
ಾಪರೂಪಕ್ಕಾದರೂ ಯಾರೂ ಕಾಡು ಚಿರತೆಯನ್ನು ಎದುರಿಸುವುದಿಲ್ಲ. ಒಂದು ವೇಳೆ ಅದು ಎದುರಾದರೂ ಅದನ್ನು ಒಂಟಿಯಾಗಿ ಕಟ್ಟಿಹಾಕುವುದು ಅಷ್ಟೇನೂ ಸುಲಭವಲ್ಲ. ಆದರೆ, ರಾಜಸ್ಥಾನದ ಉದಯಪುರದ ಧೈರ್ಯಶಾಲಿ ಮಹಿಳೆಯೊಬ್ಬರು ಮನೆ ನುಗ್ಗಿದ ಚಿರತೆಗೆ ಹೆದರದೆ ಅದನ್ನು ಮನೆಯ ಬಾಗಿಲಲ್ಲೇ ಹಗ್ಗದಿಂದ ಕಟ್ಟಿ ಹಾಕಿದ ಅನಿರೀಕ್ಷಿತ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಚಿರತೆ ಮನೆಗೆ ನುಗ್ಗಿದ ನಂತರ ಮನೆಯಲ್ಲಿ ಕೋಲಾಹಲ ಉಂಟಾಯಿತು. ಅಕ್ಕಪಕ್ಕದವರಲ್ಲಿ ಭೀತಿ ಉಂಟುಮಾಡಿತು. ಆದರೆ ತನಗೆ ಎದುರಾದ ಅಪಾಯದ ಹೊರತಾಗಿಯೂ, ಮಹಿಳೆಯೊಬ್ಬರು ಶಾಂತವಾಗಿಯೇ ಪರಿಸ್ಥಿತಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡರು. ಅಸಾಧಾರಣ ಧೈರ್ಯ ಪ್ರದರ್ಶಿಸಿ ಚಿರತೆಯನ್ನು ಬಾಗಿಲಿಗೆ ಬಿಗಿಯಲುಅವಳು ಹಗ್ಗವನ್ನು ಬಳಸಿದರು. ಅದರಲ್ಲಿ ಯಶಸ್ವಿಯೂ ಆದರು. ಇದರಿಂದಾಗಿ ಅವರ ಕುಟುಂಬಕ್ಕಾಗಲಿ ಅಥವಾ ಹತ್ತಿರದ ಇತರರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು.

ಹಗ್ಗದಿಂದ ಕಟ್ಟಲ್ಪಟ್ಟ ಚಿರತೆ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಅದರ ಕಾಲನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ವರದಿಗಳ ಪ್ರಕಾರ, ಚಿರತೆಯನ್ನು ಉಪಾಯವಾಗಿ ಹಗ್ಗದಲ್ಲಿ ಬಂಧಿಸಿ ಅದನ್ನು ಕಟ್ಟಿಹಾಕಿದ ನಂತರ ಮಹಿಳೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆಯವರು ಬಂದು ಚಿರತೆಯನ್ನು ಒಯ್ದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಮಹಿಳೆಯ ಜಾಣ್ಮೆ ಹಾಗೂ ಅಸಾಧಾರನ ಧೈರ್ಯವು ಮನೆಯವರಿಗೆ ಹಾಗೂ ಅಕ್ಕಪಕ್ಕದವರಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿತು. ಹಾಗೂ ಚಿರತೆಯನ್ನೂ ಸಂಭಾವ್ಯ ಹಾನಿಯಿಂದ ರಕ್ಷಿಸಿತು. ಏಕೆಂದರೆ ಭಯಭೀತರಾದ ಸ್ಥಳೀಯರು ಅದಕ್ಕೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ.
ಮಹಿಳೆಯ ಧೈರ್ಯ ಮತ್ತು ಸಮಯಪ್ರಜ್ಞೆಗೆ ಆನ್ಲೈನ್ನಲ್ಲಿ ಪ್ರಶಂಸೆಗಳು ಹರಿದು ಬಂದವು.
ಬಳಕೆದಾರರು ಪ್ರಾಣಿಗಳ ಬಗ್ಗೆ ಮಹಿಳೆಯ ಸಹಾನುಭೂತಿಯನ್ನೂ ಶ್ಲಾಘಿಸಿದರು. “ಆ ಚಿರತೆಗೆ ಹಾನಿ ಮಾಡಲು ಮಹಿಳೆ ಯಾರಿಗೂ ಅವಕಾಶ ನೀಡಲಿಲ್ಲ ಅವಳು ತನ್ನ ಕುಟುಂಬ ಮತ್ತು ಚಿರತೆ ಎರಡನ್ನೂ ಕಾಪಾಡಿದಳು” ಎಂದು ಹಲವು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ