ಉಡುಪಿಯಲ್ಲಿ ೧೨ನೇ ಶತಮಾನದ ವಿಷ್ಣು ಮೂರ್ತಿ ಪತ್ತೆ

ಉಡುಪಿ: ಜಿಲ್ಲೆಯ ಶಿರ್ವಾದಲ್ಲಿ ೧೨ನೇ ಶತಮಾನದ ವಿಷ್ಣುವಿನ ವಿಗ್ರಹ ಪತ್ತೆಯಾಗಿದ್ದು, ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚ್ಯ ಇತಿಹಾಸ ಹಾಗೂ ಪುರಾತತ್ವ ವಿಭಾಗ ಹರಿಯ ಮೂರ್ತಿಯನ್ನು ಪತ್ತೆ ಮಾಡಿದೆ. ಇಲ್ಲಿನ ಪಂಚಾಯತ ಕಚೇರಿಯ ಹಿಂದೆ ಹಳೆಯ ದೇವಸ್ಥಾನದ ಸಮೀಪ ಉತ್ಖನನ ಮಾಡುತ್ತಿದ್ದ ಸಂದರ್ಭದಲ್ಲಿ ೨೦ ಅಡಿ ಆಳದಲ್ಲಿ ಸುಂದರ ವಿಷ್ಣು ಮೂರ್ತಿ ಪತ್ತೆಯಾಗಿದೆ. ಮೂರ್ತಿ ಕಾರಂದ ಮುಕುಟ, ಮಕರ … Continued

ತೇಜಸ್‌ ನಿರ್ಮಾಣ ಅವಲೋಕಕ್ಕೆ ವಾಯುಸೇನೆ ತಂಡ

ಬೆಂಗಳೂರು: ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಉತ್ಪಾದಿಸುವ ಯುದ್ಧವಿಮಾನ ತೇಜಸ್‌ ನಿಗದಿತ ಸಮಯದಲ್ಲಿ ರೂಪಗೊಳ್ಳುವ ದಿಸೆಯಲ್ಲಿ ಭಾರತೀಯ ವಾಯುಸೇನೆ ಉಪ ಮುಖ್ಯಸ್ಥರ ನೇತೃತ್ವದಲ್ಲಿ ಸಂಯೋಜಿತ ಪ್ರಾಜೆಕ್ಟ್‌ ಅವಲೋಕನ ತಂಡವನ್ನು ರಚಿಸಲು ವಾಯುಸೇನೆ ಮುಂದಾಗಿದೆ. ಗುಣಮಟ್ಟದ ಯುದ್ಧ ವಿಮಾನ ನೀಡುವ ದಿಸೆಯಲ್ಲಿ ತೇಜಸ್ ನಿರ್ಮಾಣದ ಸಂದರ್ಭದಲ್ಲಿ ಅವಶ್ಯಕ ಮಾರ್ಪಾಡುಗಳನ್ನು  ಮಾಡಲು ಸ್ಟೇಕ್‌ ಹೋಲ್ಡರ್‌ಗಳ ದ್ವೈವಾರ್ಷಿಕ ಅವಲೋಕನಕ್ಕೆ ಅವಕಾಶ ಕಲ್ಪಿಸಲು … Continued

ವಾರದಲ್ಲಿ ಕಾರ್ಯಾರಂಭ ಮಾಡಲು ವಿಸ್ಟ್ರಾನ್‌ ನಿರ್ಧಾರ

ಬೆಂಗಳೂರು: ಹಲವು ತಿಂಗಳುಗಳ ಹಿಂದೆ ದಾಳಿಗೊಳಗಾಗಿದ್ದ ತೈವಾನ್‌ ಕಂಪನಿ ವಿಸ್ಟ್ರಾನ್‌ ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಿದೆ. ಕಾರ್ಖಾನೆ ಆರಂಭಿಸಲು ವಿಸ್ಟ್ರಾನ್‌ ಸರಕಾರದಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದು, ಇನ್ನೊಂದು ವಾರದಲ್ಲಿ ಉತ್ಪಾದನೆ ಆರಂಭಿಸುವುದು. ಡಿಸೆಂಬರ್‌ ೧೨ರಂದು ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಉಗ್ರ ರೂಪ ತಳೆದಿದ್ದರಿಂದ ಕೋಲಾರ ಜಿಲ್ಲೆ ನಾರಾಯಣಪುರದಲ್ಲಿರುವ ಕಾರ್ಖಾನೆಯಲ್ಲಿ ಸುಮಾರು ೫೨ ಕೋಟಿ ರೂ. … Continued

ಹಿಂದಿನ ಸರ್ಕಾರಗಳ ಬಜೆಟ್‌ ಪ್ರಚಾರಕ್ಕೆ ಮಾತ್ರ ಸೀಮಿತ : ಪ್ರಧಾನಿ ಮೋದಿ

ನವದೆಹಲಿ:  ಮತಬ್ಯಾಂಕ್‌ ಕೇಂದ್ರಿಕರಿಸಿ ಬಜೆಟ್‌ ಮಾಡುತ್ತಿದ್ದ ಹಿಂದಿನ ಸರಕಾರಗಳು ಆಯವ್ಯಯವನ್ನು ಈಡೇರಿಸದೇ ಘೋಷಣೆಯ ಮಾಧ್ಯಮವಾಗಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರಕಾರಗಳನ್ನು ಟೀಕಿಸಿದ್ದಾರೆ, ದಶಕಗಳಿಂದ ಬಜೆಟ್‌ನಲ್ಲಿ ಯಾರ ಹೆಸರಿನಲ್ಲಿ ಯಾವ ಘೋಷಣೆಯಾಗಿದೆ ಎಂಬುದಕ್ಕೆ ಆಯವ್ಯಯ ಸೀಮಿತವಾಗುತ್ತಿತ್ತು. ಇದು ಮತಬ್ಯಾಂಕ್‌ಗೆ ಪೂರಕ ಘೋಷಣೆಯಂತಿತ್ತು, ಹಿಂದೆ ಬಜೆಟ್ ಪೂರ್ಣವಾಗಿ ಜಾರಿಗೆ ಬರುವಂತಿರಲಿಲ್ಲ.  ನಾವೆಲ್ಲ ಪ್ರಸಕ್ತ ಅವಶ್ಯಕತೆಗಳು ಹಾಗೂ … Continued

ಉಳ್ಳಾಲದಲ್ಲಿ ೪೯ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ, ಕಾಲೇಜ್‌ ಸೀಲ್‌

ಮಂಗಳೂರು: ಕೇರಳದ ಗಡಿಯಲ್ಲಿರುವ ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆಲಿಯಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ೪೯ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿರುವುದರಿಂದ ಕಾಲೇಜನ್ನು ಸೀಲ್‌ ಮಾಡಲಾಗಿದೆ. ಈ ಕಾಲೇಜು ಕರ್ನಾಟಕ ಮತ್ತು ಕೇರಳ ನಡುವಿನ ಅಂತಾರಾಜ್ಯ ಗಡಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರ್ಥಿಗಳು COVID-19 ಪರೀಕ್ಷೆಗೆ ಒಳಪಡುವ ಮೊದಲು ಕಾಲೇಜಿನ ಆರು ವಿದ್ಯಾರ್ಥಿಗಳು … Continued

ಅಯೋಧ್ಯಾ ಮಸೀದಿ ಮಾಲೀಕತ್ವದ ವಿಚಾರ: ಇಬ್ಬರು ಸಹೋದರಿಯರು ಕೋರ್ಟಿಗೆ

ಲಕ್ನೋ: ರಾಮ ಜನಮಭೂಮಿ-ಬಾಬ್ರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಅಯೋಧ್ಯೆಯ ಬೇರೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮಂಜೂರು ಮಾಡಿದ ಐದು ಎಕರೆ ಜಮೀನಿನ ಮಾಲೀಕತ್ವದ ವಿಚಾರದಲ್ಲಿ ದೆಹಲಿ ಮೂಲದ ಇಬ್ಬರು ಸಹೋದರಿಯರು ಬುಧವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಸಲ್ಲಿಸಿದ್ದ … Continued

ಮಂಡ್ಯ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಸರಕಾರ  ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಪರಮಾಣು ಇಂಧನ ಇಲಾಖೆಯ ಘಟಕ  ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ (ಎಎಮ್‌ಡಿ) ಮಾರ್ಲಗಲ್ – ಅಲಪಟ್ಟಣ ಪ್ರದೇಶದ ಪೆಗ್‌ಮ್ಯಾಟೈಟ್‌ಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಹೊಸ ತಂತ್ರಜ್ಞಾನಗಳಲ್ಲಿ … Continued

ಪ್ರಿಯಾಂಕಾ ಗಾಂಧಿ ಬೆಂಗಾವಲು ಪಡೆ ವಾಹನಗಳ ಮಧ್ಯೆ ಡಿಕ್ಕಿ

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ಪಡೆಯ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಉತ್ತರ ಪ್ರದೇಶದ ಹಾಪೂರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘರ್‌ ಮುಕ್ತೇಶ್ವರ ಬಳಿ ಗುರುವಾರ ಸಂಭವಿಸಿದೆ. ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಪೂರ ಜಿಲ್ಲೆಯ ದಿಬ್ದಿವಾ ಗ್ರಾಮದ ರೈತ ಅಜಯಕುಮಾರ ಲಲ್ಲು ಜನವರಿ ೨೬ರಂದು ನಡೆದ ರೈತರ ಹೋರಾಟ … Continued

ತೇಜಸ್‌ ಯುದ್ಧ ವಿಮಾನ ಖರೀದಿಗೆ ೬ ದೇಶಗಳ ಆಸಕ್ತಿ

ಬೆಂಗಳೂರು: ಆಗ್ನೇಯ ಏಷಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಯುದ್ಧ ವಿಮಾನ ತೇಜಸ್‌ ಖರೀದಿಗೆ ಆಸಕ್ತಿ ತೋರಿವೆ ಎಂದು ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಚೇರಮನ್‌ ಆರ್.‌ ಮಾಧವನ್‌ ತಿಳಿಸಿದ್ದಾರೆ. ಏರೋ ಇಂಡಿಯಾದಲ್ಲಿ ಮಾತನಾಡಿದ ಅವರು, ೩೦೯ ಕೋಟಿ ರೂ. ಮೊತ್ತದ ಯುದ್ಧ ವಿಮಾನ ತೇಜಸ್‌ ರಫ್ತಿಗೆ ನಾವು ಉತ್ಸುಕರಾಗಿದ್ದೇವೆ. ಇದು ಸ್ಪರ್ಧಾತ್ಮಕ … Continued

ರೈತ ಹೋರಾಟ ಹಾಲಿವುಡ್‌ ಸೆಲೆಬ್ರಿಟಿಗಳ ಬೆಂಬಲಕ್ಕೆ ಕ್ರೀಡಾಪಟುಗಳ ಚಾಟಿ

ನವದೆಹಲಿ: ನೂತನ ಕೃಷಿ ಮಸೂದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೆಲ ವಿದೇಶಿಗರು ಬೆಂಬಲಿಸಿದ್ದನ್ನು ದೇಶದ ಪ್ರಮುಖ ಕ್ರೀಡಾಪಟುಗಳು ಖಂಡಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ, ಹಿರಿಯ ಅಥ್ಲೀಟ್‌ ಪಿ.ಟಿ.ಉಷಾ ಸೇರಿದಂತೆ ಹಲವು ಆಟಗಾರರು ರೈತರ ಹೋರಾಟಕ್ಕೆ ಹಾಲಿವುಡ್‌ ಸೆಲೆಬ್ರಿಟಿಗಳು ಬೆಂಬಲಿಸುವುದನ್ನು ವಿರೋಧಿಸಿದ್ದಾರೆ. ಭಾರತದ ಏಕತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ. ಬಾಹ್ಯ ಶಕ್ತಿಗಳು ನಮ್ಮ … Continued