ನಂದಿನಿ ತುಪ್ಪದ ದರ ಹೆಚ್ಚಳ ಮಾಡಿದ ಕೆಎಂಎಫ್‌

ಬೆಂಗಳೂರು: ಜಿಎಸ್‌ಟಿ ಇಳಿಕೆಯ ಖುಷಿಯಲ್ಲಿದ್ದ ಕರ್ನಾಟಕದ ಜನರಿಗೆ ಕೆಎಂಎಫ್‌ (KMF) ದರ ಏರಿಕೆಯ ಬಿಸಿ ಮುಟ್ಟಿಸಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ 90 ರೂಪಾಯಿಗಳಷ್ಟು ಏರಿಕೆ ಮಾಡಿದೆ. 2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿತ್ತು. ನಂತರ 2022 ರಲ್ಲಿ ಜಿಎಸ್‌ಟಿ ಪ್ರಮಾಣವನ್ನು ಶೇ. 22ಕ್ಕೆ ಏರಿಕೆ … Continued

ದಾಂಡೇಲಿ : ಗಣೇಶಗುಡಿ ಬಳಿ ಕಂಡುಬಂದ ಅಪರೂಪದ ʼಪಟ್ಟೆ ಕತ್ತೆಕಿರುಬʼ…!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅಭಯಾರಣ್ಯದ ಪ್ರದೇಶವಾದ ಗಣೇಶಗುಡಿ ಸೇತುವೆಯ ಬಳಿ ಸ್ಥಳೀಯವಾಗಿ “ಕತ್ತೆ ಕಿರುಬ” (striped hyena) ಎಂದು ಕರೆಯಲ್ಪಡುವ ಅಪರೂಪದ ಪಟ್ಟೆ ಕತ್ತೆ ಕಿರುಬ ಪತ್ತೆಯಾಗಿದೆ. ಬುಧವಾರ ಬೆಳಗಿನ ಜಾವ ಸ್ಥಳೀಯ ನಿವಾಸಿಯೊಬ್ಬರು ವೀಡಿಯೊದಲ್ಲಿ ಸೆರೆಹಿಡಿದ ಪ್ರಾಣಿಯು, ಈ ಹಚ್ಚ ಹಸಿರಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮೊದಲ ದಾಖಲಿತ … Continued

ನ.7ರಂದು ದೇಶದೆಲ್ಲೆಡೆ ʼವಂದೇ ಮಾತರಂʼ ಗೀತೆಯ ಸಾಮೂಹಿಕ ಗಾಯನ

ಬೆಂಗಳೂರು : ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ (Vande Mataram Song) ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಂಚಾಲಕಿ ಮಾಳವಿಕ ಅವಿನಾಶ ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, … Continued

ಎಸ್ ​ಎಸ್ ​ಎಲ್ ​​ಸಿ, ದ್ವಿತೀಯ ಪಿಯು ಪರೀಕ್ಷೆ 1, 2ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಬುಧವಾರ (ನವೆಂಬರ್ 5) ಪ್ರಕಟಿಸಿದೆ. ಎಸ್​​ಎಸ್​ಎಲ್​ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯುಲಿದ್ದು, ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು 2026ರ … Continued

ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ₹ 50 ಲಕ್ಷ, 32 ಚಿನ್ನದ ಬಳೆಗಳು ವಶಕ್ಕೆ

ಕಾರವಾರ : ಮುಂಬೈನಿಂದ ಮಂಗಳೂರಿಗೆ ಖಾಸಗಿ ಬಸ್ ಮೂಲಕ ನೀಲಿ ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ದಾಖಲೆರಹಿತ ನಗದು ಮತ್ತು ಚಿನ್ನವನ್ನು ಭಟ್ಕಳ ಪೊಲೀಸರು ಮಂಗಳವಾರ ಸಂಜೆ ಪತ್ತೆಹಚ್ಚಿದ್ದು, ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ನಿಖರ ಗುಪ್ತಚರ ಮಾಹಿತಿ ಆಧಾರದ ಮೇರೆಗೆ ಕಾರ್ಯನಿರ್ವಹಿಸಿದ ಭಟ್ಕಳ ಪಟ್ಟಣ ಪೊಲೀಸ್ ಠಾಣೆಯ ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) … Continued

ವೀಡಿಯೊ…| ಮುಂಡಗೋಡ: ಭತ್ತ ಕಟಾವು ಮಾಡುತ್ತಿರುವಾಗ ಬೃಹತ್‌ ಹೆಬ್ಬಾವು ಪ್ರತ್ಯಕ್ಷ…! ಅರಣ್ಯ ಅಧಿಕಾರಿಗಳಿಂದ ರಕ್ಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳ್ಳದಮನೆ ಗ್ರಾಮದಲ್ಲಿ ಬೃಹತ್‌ ಹೆಬ್ಬಾವೊಂದು ಮಂಗಳವಾರ ಭತ್ತದ ಕಟಾವು ಸಮಯದಲ್ಲಿ ಕೃಷಿ ಕಾರ್ಮಿಕರನ್ನು ದಿಗ್ಭ್ರಮೆಗೊಳಿಸಿತು. ಕಾರ್ಮಿಕರು ಭತ್ತದ ಗದ್ದೆಯಲ್ಲಿ ಬೆಳೆಗಳನ್ನು ಕಟಾವು ಮಾಡುವುದರಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಬೃಹತ್ ಹೆಬ್ಬಾವು ಕಾಣಿಸಿಕೊಂಡಿತು, ಇದು ತಕ್ಷಣ ಅಲ್ಲಿದ್ದವರನ್ನು ಭಯಭೀತರನ್ನಾಗಿಸಿತು ಮತ್ತು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಅಲ್ಲಿದ್ದ ಕಾರ್ಮಿಕರು ಈ … Continued

ದಾಂಡೇಲಿ | ಟ್ರ್ಯಾಕ್ಟರ್‌-ಸ್ಕೂಟಿ ಡಿಕ್ಕಿ ; ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಗಂಭೀರ ಗಾಯ

ಕಾರವಾರ: ಮಂಗಳವಾರ ಬೆಳಿಗ್ಗೆ ಸಂಭವಿಸಿದ ಟ್ರ್ಯಾಕ್ಟರ್‌-ಸ್ಕೂಟರ್‌ ಮುಖಾಮುಖು ಡಿಕ್ಕಿಯಲ್ಲಿ ದಾಂಡೇಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಸ್ಥಳೀಯ ನಗರ ಸಭೆ ಹಾಲಿ ಸದಸ್ಯ ಮೋಹನ ಹಲವಾಯಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನಗರದ ಮುಖ್ಯ ಅಂಚೆ ಕಚೇರಿ ಬಳಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಪ್ರಾಥಮಿಕ ವರದಿಗಳ … Continued

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ವೈ ಮೇಟಿ ನಿಧನ

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ (Congres MLA) ಎಚ್.ವೈ ಮೇಟಿ (HY Meti) ಅವರು ಮಂಗಳವಾರ ನಿಧನರಾಗಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಶಾಸಕರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎಚ್.ವೈ ಮೇಟಿ ಅವರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಬಾಗಲೋಕಟೆ ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ … Continued

ಕನ್ನಡ ಕಿರುತೆರೆ ನಟಿಗೆ ಅಶ್ಲೀಲ ವೀಡಿಯೊ ಕಳುಹಿಸಿ ಕಿರುಕುಳ ; ಆರೋಪಿ ಬಂಧನ

ಬೆಂಗಳೂರು: ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ಕೆಲಸ ಮಾಡುವ 41 ವರ್ಷದ ನಟಿಯೊಬ್ಬರು ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪದೇ ಪದೇ ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ಕಿರುಕುಳ ಮುಂದುವರೆಸಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ತೆಲುಗು ಮತ್ತು ಕನ್ನಡ … Continued

ಹುಬ್ಬಳ್ಳಿ : ಭವರಲಾಲ ಜೈನಗೆ ಧೀಮಂತ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಪ್ರತಿಷ್ಠಿತ ಧೀಮಂತ ಪ್ರಶಸ್ತಿಯನ್ನುಹುಬ್ಬಳ್ಳಿಯ ಶ್ರೀ ಜೈನ್‌ ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಳಿ ಚೇರ್ಮನ್ ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಭವರಲಾಲ ಸಿ. ಜೈನ್ ಅವರಿಗೆ ನೀಡಿ ಗೌರವಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ, ಭವರಲಾಲ ಸಿ. ಜೈನ್ ಅವರ ಸಮಾಜಮುಖಿ ಸೇವೆ ಹಾಗೂ … Continued