
ನಾಂದೇಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಂದೇಡ್ನಲ್ಲಿ ಭೀಕರ ಘಟನೆಯಲ್ಲಿ 20 ವರ್ಷದ ಯುವಕನೊಬ್ಬನನ್ನು ಆಕೆಯ ಪ್ರೇಯಸಿಯ ಸಹೋದರರು ಮತ್ತು ತಂದೆ ಸೇರಿ ಥಳಿಸಿ, ಗುಂಡಿಕ್ಕಿ, ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ಈ ಯುವಕನ ಅಂತ್ಯ ಸಂಸ್ಕಾರದ ವೇಳೆ, ಆತನ ಪ್ರೇಯಸಿ ತನ್ನ ಹಣೆಗೆ ಸಿಂಧೂರ ಇಟ್ಟುಕೊಂಡು, ಆತನ ಮನೆಯಲ್ಲಿಯೇ ಸೊಸೆಯಾಗಿ ಜೀವಿಸುವುದಾಗಿ ಪ್ರತಿಜ್ಞೆ ಮಾಡಿರುವ ಘಟನೆ ನಡೆದಿದೆ.
ಆಂಚಲ್ ಮತ್ತು ಸಕ್ಷಮ್ ಟೇಟ್ ಅವರ ಪರಿಚಯ ಆಂಚಲ್ ಸಹೋದರರ ಮೂಲಕವಾಗಿತ್ತು. ಸಕ್ಷಮ್ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರಿಂದ ಅವರ ಸ್ನೇಹ ಪ್ರೀತಿಗೆ ತಿರುಗಿ ಮೂರು ವರ್ಷಗಳ ಸಂಬಂಧ ಬೆಳೆದಿತ್ತು. ಆದರೆ, ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಆಂಚಲ್ ಕುಟುಂಬದಿಂದ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಒತ್ತಡ ಹೇರಲಾಗಿತ್ತು. ಹಲವು ಬೆದರಿಕೆಗಳ ನಡುವೆಯೂ ಆಂಚಲ್ ಟೇಟ್ನೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದಳು.
ಯುವಕನ ಭೀಕರ ಕೊಲೆ
ಆಂಚಲ್ ತನ್ನ ಪ್ರಿಯಕರ ಟೇಟ್ನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ ಎಂಬ ವಿಷಯ ಆಕೆಯ ಸಹೋದರರು ಮತ್ತು ತಂದೆಗೆ ತಿಳಿದಾಗ, ಗುರುವಾರ ಸಂಜೆ ಹಳೆಯ ಗಂಜ್ ಪ್ರದೇಶದಲ್ಲಿ ಟೇಟ್ನನ್ನು ಥಳಿಸಿ, ತಲೆಗೆ ಗುಂಡು ಹಾರಿಸಿ, ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ.

ಸತ್ತ ಪ್ರಿಯಕರನನ್ನೇ ವರಿಸಿದ ಪ್ರೇಯಸಿ
ಶುಕ್ರವಾರ ಸಂಜೆ ಟೇಟ್ನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಾಗ, ಆಂಚಲ್ ದುಃಖಿತಳಾಗಿ ಟೇಟ್ ಮನೆಗೆ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ನಾಟಕೀಯ ವಿಧಿವಿಧಾನದಲ್ಲಿ ಆಕೆ ಟೇಟ್ ಮೃತದೇಹಕ್ಕೆ ಅರಿಶಿನ ಲೇಪಿಸಿ, ತನ್ನ ಹಣೆಗೆ ಸಿಂಧೂರ ಹಚ್ಚಿಕೊಂಡು, ಸಾರ್ವಜನಿಕವಾಗಿ ತನ್ನ ಮೃತ ಪ್ರಿಯಕರನೊಂದಿಗೆ ‘ವಿವಾಹ’ವಾಗಿದ್ದಾಳೆ.
“ನಾನು ಇವನನ್ನು ಮದುವೆಯಾಗಿದ್ದೇನೆ ಏಕೆಂದರೆ, ಟೇಟ್ ಸತ್ತಿದ್ದರೂ, ನಮ್ಮ ಪ್ರೀತಿ ಇಂದಿಗೂ ಜೀವಂತವಾಗಿದೆ,” ಎಂದು ಆಕೆ ಹೇಳಿದ್ದಾಳೆ. ಅಲ್ಲದೆ, “ಸಕ್ಷಮ್ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿದೆ, ಮತ್ತು ನನ್ನ ತಂದೆ ಹಾಗೂ ಸಹೋದರರು ಸೋತಿದ್ದಾರೆ. ಟೇಟ್ನ ಹಂತಕರಿಗೆ ಮರಣದಂಡನೆ ವಿಧಿಸಬೇಕು,” ಎಂದು ಆಂಚಲ್ ಒತ್ತಾಯಿಸಿದ್ದಾಳೆ. ಆಕೆ ಇನ್ನು ಮುಂದೆ ಜೀವನದುದ್ದಕ್ಕೂ ಆತನ ಮನೆಯಲ್ಲಿಯೇ ಸೊಸೆಯಾಗಿ ಇರಲು ನಿರ್ಧರಿಸಿದ್ದಾಳೆ.
ಕೊಲೆ ಆರೋಪಿಗಳ ಬಂಧನ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆಂಚಲ್ ಟೇಟ್ನನ್ನು ಮದುವೆಯಾಗಲು ಯೋಜಿಸಿದ್ದಾಳೆ ಎಂದು ತಿಳಿದ ನಂತರ, ಆಕೆಯ ಸಹೋದರ ಹೇಮೇಶ್ ಮಮಿಡ್ವಾರ್ ಗುಂಡು ಹಾರಿಸಿದ್ದಾನೆ. ಗುಂಡು ಟೇಟ್ನ ಪಕ್ಕೆಲುಬಿಗೆ ತಗುಲಿತ್ತು ಮತ್ತು ನಂತರ ಇಟ್ಟಿಗೆ ಅಥವಾ ಕಲ್ಲಿನಿಂದ ಆತನ ತಲೆಯನ್ನು ಜಜ್ಜಿದ್ದರಿಂದ ಆತ ತಕ್ಷಣವೇ ಮೃತಪಟ್ಟಿದ್ದಾನೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ