ಪೊಲೀಸರೇ ಬೆಚ್ಚಿಬಿದ್ದರು ; ಕುಟುಂಬದ ನಾಲ್ವರು- ಸ್ನೇಹಿತೆಯನ್ನು ಕೊಂದು ಠಾಣೆಗೆ ಬಂದು ಶರಣಾದ 23 ವರ್ಷದ ವ್ಯಕ್ತಿ …!

ತಿರುವನಂತಪುರಂ : ಕುಟುಂಬವೊಂದರಲ್ಲಿ ನಡೆದ ಬಹು ಜನರ ಕೊಲೆ ಪ್ರಕರಣದಲ್ಲಿ ತಿರುವನಂತಪುರದ ವೆಂಜರಮೂಡು ಮೂಲದ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಹಾಗೂ ಸ್ನೇಹಿತೆಯನ್ನು ಕೊಂದು ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.
ಅವರನ್ನು ಕೊಂದ ನಂತರ ಆರೋಪಿ, ಅಫಾನ್ ವಿಷ ಸೇವಿಸಿ ಫೆಬ್ರವರಿ 24 ರಂದು ಸೋಮವಾರ ಸಂಜೆ 6: ೧5 ರ ಸುಮಾರಿಗೆ ವೆಂಜರಮೂಡು ಪೊಲೀಸ್ ಠಾಣೆಗೆ ನಡೆದುಕೊಂಡು ಬಂದು ಶರಣಾಗಿದ್ದಾನೆ.
ಆರು ಜನರನ್ನು ಕೊಂದಿರುವುದಾಗಿ ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಆದರೆ ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದರೂ ಸತ್ತಿರಲಿಲ್ಲ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಓಪನ್‌ ಮಾಡಿ ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಆತನಿಂದ ಕೊಲೆಯಾದವರಲ್ಲಿ ಆತನ 13 ವರ್ಷದ ಸಹೋದರ ಅಹ್ಸಾನ್,  ಸ್ನೇಹಿತೆ ಫರ್ಸಾನಾ, ಆತನ ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ ಲತೀಫ್ ಮತ್ತು ಅವರ ಪತ್ನಿ ಶಾಹಿದಾ ಸೇರಿದ್ದಾರೆ. ಈ ವ್ಯಕ್ತಿ ಪೊಲೀಸರ ಮುಂದೆ ಶರಣಾದ ನಂತರ ಪೊಲೀಸರು ಮನೆಗೆ ದೌಡಾಯಿಸಿದ್ದು, ಆತನ ತಾಯಿ ಶೆಮಿ ಜೀವಂತವಾಗಿರುವುದು ಕಂಡುಬಂದಿದೆ. ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಆತ ಸುತ್ತಿಗೆಯಿಂದ ಯವರನ್ನು ಹೊಡೆದು ಕೊಂದಿದ್ದಾನೆ. ಚಿಕ್ಕಪ್ಪ ಲತೀಫ್ ಅವರ ಮೃತದೇಹವು ಕೋಣೆಯ ಸೋಫಾದಲ್ಲಿ ಬಿದ್ದಿದ್ದರೆ ಮತ್ತು ಅವರ ಪತ್ನಿಯ ಶವ ಅಡುಗೆಮನೆಯಲ್ಲಿ ಪತ್ತೆಯಾಗಿದೆ. ಅಂತೆಯೇ, ಸ್ನೇಹಿತ ಫರ್ಸಾನಾ ಅವರ ದೇಹವು ಸೋಫಾದಲ್ಲಿ ಪತ್ತೆಯಾಗಿದ್ದು, ಆಕೆಯ ಮುಖವು ಗುರುತಿಸಲಾಗದಷ್ಟು ವಿರೂಪಗೊಂಡಿದೆ.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ವೆಂಜರಮೂಡು, ಎಸ್‌ಎನ್ ಪುರಂ ಮತ್ತು ಪಾಂಗೋಡು ಎಂಬ ಮೂರು ಕಡೆಗಳಲ್ಲಿ ಕೊಲೆಗಳು ನಡೆದಿವೆ. ಪೊಲೀಸರ ಪ್ರಕಾರ, ವೆಂಜರಮೂಡಿನಲ್ಲಿರುವ ತನ್ನ ಮನೆಯಿಂದ ಪಾಂಗೋಡಿಗೆ ಸುಮಾರು 25 ಕಿಲೋಮೀಟರ್ ಪ್ರಯಾಣಿಸಿದ್ದ ಆತ ಮೊದಲು ಅಜ್ಜಿಯನ್ನು ಕೊಂದಿದ್ದಾನೆ. ನಂತರ ಅಲ್ಲಿಂದ 4 ಕಿಮೀ ದೂರವಿರುವ ಕೂನನ್ವೆಂಗಾಗೆ ಹೋಗಿ ಅಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಅವರ ಮನೆಯಲ್ಲಿ ಹತ್ಯೆ ಮಾಡಿದ್ದಾನೆ. ಮನೆಗೆ ಹಿಂತಿರುಗುವಾಗ, ಆತ ಫರ್ಸಾನಾಳನ್ನು ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಬಳಿಕ ಅಹ್ಸಾನ್, ಫರ್ಸಾನಾ ಹಾಗೂ ಆತನ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಫರ್ಸಾನಾ ಹಾಗೂ ಸಹೋದರ ಅಹ್ಸಾನ್‌ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾರೆ.
ವೆಂಜರಮೂಡು ಮತ್ತು ಪಂಗೋಡು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಘಟನೆಗಳು ಬೆಳಗ್ಗೆ 10 ರಿಂದ ಸಂಜೆ 6 ರ ನಡುವೆ ನಡೆದಿವೆ, ಆದರೆ ಪ್ರತಿ ಕೊಲೆಯ ನಿಖರವಾದ ಸಮಯವನ್ನು ನಿರ್ಧರಿಸಲು ಸಾಧ್ಯವಿಲ್ಲ, ಏಕೆಂದರೆ ಆರೋಪಿಯ ಹೇಳಿಕೆಯನ್ನು ಪಡೆಯಲು ನಮಗೆ ಸಾಧ್ಯವಾಗಲಿಲ್ಲ. ಆತ ವಿಷ ಸೇವಿಸಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿರುವನಂತಪುರಂ ಗ್ರಾಮಾಂತರ ಎಸ್ಪಿ ಸುದರ್ಶನ್ ಕೆಎಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಸ್ಪತ್ರೆಗೆ ದಾಖಲು

ವಿದೇಶದಲ್ಲಿ ಬಿಡಿಭಾಗಗಳ ವ್ಯಾಪಾರ ನಡೆಸುತ್ತಿದ್ದ ಅಫಾನ್‌ನ ತಂದೆ ವಿಸಿಟಿಂಗ್ ವೀಸಾದ ಮೇಲೆ ಇತ್ತೀಚೆಗಷ್ಟೇ ಗ್ರಾಮಕ್ಕೆ ಹಿಂದಿರುಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ವ್ಯಾಪಾರ ಕುಸಿದು, ಕುಟುಂಬವು ಭಾರೀ ಸಾಲದ ಸುಳಿಯಲ್ಲಿ ಸಿಲುಕಿತ್ತು. ಅಫಾನ್‌ನ ತಾಯಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ಕಿರಿಯ ಸಹೋದರ ಅಹ್ಸಾನ್ ವೆಂಜರಮೂಡು ಶಾಲೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಏತನ್ಮಧ್ಯೆ, ಕುಟುಂಬವು ತನಗೆ ಹಣ ನೀಡುತ್ತಿಲ್ಲ ಎಂದು ಅಫಾನ್ ಅಸಮಾಧಾನಗೊಂಡಿದ್ದ ಎಂದು ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ, ಆದರೆ ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement