ಯುಎಇ ಜೊತೆ ಭಾರತ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ; ದ್ವಿಪಕ್ಷೀಯ ವ್ಯಾಪಾರ ಬೂಸ್ಟ್, ಎಮಿರೇಟ್ಸ್‌ನಲ್ಲಿ ಐಐಟಿ

ನವದೆಹಲಿ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಯುಎಇಯೊಂದಿಗೆ ಭಾರತವು ಶುಕ್ರವಾರ ಐತಿಹಾಸಿಕ ವ್ಯಾಪಾರ ಒಪ್ಪಂದ – ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ)ಕ್ಕೆ ಸಹಿ ಹಾಕಿದೆ. ಇದು ಉಭಯ ದೇಶಗಳ ನಡುವಿನ ಮೊದಲ ಪ್ರಮುಖ ವ್ಯಾಪಾರ ಒಪ್ಪಂದವಾಗಿದ್ದು, ಸೆಪ್ಟೆಂಬರ್ 2021ರಲ್ಲಿ ಪ್ರಾರಂಭವಾದ ಮಾತುಕತೆಗಳು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿವೆ. ವ್ಯಾಪಾರ ಒಪ್ಪಂದದ ಜಂಟಿ ವಿಷನ್ ಹೇಳಿಕೆಯು … Continued

ಸಿಎಎ ವಿರೋಧಿ ಪ್ರತಿಭಟನಾಕಾರರಿಂದ ವಸೂಲಿ ಮಾಡಿದ ಆಸ್ತಿ ಹಾನಿಯ ದಂಡ ಹಿಂತಿರುಗಿಸಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪ ಎದುರಿಸುತ್ತಿರುವವರಿಂದ ವಸೂಲಿ ಮಾಡಲಾದ ದಂಡದ ಹಣವನ್ನು ಅವರಿಗೇ ಮರಳಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದಕ್ಕೆ ಪರಿಹಾರವನ್ನು ಕಟ್ಟಿಕೊಡುವ ಸಲುವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿದ್ದ ಶೋಕಾಸ್‌ … Continued

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪು: 38 ಜನರಿಗೆ ಮರಣದಂಡನೆ, 11 ಮಂದಿಗೆ ಸಾಯುವ ವರೆಗೆ ಜೀವಾವಧಿ ಶಿಕ್ಷೆ

ಅಹಮದಾಬಾದ್: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 49 ಅಪರಾಧಿಗಳ ಪೈಕಿ 38 ಮಂದಿಗೆ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಇತರ 11 ಅಪರಾಧಿಗಳಿಗೆ ಮರಣದವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 56 ಜೀವಗಳನ್ನು ಬಲಿ ಪಡೆದ ಹಾಗೂ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಫೆಬ್ರವರಿ 8 … Continued

ಉತ್ತರ ಪ್ರದೇಶ ಚುನಾವಣೆ 2022: ನಾಲ್ಕನೇ ಹಂತದ ಚುನಾವಣೆಯಲ್ಲಿ 129 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣ ಇರುವವರು..!

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದತ್ತ ಸಾಗುತ್ತಿರುವಂತೆಯೇ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಬಿಡುಗಡೆ ಮಾಡಿರುವ ವರದಿಯು 621 ರಲ್ಲಿ 129 ಅಂದರೆ 21% ಅಭ್ಯರ್ಥಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ. ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯ ಆಧಾರದ ಮೇಲೆ, 167 (27%) ಅಭ್ಯರ್ಥಿಗಳು ತಮ್ಮ … Continued

ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ, ಕೋಳಿ ಫಾರಂನಲ್ಲಿ 25,000 ಕೋಳಿಗಳನ್ನು ಸಾಯಿಸಲು ನಿರ್ಧಾರ

ಮುಂಬೈ: ಹಕ್ಕಿಜ್ವರದ ಭೀತಿಯ ಹಿನ್ನೆಲೆಯಲ್ಲಿ ಪೀಡಿತ ಕೋಳಿ ಫಾರಂನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 25,000 ಪಕ್ಷಿಗಳು ಮುಂದಿನ ಕೆಲವೇ ದಿನಗಳಲ್ಲಿ ಸಾಯಲಿವೆ. ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನ ವೆಹ್ಲೋಲಿ ಗ್ರಾಮದ ಫಾರಂನಲ್ಲಿ ಸುಮಾರು 100 ಕೋಳಿಗಳು ಹಠಾತ್ತನೆ ಮೃತಪಟ್ಟ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಣೆ … Continued

ಭಾರತದಲ್ಲಿ 25,920 ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 15.7% ರಷ್ಟು ಕಡಿಮೆ

ನವದೆಹಲಿ: ಭಾರತದ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತ 25,920 ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇದು ನಿನ್ನೆಯಿಂದ ಶೇಕಡಾ 15.7 ರಷ್ಟು ಇಳಿಕೆಯಾಗಿದೆ. ಇದೇ ಸಮಯದಲ್ಲಿ ದೇಶವು 492 ಸಾವುಗಳನ್ನು ದಾಖಲಿಸಿದೆ. ದೇಶದ ಒಟ್ಟು ಪ್ರಕರಣ ಈಗ 4,27,80,235 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 5,10,905 ಆಗಿದೆ. ಕಳೆದ 24 ಗಂಟೆಗಳಲ್ಲಿ … Continued

ಟ್ವಿಟರ್ ಡೌನ್ ಆಗಿದೆಯೇ? ಸ್ಥಗಿತದ ವರದಿ ಮಾಡಿದ ಹಲವಾರು ಬಳಕೆದಾರರು

ನವದೆಹಲಿ: ಟ್ವಿಟರ್ ಗುರುವಾರ, ಫೆಬ್ರವರಿ 17 ರಂದು ಮತ್ತೆ ತಾಂತ್ರಿಕ ದೋಷವನ್ನು ಅನುಭವಿಸಿತು, ಏಕೆಂದರೆ ಭಾರತ ಮತ್ತು ಅಮೆರಿಕ ಸೇರಿದಂತೆ ಅನೇಕ ದೇಶಗಳ ಬಳಕೆದಾರರು ತಮ್ಮ ಫೀಡ್‌ನಲ್ಲಿ ಟ್ವೀಟ್‌ಗಳನ್ನು ಪ್ರವೇಶಿಸಲು ತೊಂದರೆ ಎದುರಿಸುತ್ತಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿನ ಸ್ಥಗಿತವು ರಾತ್ರಿ 9:30 ರ ಸುಮಾರಿಗೆ (IST) ಉಂಟಾಗಿದೆ ಮತ್ತು DownDetector.com ಪ್ರಕಾರ, 5,600 ಕ್ಕೂ ಹೆಚ್ಚು ಬಳಕೆದಾರರು … Continued

ಬಿಜೆಪಿ ವಿರುದ್ಧ ರಾಷ್ಟ್ರೀಯ ವೇದಿಕೆ ರಚನೆಗೆ ಬಿಜೆಪಿಯೇತರ ಸಿಎಂಗಳೊಂದಿಗೆ ಸ್ಟಾಲಿನ್ ಸಮನ್ವಯ

ಚೆನ್ನೈ: ರಾಷ್ಟ್ರೀಯ ವೇದಿಕೆಯೊಂದನ್ನು ರಚಿಸಲು ಕಾಂಗ್ರೆಸ್ , ಸಿಪಿಎಂ ಸೇರಿದಂತೆ ಬಿಜೆಪಿಯೇತರ ಮುಖ್ಯಮಂತ್ರಿಗಳು ಮತ್ತಿತರ ವಿಪಕ್ಷಗಳ ಮುಖಂಡರೊಂದಿಗೆ ಸಮನ್ವಯ ಸಾಧಿಸಲು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ವರಿಷ್ಠ ಎಂಕೆ ಸ್ಟಾಲಿನ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಸ್ಟಾಲಿನ್ ಈಗಾಗಲೇ ಅಖಿಲ ಭಾರತ ಸಾಮಾಜಿಕ ನ್ಯಾಯದ ಒಕ್ಕೂಟವನ್ನು ಸ್ಥಾಪಿಸಿದ್ದಾರೆ, ಇದರಲ್ಲಿ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮತ್ತು ಎಐಎಡಿಎಂಕೆ ನಾಯಕ … Continued

ಎಂಡೋಸ್ಕೋಪಿ ಮೂಲಕ ಬಾಲಕನ ಹೊಟ್ಟೆಯಿಂದ 5-ಸೆಂಮೀ ಬ್ಯಾಟರಿ ಹೊರತೆಗೆದ ವೈದ್ಯರು..!

ಚೆನ್ನೈ: ಆಟವಾಡುವಾಗ ಆಕಸ್ಮಿಕವಾಗಿ ಬ್ಯಾಟರಿ ನುಂಗಿ ಹೊಟ್ಟೆಯೊಳಗೆ ಸಿಲುಕಿಕೊಂಡಿದ್ದ ಚೆನ್ನೈನ ನಾಲ್ಕು ವರ್ಷದ ಬಾಲಕನನ್ನು ರೇಲಾ ಆಸ್ಪತ್ರೆಯ ವೈದ್ಯರ ತಂಡ ರಕ್ಷಿಸಿದೆ. ಇಲ್ಲಿನ ರೇಲಾ ಆಸ್ಪತ್ರೆಯ ವೈದ್ಯರು ಆಕಸ್ಮಿಕವಾಗಿ ನುಂಗಿದ ನಾಲ್ಕು ವರ್ಷದ ಬಾಲಕನ ಹೊಟ್ಟೆಯಿಂದ ಎಂಡೋಸ್ಕೋಪಿ ಮೂಲಕ 5 ಸೆಂ.ಮೀ ಬ್ಯಾಟರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೇಲಾ ಆಸ್ಪತ್ರೆಯ ಗ್ರೂಪ್ ಡೈರೆಕ್ಟರ್ ಮತ್ತು ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ … Continued

ದೀರ್ಘ ಕಾಲ ಬಾಳುವ ರಸ್ತೆ ನಿರ್ಮಿಸದಿದ್ದರೆ ಮಿಲಿಟರಿಗೆ ಹೊಣೆ ವಹಿಸಬೇಕಾಗುತ್ತದೆ: ಬಿಬಿಎಂಪಿಗೆ ಖಡಕ್‌ ಎಚ್ಚರಿಕೆ ನೀಡಿದ ಹೈಕೋರ್ಟ್‌

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮತ್ತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೀರ್ಘ ಕಾಲ ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಬೇಕು, ಇಲ್ಲವಾದರೆ ಆ ಕೆಲಸವನ್ನು ಮಿಲಿಟರಿಗೆ ವಹಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ. ಕೋರಮಂಗಲದ ವಿಜಯ್‌ ಮೆನನ್‌ ಎಂಬವರು ಬೆಂಗಳೂರಿನ ರಸ್ತೆಗಳ ದುಸ್ಥಿತಿ ಕುರಿತು ಸಲ್ಲಿಸಿದ್ದ … Continued