ಪ್ರಭಾವಿ ಮತ್ತು ಮಾಜಿ ಬಿಗ್ ಬಾಸ್ ಮಲಯಾಳಂ ಸ್ಪರ್ಧಿ ಜಾಸ್ಮಿನ್ ಜಾಫರ್ ಅವರ ವೈರಲ್ ಇನ್ಸ್ಟಾಗ್ರಾಮ್ ರೀಲ್ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ, ಇದು ದೇವಾಲಯದ ಅಧಿಕಾರಿಗಳು ಆರು ದಿನಗಳ ಶುದ್ಧೀಕರಣ ಕಾರ್ಯ ಮಡಲು ಪ್ರೇರೇಪಿಸಿದೆ.
ಜಾಸ್ಮಿನ್ ಜಾಫರ್ ದೇವಾಲಯದ ಪವಿತ್ರ ಕೊಳದಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅದರಲ್ಲಿ ಅವರು ಪವಿತ್ರ ಕೊಳದ ನೀರಿನಲ್ಲಿ ತಮ್ಮ ಪಾದಗಳನ್ನು ತೊಳೆಯುವುದನ್ನು ತೋರಿಸಿದ್ದಾರೆ. ಈ ಕೃತ್ಯವು ಭಕ್ತರು ಮತ್ತು ಸಾಂಸ್ಕೃತಿಕ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ, ಅವರು ದೇವಸ್ಥಾನದ ಪದ್ಧತಿಗಳ ಉಲ್ಲಂಘನೆ ಮತ್ತು ಧಾರ್ಮಿಕ ಭಾವನೆಗಳ ಘಾಸಿಗೊಳಿಸಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
ಸಾರ್ವಜನಿಕರ ಆಕ್ರೋಶದ ನಂತರ, ಗುರುವಾಯೂರು ದೇವಸ್ವಂ ಮಂಗಳವಾರದಿಂದ 18 ವಿಶೇಷ ಪೂಜೆಗಳು ಮತ್ತು 18 ಶೀವೇಲಿಗಳನ್ನು ಒಳಗೊಂಡ ಆರು ದಿನಗಳ ಶುದ್ಧೀಕರಣ ಕಾರ್ಯಕ್ರಮ ಮಾಡುವುದಾಗಿ ಪ್ರಕಟಿಸಿದೆ. ಈ ಅವಧಿಯಲ್ಲಿ, ದೇವಾಲಯದಲ್ಲಿ ದರ್ಶನ ನಿರ್ಬಂಧಿತವಾಗಿರುತ್ತದೆ.
ಗುರುವಾಯೂರು ದೇವಸ್ವಂ ಆಡಳಿತಾಧಿಕಾರಿಗಳು ದೇವಾಲಯ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದ್ದಾರೆ, ಧಾರ್ಮಿಕ ಶಿಷ್ಟಾಚಾರದ ಉಲ್ಲಂಘನೆ ಮತ್ತು ದೇವಾಲಯದ ಪವಿತ್ರ ಪ್ರದೇಶಗಳಲ್ಲಿ ಛಾಯಾಗ್ರಹಣವನ್ನು ನಿಷೇಧಿಸುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ.
ಟೀಕೆಗಳ ನಡುವೆಯೇ, ಜಾಸ್ಮಿನ್ ಜಾಫರ್ ಈ ಬಗ್ಗೆ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ತಮ್ಮ ಕೃತ್ಯಗಳು ಅಜ್ಞಾನದಿಂದ ಉಂಟಾಗಿವೆ ಮತ್ತು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಗುರುವಾಯೂರು ಶ್ರೀ ಕೃಷ್ಣ ದೇವಾಲಯವು ಕೇರಳದ ಗುರುವಾಯೂರು ಎಂಬ ಪಟ್ಟಣದಲ್ಲಿರುವ ಭಗವಾನ್ ಗುರುವಾಯೂರಪ್ಪನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದ್ದು, ಇದು ಕೇರಳದ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ