ಸಂಸತ್ ಭವನಕ್ಕೆ ರೈತರ ಜಾಥಾ; ಭದ್ರತೆ ಮತ್ತಷ್ಟು ಬಿಗಿಗೊಳಿಸಿದ ದೆಹಲಿ ಪೊಲೀಸರು

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಗುರುವಾರ ಸಂಸತ್ ಭವನಕ್ಕೆ ಜಾಥಾ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿ ಪೊಲೀಸರು ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ರೈತರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಬುಧವಾರ ದೆಹಲಿ ಪೊಲೀಸರು ಒಪ್ಪಿಗೆ ನೀಡಿದ್ದಾರೆ. ಸಂಸತ್ ಮುಂಗಾರು ಅಧಿವೇಶನ ನಡೆಯುತ್ತಿರುವುದರಿಂದ ರೈತರು ಸಂಸತ್ ಭವನದ ತನಕ ಜಾಥಾ ನಡೆಸುವುದಾಗಿ … Continued

ಜುಲೈ 23ರಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಸಿಧು: ಸಿಎಂ ಅಮರಿಂದರ್ ಸಿಂಗ್ ಗೈರು ಸಾಧ್ಯತೆ

ಚಂಡೀಗಡ: ಜುಲೈ 23 ರಂದು ಚಂಡೀಗಡದಲ್ಲಿ ನಡೆಯುವ ಸಮಾರಂಭದಲ್ಲಿ ನವಜೋತ್ ಸಿಂಗ್ ಸಿಧು ಪಂಜಾಬ್ ಘಟಕದ ಕಾಂಗ್ರೆಸ್ ಮುಖ್ಯಸ್ಥರ ಹುದ್ದೆಯನ್ನು ಔಪಚಾರಿಕವಾಗಿ ವಹಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿಧು ಅವರೊಂದಿಗಿನ ಜಗಳದಲ್ಲಿ ಸಿಲುಕಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಸುಮಾರು 65 ಶಾಸಕರು ಸಹಿ … Continued

ಪೆಗಾಸಸ್ ವಿವಾದದ ಮಧ್ಯಭಾಗದಲ್ಲಿ, ‘ಕೆಟ್ಟ’ ಮಾಧ್ಯಮ ಅಭಿಯಾನಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದ ಎನ್ಎಸ್ಒ

ನವದೆಹಲಿ: ನಡೆಯುತ್ತಿರುವ ಪೆಗಾಸಸ್ ಸ್ನೂಪಿಂಗ್ ವಿವಾದದ ಕೇಂದ್ರಬಿಂದುವಾಗಿರುವ ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್ (ಎನ್‌ಎಸ್‌ಒ) ಹೊಸ ಹೇಳಿಕೆ ನೀಡಿದ್ದು, ‘ವಿಶೇಷ ಆಸಕ್ತಿ ಗುಂಪು(special interest groups’)ಗಳಿಂದ ತಳ್ಳಲ್ಪಟ್ಟ ಫೋರ್ಬಿಡ್ಡನ್‌ ಸ್ಟೋರೀಸ್‌ (Forbidden Stories ನೇತೃತ್ವದ ಕೆಟ್ಟ ಮತ್ತು ಅಪಪ್ರಚಾರದ ಅಭಿಯಾನದ ಜೊತೆಗೆ’ ಆಡುವುದಿಲ್ಲ ಎಂದು ಹೇಳಿದೆ. . ಬುಧವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ … Continued

ಸಿಎಂ ಬಿಎಸ್‌ವೈಯಾರ ಚಮಚವೂ ಅಲ್ಲ ಎಂಬುದಕ್ಕಾಗಿ ಅವರಿಗೆ ಕಷ್ಟ: ಅದಕ್ಕೇ ಆಗದವರಿಂದ ಪಿತೂರಿ: ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ: ಈಗ ದೇಶಾದ್ಯಂತೆ ಕರ್ನಾಟಕ ರಾಜಕೀಯದ್ದೇ ಮಾತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಈಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರವೇಶಿಸಿದ್ದಾರೆ. ರಾಜ್ಯದ ಲಿಂಗಾಯತ ಸಮುದಾಯದ ನಾಯಕರು, ಮಠಾಧೀಶರು ಮುಖ್ಯಮಂತ್ರಿ ಬೆಂಬಲಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಡಾ. ಸುಬ್ರಮಣಿಯನ್ ಸ್ವಾಮಿಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರವಾಗಿ … Continued

ಭಾರತದಲ್ಲಿ ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ೧.೯೦ ಲಕ್ಷ ಮಕ್ಕಳು..!

ನವದೆಹಲಿ: ಕೊರೊನಾ ಸಾಂಕ್ರಾಮಿಕವು ಕೇವಲ ಉದ್ಯೋಗ, ನೆಮ್ಮದಿ, ಆರೋಗ್ಯವನ್ನು ಮಾತ್ರ ಕಸಿದುಕೊಂಡಿಲ್ಲ ಲಕ್ಷಾಂತರ ಮಕ್ಕಳ ಭವಿಷ್ಯವನ್ನೇ ಕಿತ್ತುಕೊಂಡಿದೆ. ಕೊರೊನಾ ಸೋಂಕಿನಿಂದ ಜೀವತೆತ್ತ ಪಾಲಕರು ತಮ್ಮ ಮಕ್ಕಳನ್ನು ಅನಾಥರನ್ನಾಗಿಸಿದ್ದಾರೆ. ತಂದೆ, ತಾಯಿಯ ಆಶ್ರಯ ಪಡೆಯಬೇಕಿದ್ದ ಮಕ್ಕಳು ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡು ಕೆಲವರು ಅನಾಥರಾದರೆ, ಬಹುತೇಕರು ತಂದೆ ಅಥವಾ ತಾಯಿ ಪ್ರೀತಿಯಿಂದ ವಂಚಿತರಾಗಿದ್ದಾರೆ. ಕೊರೊನಾ ಸೋಂಕು ಆರಂಭವಾದ ೧೪ … Continued

ತನ್ನ ನೌಕರರಿಗೆ ಮರ್ಸಿಡಿಸ್ ಬೆಂಜ್ ಕಾರ್‌’ ಗಿಫ್ಟ್ ನೀಡಲು ಮುಂದಾದ ಐಟಿ ಕಂಪನಿ…!

ನವದೆಹಲಿ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಗಳು ತನ್ನ ಉದ್ಯೋಗಿಗಳನ್ನ ಉಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತವೆ. ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದೇಶದ ದೊಡ್ಡ ಐಟಿ ಕಂಪೆನಿಗಳಲ್ಲಿ ಒಂದಾದ ಎಚ್‌ಸಿಎಲ್ ಟೆಕ್ ತನ್ನ ಪ್ರತಿಭಾವಂತ ನೌಕರರಿಗೆ ‘ಮರ್ಸಿಡಿಸ್ ಬೆಂಜ್ ಕಾರು’ಗಳನ್ನು ಗಿಫ್ಟ್ ಆಗಿ ನೀಡಲು ಯೋಜಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಎಚ್‌ಸಿಎಲ್ ಟೆಕ್ನಾಲಜಿಸ್ ಮುಖ್ಯ ಮಾನವ … Continued

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸುವ ದಿನಾಂಕ ವಿಸ್ತರಣೆ

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 12ನೇ ತರಗತಿ ಫಲಿತಾಂಶವನ್ನು ಜುಲೈ.25ರಂದು ಸಂಜೆ 5ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. ಈ ಕುರಿತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು, ಮಾಹಿತಿ ಬಿಡುಗಡೆ ಮಾಡಿದ್ದು, 12ನೇ ತರಗತಿ ಫಲಿತಾಂಶಗಳನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. 12ನೇ ತರಗತಿಯ ಫಲಿತಾಂಶಗಳನ್ನು ಅಂತಿಮಗೊಳಿಸಲು ಕೊನೆಯ ದಿನಾಂಕ ಜುಲೈ … Continued

ದೇಶದಲ್ಲಿ ಹಕ್ಕಿಜ್ವರದ ಸಾವಿನ ಮೊದಲ ಪ್ರಕರಣ ವರದಿ: ಹೆಚ್‌5ಎನ್‌1 ವೈರಸ್ಸಿಗೆ 11 ವರ್ಷದ ಬಾಲಕ ಸಾವು

ನವದೆಹಲಿ: ಕೊರೋನಾ 2ನೇ ಅಲೆಯಿಂದ ಈಗಷ್ಟೇ ದೇಶದ ಜನತೆ ಸುಧಾರಿಸಿಕೊಳ್ಳುತ್ತಿದ್ದು, ಈಗ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ. ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಬಾಲಕನಿಗೆ … Continued

ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಜಾಮೀನು ರಹಿತ ವಾರಂಟ್

ಫಾರೂಖಾಬಾದ್: ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೆ ಕೇಂದ್ರ ಅನುದಾನದಲ್ಲಿ ಅವರ ಟ್ರಸ್ಟ್‌ , ಡಾ.ಜಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ನಲ್ಲಿ 71 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲಿನ ಪ್ರಕರಣದಲ್ಲಿ ನ್ಯಾಯಾಳಯವು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದೆ. ಮಂಗಳವಾರ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ … Continued

ಪೆಗಾಸಸ್ ಬಗ್ಗೆ ಸತ್ಯ ಕೋರಿ ಇಸ್ರೇಲಿಗೆ ಪತ್ರ ಬರೆಯಲು ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಒತ್ತಾಯ

ನವದೆಹಲಿ: ಇಸ್ರೇಲ್ ಗೆ ಕಣ್ಗಾವಲು ತಂತ್ರಾಂಶ ಪೆಗಾಸಸ್ ಗೂಢಚರ್ಯೆ ಪ್ರಕರಣದ ಸಂಬಂಧ ನಾವು ಮುಚ್ಚಿಡುವಂಥದ್ದು ಏನೂ ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿಗೆ ಪತ್ರ ಬರೆದು ಸತ್ಯ ತಿಳಿಸುವಂತೆ ಹೇಳಲಿ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, … Continued