
ನವದೆಹಲಿ : ಕೋಪದಿಂದ ಮಹೀಂದ್ರಾ ಥಾರ್ ಎಸ್ಯುವಿ ಚಲಾಯಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಯುವಕನೊಬ್ಬನಿಗೆ ಡಿಕ್ಕಿ ಹೊಡೆದ ನಂತರ ಆತ ರಸ್ತೆಬದಿಯ ಚರಂಡಿಗೆ ಹಾರಿಬಿದ್ದ ಘಟನೆ ನಡೆದಿದೆ.
ನೋಯ್ಡಾದ ಸೆಕ್ಟರ್ 53 ರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಈ ಕೃತ್ಯದ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಹಿಂಸಾಚಾರದ ಬಗ್ಗೆ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ರಸ್ತೆ ಹಿಂಸಾಚಾರವು ಆನ್ಲೈನ್ ಜಗಳದಿಂದ ಉಂಟಾಗಿದೆ. ಪೊಲೀಸ್ ಠಾಣೆ ಸೆಕ್ಟರ್ -24 ಪ್ರದೇಶದ ವ್ಯಾಪ್ತಿಯಲ್ಲಿರುವ ಎರಡೂ ಕಡೆಯವರ ನಡುವೆ ವಿವಾದವಿತ್ತು. ಎರಡೂ ಕಡೆಯವರು ಪರಸ್ಪರ ಪರಿಚಿತರು” ಎಂದು ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸುಮಿತಕುಮಾರ ಶುಕ್ಲಾ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಮಾಡಿಕೊಂಡ ಕಾಮೆಂಟ್ಗಳ ಮೇಲೆ ವಾಗ್ವಾದ ಪ್ರಾರಂಭವಾಯಿತು, ನಂತರ ಅದು ರಸ್ತೆಯಲ್ಲಿ ಹೊಡೆದಾಟಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.

ಘಟನೆಯ ಮನಕಲಕುವ ವೀಡಿಯೊ ಕಾಣಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಕಾರಣವಾಯಿತು.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಇನ್ಸ್ಟಾಗ್ರಾಮ್ನಲ್ಲಿ ಮಾಡಿದ ಕಾಮೆಂಟ್ಗಳ ಕುರಿತು ಜಗಳ ಪ್ರಾರಂಭವಾಯಿತು ಮತ್ತು ನಂತರ ಬೀದಿಯಲ್ಲಿ ಅದು ಜಗಳಕ್ಕೆ ತಿರುಗಿತು. ಥಾರ್ ಚಾಲಕ ಉದ್ದೇಶಪೂರ್ವಕವಾಗಿ ವಾಹನದ ವೇಗವನ್ನು ಹೆಚ್ಚಿಸಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಕೆಳಗೆ ಚರಂಡಿಗೆ ಬೀಳಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿಗೆ ರಕ್ತಸ್ರಾವವಾಗಿದೆ ಹಾಗೂ ಆತ ಚಲನೆ ರಹಿತವಾಗಿದ್ದ. ನಂತರ ವಾಹನ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
ಸೆಕ್ಟರ್ 24 ಪೊಲೀಸರು ಅತಿವೇಗದ ಚಾಲನೆ, ಗಾಯಗೊಳಿಸುವಿಕೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ, ಪೊಲೀಸ್ ಠಾಣೆ ಸೆಕ್ಟರ್ -24 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ” ಎಂದು ಎಡಿಸಿಪಿ ಶುಕ್ಲಾ ಹೇಳಿದರು.
ಪ್ರಸ್ತುತ ಪರಾರಿಯಾಗಿರುವ ಚಾಲಕನನ್ನು ಗುರುತಿಸಿ ಬಂಧಿಸುವ ಕಾರ್ಯವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ಭಯಾನಕ ಕ್ಷಣ ಮತ್ತು ನಂತರದ ಅವ್ಯವಸ್ಥೆಯನ್ನು ತೋರಿಸುವ ವೈರಲ್ ಆಗಿರುವ ವೀಡಿಯೊ ಆನ್ಲೈನ್ನಲ್ಲಿ ಬಿರುಗಾಳಿ ಎಬ್ಬಿಸಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಲಜ್ಜೆಗೆಟ್ಟ ಹಿಂಸಾಚಾರವನ್ನು ತಡೆಯಲು ನಾಗರಿಕರು ಮತ್ತು ಆನ್ಲೈನ್ ಜನರು ಕಠಿಣ ಕ್ರಮಗಳನ್ನು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ