ಕೋವಿಡ್ -19ರ ಮೂರನೇ ಅಲೆ ಭಾರತವನ್ನು ಅವಲಂಬಿಸಿದೆ: ಏಮ್ಸ್ ನಿರ್ದೇಶಕ ಡಾ.ಗುಲೇರಿಯಾ

ನವದೆಹಲಿ: ಕೋವಿಡ್ -19 ರ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರಗಳು ಭಾರತ ಮತ್ತು ಜಗತ್ತಿಗೆ ಹೆಚ್ಚು ಸಾಂಕ್ರಾಮಿಕ ಕಳವಳಗಳಾಗಿ ಹೊರಹೊಮ್ಮುತ್ತಿರುವುದರಿಂದ, ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಬಗ್ಗೆ ತೀವ್ರ ಎಚ್ಚರಿಕೆ ತೆಗೆದುಕೊಳ್ಳುವಂತೆ ಮಾಡಿದೆ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಬುಧವಾರ ಹೇಳಿದ್ದಾರೆ. ಫಿಜರ್‌ನೊಂದಿಗಿನ ಮಾತುಕತೆಗಳು ಅಂತಿಮ ಹಂತದಲ್ಲಿವೆ ಮತ್ತು ಲಸಿಕೆಗಳಿಗಾಗಿ ಭಾರತ ಸರ್ಕಾರವು … Continued

ಕಾಶ್ಮೀರಿ ನಾಯಕರೊಂದಿಗೆ ಪ್ರಧಾನಿ ಮೋದಿ ಭೇಟಿಗೆ ಒಂದು ದಿನ ಮೊದಲು ಕಾಶ್ಮೀರದಲ್ಲಿ ಮೂರು ಉಗ್ರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆದಿರುವ ನಿರ್ಣಾಯಕ ಸರ್ವಪಕ್ಷ ಸಭೆಗೆ ಒಂದು ದಿನ ಮೊದಲು, ಕೇಂದ್ರಾಡಳಿತ ಪ್ರದೇಶವು ಬುಧವಾರ ವಿವಿಧ ಸ್ಥಳಗಳಲ್ಲಿ ಮೂರು ಉಗ್ರ ದಾಳಿಗೆ ಸಾಕ್ಷಿಯಾಯಿತು. ಪುಲ್ವಾಮಾದ ರಾಜ್‌ಪೋರಾ ಚೌಕ್‌ನಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜನಾ ಪಾರ್ಟಿಯಲ್ಲಿ ಉಗ್ರರು ಗ್ರೆನೇಡ್ ಹಾರಿಸಿದರು. ಪ್ರತೀಕಾರವಾಗಿ ಜಂಟಿ … Continued

ಮುಂಬೈ‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಬಂಧನ

ಮುಂಬೈ‌: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇಕ್ಬಾಲ್ ಕಸ್ಕರ್‌ನನ್ನು ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೊ (NCB) ಅಧಿಕಾರಿಗಳು ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಅಂತಾರಾಜ್ಯ ಮಾದಕ ವಸ್ತು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರನನ್ನು … Continued

ಭಾರತದ ಮೊದಲ ಅಂತಾರಾಷ್ಟ್ರೀಯ ಮಹಿಳಾ ಪ್ಯಾರಾ ಶೂಟರ್..28 ಚಿನ್ನದ ಪದಕ ವಿಜೇತೆ..ಈಗ ಬೀದಿ ಬದಿ ಚಿಪ್ಸ್‌ ಮಾರುತ್ತಾರೆ..!

ನವದೆಹಲಿ: 28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ…! ಇದನ್ನು ನಂಬಲು ಕಷ್ಟವಾದರೂ ಇದು ಸತ್ಯ..!! ಜಾಗತಿಕ ವೇದಿಕೆಗಳಲ್ಲಿ 28 ಬಾರಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ಪ್ಯಾರಾ ಶೂಟರ್‌ ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ … Continued

ತಿರುನ್ವೇಲಿ: ಸಿಮೆಂಟ್ ಕಾರ್ಖಾನೆಯಲ್ಲಿ ಪೈಪ್ ಬಾಂಬ್‍ಗಳು ಪತ್ತೆ..!

ತಿರುನ್ವೇಲಿ: ತಮಿಳುನಾಡಿನ ಖಾಸಗಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಹುದುಗಿಸಿಡಲಾಗಿದ್ದ ಎರಡು ಪೈಪ್ ಬಾಂಬ್‍ಗಳನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ. ತಮಿಳುನಾಡಿನ ತಿರುನನ್ವೇಲಿಯ ಶಂಕರನಗರದಲ್ಲಿರುವ ಖಾಸಗಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಪೈಪ್ ಬಾಂಬ್‍ಗಳು ಪತ್ತೆಯಾಗಿದ್ದು ಇವು ಪ್ರಬಲ ಬಾಂಬ್‍ಗಳಾಗಿವೆ. ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಮಾತ್ರ ಕಾರ್ಖಾನೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದ್ದರಿಂದ … Continued

ಉತ್ತರ ಪ್ರದೇಶ ಬಲವಂತದ ಮತ ಪರಿವರ್ತನೆ ದಂಧೆ: ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದ ಸಂತ್ರಸ್ತನ ಕುಟುಂಬ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರಕ್ಕೆ ಒಳಗಾದವರ ಕುಟುಂಬಕ್ಕೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಮತಾಂತರಕ್ಕೊಳಗಾದನ ತಂದೆ ಹೇಳಿದ್ದಾರೆ. ಮನು ಯಾದವ್ ಅವರ ತಂದೆ ತನ್ನ ಮಗನ ಮೊಬೈಲ್ ಸಂಖ್ಯೆಗೆ ಪಾಕಿಸ್ತಾನದಿಂದ ಕರೆ ಮಾಡಿದ್ದು ತಾನು ಕರೆ ಸ್ವೀಕರಿಸಿರುವುದಾಗಿ ಆರೋಪಿಸಿದ್ದಾರೆ. ಮುಫ್ತಿ ಖಾಜಿ ಜೆಹಂಗೀರ್ ಆಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಅವರು … Continued

ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಾಬಾ ರಾಮದೇವ್

ನವದೆಹಲಿ: ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಯೋಗ ಗುರು ಬಾಬಾ ರಾಮದೇವ್ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಪಾಟ್ನಾ ಮತ್ತು ರಾಯ್ಪುರಗಳಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಎಫ್‌ಐಆರ್‌ಗಳ ವಿಚಾರಣೆಯನ್ನು ತಡೆಹಿಡಿಯಲು ಬಾಬಾ ರಾಮ್‌ದೇವ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ ಮತ್ತು ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿದ್ದಾರೆ. ಕೋವಿಡ್ -19 ಚಿಕಿತ್ಸೆಗಾಗಿ … Continued

ಜಮ್ಮು-ಕಾಶ್ಮೀರ:ಪ್ರಧಾನಿ ಕರೆದ ಜೂ.24ರ ಸರ್ವ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್​

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಕರೆದ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. ಜೂ.24ರಂದು ಈ ಸಭೆ ನಡೆಯಲಿದ್ದು ಕಾಂಗ್ರೆಸ್​ ಸೇರಿ ಪ್ರಮುಖ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಗುಪ್ಕಾರ್​ ಮೈತ್ರಿಕೂಟ ಕೂಡ ಈ ಸಭೆಯಲ್ಲಿ ಪಾಲ್ಗೊಂಳ್ಳುವುದಾಗಿ ತಿಳಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮತ್ತು … Continued

ಚೋಕ್ಸಿ-ನೀರವ್ ಮೋದಿ-ಮಲ್ಯರ 8,442 ಕೋಟಿ ರೂ. ಮೌಲ್ಯದ ಆಸ್ತಿ ಸಾರ್ವಜನಿಕ ಬ್ಯಾಂಕುಗಳಿಗೆ ವರ್ಗಾವಣೆ:ಇಡಿ

ನವದೆಹಲಿ: ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ವಿಜಯ್ ಮಲ್ಯ ಮಾಡಿದ್ದ ವಂಚನೆಯಿಂದ ನಷ್ಟ ಅನುಭವಿಸಿದ್ದ ಸಾರ್ವಜನಿಕ ವಲಯ ಬ್ಯಾಂಕುಗಳಿಗೆ 8441.5 ಕೋಟಿ ರೂ.ಗಳ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವರ್ಗಾಯಿಸಿದೆ. ಈ ಕುರಿತು ಜಾರಿ ನಿರ್ದೇಶನಾಲಯ ಪ್ರಕಟಣೆ ನೀಡಿದ್ದು, ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ತಮ್ಮ ಕಂಪನಿಗಳ … Continued

ಮೂರು ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ ಆರ್‌ಬಿಐ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೂನ್ 21 ರಂದು ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಮಹಾರಾಷ್ಟ್ರ ಮೂಲದ ಬಾರಾಮತಿ ಸಹಕಾರಿ ಬ್ಯಾಂಕ್, ಮೊಗವೀರ ಸಹಕಾರ ಬ್ಯಾಂಕ್ ಮತ್ತು ಇಂದಾಪುರ ನಗರ ಸಹಕಾರಿ ಬ್ಯಾಂಕುಳಿಗೆ ವಿತ್ತೀಯ ದಂಡ ವಿಧಿಸಿದೆ. ಠೇವಣಿ ಖಾತೆಗಳ ನಿರ್ವಹಣೆ ಮತ್ತು ಕೆವೈಸಿ ನಿರ್ದೇಶನಗಳ ಕುರಿತು ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾದ … Continued