರಿಸುವ ಬಗ್ಗೆ ಎರಡೂ ಕಡೆಯವರನ್ನು ಮನವೊಲಿಸಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರು. ಆದಾಗ್ಯೂ, ಮರುದಿನ ಬೆಳಿಗ್ಗೆ ತನಕ ಪರಿಸ್ಥಿತಿ ಸುಧಾರಿಸಲಿಲ್ಲ ಮತ್ತು ಅಂತಿಮವಾಗಿ ಎರಡು ಕಡೆಯವರ ಒಪ್ಪಿಗೆಯೊಂದಿಗೆ ಮದುವೆಯನ್ನು ರದ್ದುಗೊಳಿಸಲಾಯಿತು.
ಅರ್ನವ್ ಅವರ ಕುಟುಂಬವು ಘೋರ್ಪಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಾಗಲ್ಪುರಕ್ಕೆ ಹಿಂತಿರುಗಿದರು.
ನಿಮ್ಮ ಕಾಮೆಂಟ್ ಬರೆಯಿರಿ