ರಷ್ಯಾದಿಂದ ಭಾರತ ತೈಲ ಖರೀದಿಸುವುದರಿಂದ ಬ್ರಾಹ್ಮಣರಿಗೆ ಲಾಭವಾಗುತ್ತಿದೆ : ಚರ್ಚೆಗೆ ಗ್ರಾಸವಾದ ಟ್ರಂಪ್ ಸಲಹೆಗಾರನ ಹೇಳಿಕೆ

ನವದೆಹಲಿ: ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ ವಿಧಿಸಿರುವ ಶೇ. 50 ರಷ್ಟು ಸುಂಕಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತವು “ರಷ್ಯಾಕ್ಕೆ ಲಾಂಡ್ರೋಮೆಂಟ್ ಹೊರತುಪಡಿಸಿ ಬೇರೇನೂ ಅಲ್ಲ” ಎಂದು ಕರೆದಿದ್ದಾರೆ ಮತ್ತು “ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಬ್ರಾಹ್ಮಣರು ಲಾಭ ಗಳಿಸುತ್ತಿದ್ದಾರೆ” ಎಂದು ಹೊಸ ತಗಾದೆ ತೆಗೆದಿದ್ದಾರೆ.
ಈ ಮೊದಲು ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ಯುದ್ಧ ಎಂದು ವಿವಾದಿತ ಹೇಳಿಕೆ ನೀಡಿದ್ದ ಪೀಟರ್ ನವರೋ ೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ವಿಶ್ವದ “ಅತಿದೊಡ್ಡ ಪ್ರಜಾಪ್ರಭುತ್ವ” ರಾಷ್ಟ್ರವಾದ ಭಾರತವು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜೊತೆ ಏಕೆ ವ್ಯವಹಾರ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ವಾರಗಳಲ್ಲಿ, ನವರೊ ಅವರು ರಷ್ಯಾದ ತೈಲ ಆಮದುಗಳ ಕುರಿತು ಭಾರತದ ಮೇಲೆ ಪದೇ ಪದೇ ದಾಳಿ ಮಾಡಿದ್ದಾರೆ ಮತ್ತು ಟ್ರಂಪ್ ವಿಧಿಸಿರುವ ಹೆಚ್ಚುವರಿ ಶೇ. 25 ರಷ್ಟು ಸುಂಕವನ್ನು ಸಮರ್ಥಿಸಿಕೊಂಡಿದ್ದಾರೆ.
ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ನವರೊ ಅವರಿಗೆ ಭಾರತದ ಜೊತೆ ಅಮೆರಿಕದ ಮಾತುಕತೆಗಳ ಬಗ್ಗೆ ಮತ್ತು ರಷ್ಯಾದ ತೈಲ ಖರೀದಿಯಲ್ಲಿ ಚೀನಾದ ಪಾತ್ರವನ್ನು ಸಹ ಪರಿಗಣಿಸಿ ಈ ವಿಷಯದಲ್ಲಿ ಭಾರತವನ್ನು ಅನ್ಯಾಯವಾಗಿ ಪ್ರತ್ಯೇಕಿಸಲಾಗುತ್ತಿದೆಯೇ ಹಾಗೂ ಈ ಸುಂಕಗಳು “ವ್ಲಾಡಿಮಿರ್ ಪುತಿನ್ ಅವರನ್ನು ಉಸಿರುಗಟ್ಟಿಸಲು ಸಾಕಾಗುತ್ತದೆಯೇ” ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ನವೆರೊ, ಭಾರತವು ಪ್ರಸ್ತುತ ಶೇ.50 ರಷ್ಟು ಸುಂಕವನ್ನು ಎದುರಿಸುತ್ತಿದೆ , ಆದರೆ ಚೀನಾದ ಮೇಲೆ ಶೇ.50 ಕ್ಕಿಂತ ಸ್ವಲ್ಪ ಹೆಚ್ಚು ಸುಂಕವನ್ನು ವಿಧಿಸಲಾಗುತ್ತಿದೆ. ಅಮೆರಿಕವು ನಿಜವಾಗಿಯೂ ತನಗೆ ಹಾನಿ ಮಾಡಿಕೊಳ್ಳದೆ ಎಷ್ಟು ಹೆಚ್ಚು ಹೋಗಲು ಬಯಸುತ್ತದೆ” ಎಂಬುದನ್ನೂ ನೋಡಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

“ಏನು ನಡೆಯುತ್ತಿದೆ ಎಂಬುದನ್ನು ಭಾರತೀಯರು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಭಾರತೀಯರ ವೆಚ್ಚದಲ್ಲಿ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಬ್ರಾಹ್ಮಣರು ಲಾಭ ಗಳಿಸುತ್ತಿದ್ದಾರೆ” ಎಂದು ನವರೊ ಆರೋಪಿಸಿದರು.
ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ಮೊದಲು ಭಾರತವು ರಷ್ಯಾದ ತೈಲದ ಗಮನಾರ್ಹ ಖರೀದಿದಾರನಾಗಿರಲಿಲ್ಲ ಎಂದು ಅವರು ವಾದಿಸಿದರು. “ಏನಾಯಿತು? ಸರಿ, ರಷ್ಯಾದ ಸಂಸ್ಕರಣಾಗಾರರು ಭಾರತದ ಜೊತೆ ವ್ಯಾಪಾರಕ್ಕೆ ಮುಂದಾದರು. ಪುತಿನ್ ಅವರು ಮೋದಿಗೆ ಕಚ್ಚಾ ತೈಲದ ಮೇಲೆ ರಿಯಾಯಿತಿ ನೀಡುತ್ತಾರೆ. ಅವರು ಅದನ್ನು ಸಂಸ್ಕರಿಸುತ್ತಾರೆ ಮತ್ತು ಅವರು ಅದನ್ನು ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ದೊಡ್ಡ ಪ್ರೀಮಿಯಂನಲ್ಲಿ ಸಾಗಿಸುತ್ತಾರೆ ಮತ್ತು ಅವರು ಬಹಳಷ್ಟು ಹಣವನ್ನು ಗಳಿಸುತ್ತಾರೆ” ಎಂದು ನವರೊ ಹೇಳಿದರು.
ಏತನ್ಮಧ್ಯೆ, ನವರೊ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮೆರಿಕದ ರಾಷ್ಟ್ರೀಯ ಭದ್ರತಾ ತಜ್ಞ ಡೆರೆಕ್ ಜೆ ಗ್ರಾಸ್‌ಮನ್ ಅವರು, “ಭಾರತದಲ್ಲಿ ಜಾತಿ ಅಶಾಂತಿಯನ್ನು ಹುಟ್ಟುಹಾಕುವುದು ಎಂದಿಗೂ ಅಮೆರಿಕದ ವಿದೇಶಾಂಗ ನೀತಿಯಾಗಬಾರದು” ಎಂದು ಹೇಳಿದ್ದಾರೆ.

ನವರೋ ಹೇಳಿಕೆಯು, ಬಹುಶಃ ಭಾರತದ ವಿರುದ್ಧ ಇದುವರೆಗಿನ ಅತ್ಯಂತ ತೀಕ್ಷ್ಣವಾದ ಹೇಳಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ ಸನ್ಯಾಲ, ಕಾಂಗ್ರೆಸ್‌ನ ಪವನ್ ಖೇರಾ ಮತ್ತು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವರಿಂದ ಇದಕ್ಕೆ ಟೀಕೆ ವ್ಯಕ್ತವಾಗಿದೆ.
ನವರೋ ಅವರ ಮಾತುಗಳು ಅಮೆರಿಕದಲ್ಲಿ ಭಾರತದ ಬಗ್ಗೆ ನಿರೂಪಣೆಯನ್ನು ಯಾರು ನಿಯಂತ್ರಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತವೆ ಎಂದು ಸನ್ಯಾಲ ಹೇಳಿದರು.”ಇದು ಜೇಮ್ಸ್ ಮಿಲ್‌ನಂತಹ 19 ನೇ ಶತಮಾನದ ವಸಾಹತುಶಾಹಿ ಟೀಕೆಗಳಿಂದ ನೇರವಾಗಿ ಬಂದಿದೆ ಎಂದು ಹೇಳಿದ್ದಾರೆ.”ಉಳಿದವುಗಳೊಂದಿಗೆ ಹೋಲಿಸಿದರೆ ‘ಸವಲತ್ತು ಪಡೆದ ಪಾಲನ್ನು’ ಸೂಚಿಸುವುದಾದರೂ, ಭಾರತದಲ್ಲಿ ಒಂದು ನಿರ್ದಿಷ್ಟ ಜಾತಿ ಗುರುತನ್ನು ಪ್ರಸ್ತಾಪಿಸುವುದು ನಾಚಿಕೆಗೇಡಿನ ಮತ್ತು ದುಷ್ಟತನದಿಂದ ಕೂಡಿದೆ” ಎಂದು ಶಿವಸೇನೆ (ಉದ್ಧವ್‌) ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. ಅಮೆರಿಕದಲ್ಲಿ ‘ಬ್ರಾಹ್ಮಣ’ ಎಂಬ ಪದದ ವಿಭಿನ್ನ ಬಳಕೆಯನ್ನು ಅವರು ಒಪ್ಪಿಕೊಂಡರು, ಅಂದರೆ, ಅದು ಶ್ರೀಮಂತ ಗಣ್ಯರ ವರ್ಗವನ್ನು ಸೂಚಿಸುತ್ತದೆ ಮತ್ತು ಭಾರತದಲ್ಲಿ ಅಸ್ತಿತ್ವದಲ್ಲಿರುವ ಜಾತಿ ವ್ಯವಸ್ಥೆಗೆ ಯಾವುದೇ ಸಂಬಂಧವಿಲ್ಲ, ಆದರೆ ಟ್ರಂಪ್ ಆಡಳಿತದ ಹಿರಿಯ ಸದಸ್ಯರೊಬ್ಬರು “ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸುವುದು ಕಾಕತಾಳೀಯವಲ್ಲ ಎಂದು ಹೇಳಿದ್ದಾರೆ.
ಅಮೆರಿಕವು ಅಂತಹ “ಆಧಾರರಹಿತ ಹೇಳಿಕೆಗಳನ್ನು” ನೀಡಬಾರದು ಎಂದು ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement