ಸರ್ಪ್ರೈಸ್​ ಗಿಫ್ಟ್​ ಕೊಡುವುದಾಗಿ ಕಣ್ಣು ಮುಚ್ಚಲು ಹೇಳಿ ಭಾವಿ ಪತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಯುವತಿ..!

ವಿಜಯವಾಡ: ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಭಾವಿ ಪತಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿರುವ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್​ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್​ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತ ರಾಮು ನಾಯ್ಡು ಹೈದರಾಬಾದ್​ನ ಸಿಎಸ್​ಐಆರ್​ನಲ್ಲಿ​ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮದುವೆ ಆರೋಪಿತ ಯುವತಿ ಜೊತೆ ಮೇ … Continued

ದಲಿತ ಅಪ್ರಾಪ್ತ ವಿದ್ಯಾರ್ಥಿಗೆ ಥಳಿಸಿ, ಕಾಲು ನೆಕ್ಕಿಸಿದರು…! ವೀಡಿಯೊ ವೈರಲ್‌ ಆದ ನಂತರ ಏಳು ಮಂದಿ ಬಂಧನ

ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಕೆಲವರು ಅಪ್ರಾಪ್ತ ಬಾಲಕನಿಂದ ತಮ್ಮ ಪಾದಗಳನ್ನು ನೆಕ್ಕಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಏಳು ಮಂದಿಯನ್ನು ಬಂಧಿಸಲಾಗಿದೆ. 10ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಾಲು ನೆಕ್ಕುವಂತೆ ಮಾಡಿರುವುದನ್ನು ವೀಡಿಯೊ ತೋರಿಸಿದೆ. … Continued

20 ವರ್ಷದ ಯುವತಿ ಅಪಹರಿಸಿ ಮಾದಕ ವಸ್ತು ನೀಡಿ ಅತ್ಯಾಚಾರ ಮಾಡಿದ ಟಿಆರ್‌ಎಸ್ ಮುಖಂಡನ ಮಗ, ಆತನ ಸ್ನೇಹಿತ: ಬಂಧನ

ಹೈದರಾಬಾದ್: ಸೂರ್ಯಪೇಟ್ ಜಿಲ್ಲೆಯ ಕೊಡಾಡ್ ಪಟ್ಟಣದ ಟಿಆರ್‌ಎಸ್ ವಾರ್ಡ್ ಕೌನ್ಸಿಲರ್‌ನ ಮಗ ಮತ್ತು ಆತನ ಸ್ನೇಹಿತ 20 ವರ್ಷದ ಯುವತಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಶುಕ್ರವಾರ ಸಂತ್ರಸ್ತೆಯನ್ನು ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದಾಗ ಅಪಹರಿಸಿದ ಇಬ್ಬರೂ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 20 ವರ್ಷದ ಸಂತ್ರಸ್ತೆ ತನ್ನ ತಾಯಿಯೊಂದಿಗೆ … Continued

ಚಂದ್ರನ ಎರಡು ಮುಖಗಳ ನಡುವೆ ದೊಡ್ಡ ವ್ಯತ್ಯಾಸ ಯಾಕೆ: ರಹಸ್ಯ ಭೇದಿಸಿದ ವಿಜ್ಞಾನಿಗಳು…!

ವಿವಿಧ ದೇಶಗಳು ಚಂದ್ರನ ಹಿಂದೆ ಓಡುತ್ತಿರುವಾಗ, ಹೊಸ ಸಂಶೋಧನೆಯು ಚಂದ್ರನ ಎರಡು ಬದಿಗಳು ಏಕೆ ವಿಭಿನ್ನವಾಗಿವೆ ಎಂಬುದರ ಹಿಂದೆ ಈವರೆಗೆ ತಿಳಿದಿಲ್ಲದ ರಹಸ್ಯವನ್ನು ಬಹಿರಂಗಪಡಿಸಿದೆ. ಈ ಒಗಟಿಗೆ ಪರಿಹಾರವು 4.3 ಶತಕೋಟಿ ವರ್ಷಗಳ ಹಿಂದೆ ಚಂದ್ರನಿಗೆ ಡಿಕ್ಕಿ ಹೊಡೆದು ಅಲುಗಾಡಿಸಿದ ಪ್ರಾಚೀನ ಕ್ಷುದ್ರಗ್ರಹ ಘರ್ಷಣೆಯಲ್ಲಿದೆ. ಈ ಘರ್ಷಣೆಯು ಎಷ್ಟು ದೊಡ್ಡದಾಗಿತ್ತು ಎಂದರೆ ಅದು ಭೂಮಿಯ ನೈಸರ್ಗಿಕ … Continued

ಅಸಡ್ಡೆ ಚಾಲಕ… ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿಗೆ ಜನರಿಂದ ತುಂಬಿದ್ದ ಬಸ್ ಚಲಾಯಿಸಲು ಅವಕಾಶ ನೀಡಿದ ಡ್ರೈವರ್‌..! ಚಾಲಕನ ಪರವಾನಿಗೆ ಅಮಾನತು.. ವೀಕ್ಷಿಸಿ

ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಬಸ್ ಚಲಾಯಿಸುತ್ತಿರುವುದನ್ನು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಉಧಂಪುರ-ಲ್ಯಾಂಡರ್ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ ಅನ್ನು ಪಂಚೈರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿ ಓಡಿಸುತ್ತಿದ್ದಳು ಎಂಬುದು ಗಮನಾರ್ಹ. ಬಾಲಕಿ ಸ್ಟೀರಿಂಗ್ ಹಿಡಿದಿರುವಾಗ ಆಕೆಯ ಪಕ್ಕದಲ್ಲಿ ಕುಳಿತಿದ್ದ ಬಸ್ ಚಾಲಕ ಆಕೆಗೆ … Continued

ಕೆವೈಸಿ, ಪಿಪಿಐ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕೆ ಮಣಪ್ಪುರಂ ಫೈನಾನ್ಸ್‌ಗೆ ದಂಡ ವಿಧಿಸಿದ ಆರ್‌ಬಿಐ

ಮುಂಬೈ: ಕೆವೈಸಿ (KYC) ಮಾರ್ಗಸೂಚಿಗಳನ್ನು ಮತ್ತು ಪ್ರಿಪೇಯ್ಡ್ ಪಾವತಿ ಸಾಧನ (prepaid payment instruments) ಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಮಣಪ್ಪುರಂ ಫೈನಾನ್ಸ್‌ಗೆ 17 ಲಕ್ಷ ರೂ.ಗಳಿಗಿಂತ ಹೆಚ್ಚಿನ ದಂಡವನ್ನು ವಿಧಿಸಿದೆ ಎಂದು ಬಿಸಿನೆಸ್‌ ಟುಡೆ.ಇನ್‌ ವರದಿ ಮಾಡಿದೆ. ಪಾವತಿ ಮತ್ತು ಸೆಟ್ಲ್‌ಮೆಂಟ್ … Continued

ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಇಂಜಿನಿಯರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆ.ಜ. ಮನೋಜ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಸೇವಾವಧಿ ಏ.30ರಂದು ಜನರಲ್ ನರವಣೆ ನಿವೃತ್ತಿಯಾಗಲಿದ್ದು, ಅದೇ ದಿನ ಲೆ.ಜ. ಮನೋಜ್ ಪಾಂಡೆ ಭೂಸೇನೆಉ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. … Continued

ಒಮಿಕ್ರಾನ್ ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ : ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ

ವಾಷಿಂಗ್ಟನ್‌ (ಅಮೆರಿಕ): ಕೊಲೊರಾಡೋ ವಿಶ್ವವಿದ್ಯಾನಿಲಯ, ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್ ರೂಪಾಂತರದ ಒಮಿಕ್ರಾನ್ ಇತರ ಯಾವುದೇ ರೂಪಾಂತರಗಳಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮೇಲ್ಭಾಗದ ಅಪ್ಪರ್​ ಏರ್​ ವೇ ಸೋಂಕನ್ನು (upper airway infection) ಉಂಟುಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಹೃದಯಾಘಾತ ಮತ್ತು ಇತರ ತೀವ್ರ ತೊಡಕುಗಳ ಅಪಾಯ … Continued

4 ತಿಂಗಳ ಗರಿಷ್ಠ 14.55% ತಲುಪಿದ ಸಗಟು ಬೆಲೆ ಆಧಾರಿತ ಹಣದುಬ್ಬರ

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟ 14.55%ಕ್ಕೆ ಏರಿದೆ, ತರಕಾರಿಗಳು ಬೆಲೆ ಒತ್ತಡವನ್ನು ಕಡಿಮೆಗೊಳಿಸಿದರೂ ಸಹ ಮುಖ್ಯವಾಗಿ ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳು ಹೆಚ್ಚಳವಾಗಿರುವುದು ಈ ರೀತಿ ಹೆಚ್ಚಳಕ್ಕೆ ಕಾರಣವಾಗಿದೆ. ಸೋಮವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2021 ರಿಂದ ಪ್ರಾರಂಭವಾಗುವ ಸತತ 12 ನೇ … Continued

ಕೋಮು ಹಿಂಸಾಚಾರದ ಆರೋಪ ಹೊತ್ತಿರುವವರ ಮನೆಗಳು, ಅಂಗಡಿಗಳ ನೆಲಸಮದ ವಿರುದ್ಧ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ ಜಮಿಯತ್

ನವದೆಹಲಿ: ಶಿಕ್ಷಾರ್ಹ ಕ್ರಮದ ಭಾಗವಾಗಿ ಗಲಭೆಗಳಂತಹ ಅಪರಾಧ ಘಟನೆಗಳಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ನೆಲಸಮ ಮಾಡುವಂತಿಲ್ಲ ಎಂದು ನಿರ್ದೇಶನ ನೀಡುವಂತೆ ಕೋರಿ ಜಮಿಯತ್ ಉಲಮಾ-ಇ-ಹಿಂದ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಗಲಭೆಗಳಂತಹ ಅಪರಾಧ ಘಟನೆಗಳಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಮನೆಗಳನ್ನು ಧ್ವಂಸಗೊಳಿಸಲು ಹಲವಾರು ರಾಜ್ಯಗಳಲ್ಲಿ ಆಡಳಿತವು ಬುಲ್ಡೋಜರ್‌ಗಳನ್ನು ಬಳಸುತ್ತಿದೆ ಎಂದು … Continued