“ಮೂವರು ಪುರುಷರು, ಹಿಂದಿ ಮಾತಾಡ್ತಾರೆ, ಸ್ಥಳೀಯರಲ್ಲ” : ʼಹನಿಮೂನ್ ಕೊಲೆʼ ಪ್ರಕರಣ ಭೇದಿಸಲು ಸಹಾಯ ಮಾಡಿದ ಪ್ರವಾಸಿ ಗೈಡ್‌ ನೀಡಿದ ಸುಳಿವು…

ನವದೆಹಲಿ: ರಾಜಾ ರಘುವಂಶಿಯನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಯಾಗಿದ್ದ ಪ್ರವಾಸಿ ಮಾರ್ಗದರ್ಶಿಯ ಹೇಳಿಕೆಯೊಂದು, ಬಾಲಿವುಡ್ ಸಿನಿಮಾದ ಕಥಾವಸ್ತುವಿನಂತೆ ಅನೇಕ ಟ್ವಿಸ್ಟ್‌ ಗಳಿಂದ ಕೂಡಿರುವ ಭೀಕರ ಕೊಲೆ ಪ್ರಕರಣವನ್ನು ಭೇದಿಸಲು ನೆರವಾಗಿದೆ. ಪ್ರವಾಸಿ ಗೈಡ್‌ ನೀಡಿದ ಹೇಳಿಕೆಯ ಆಧರಿಸಿ ಮೇಲೆ ತನಿಖೆ ನಡೆಸಿದ ಪೊಲೀಸರು ಸುಮಾರು ಹದಿನೈದು ದಿನಗಳಿಂದ ರಹಸ್ಯವಾಗಿಯೇ ಉಳಿದಿದ್ದ ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ.
ಮೇಘಾಲಯಕ್ಕೆ ಹನಿಮೂನ್‌ ಪ್ರವಾಸಕ್ಕೆ ಬಂದಿದ್ದ ಮಧ್ಯಪ್ರದೇಶದ ಇಂದೋರ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಜೊತೆ ಹಿಂದಿ ಮಾತನಾಡುವ ಇತರ ಮೂವರು ಪುರುಷರು ಇದ್ದರು ಎಂದು ಪ್ರವಾಸ ಗೈಡ್‌ ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಇದರಲ್ಲಿ ಸುಪಾರಿ ಕೊಲೆಗಾರರು, ಪ್ರೇಮ  ಕಹಾನಿ ಸೇರಿದೆ.
ಮೇ 23 ರಂದು ಬೆಳಿಗ್ಗೆ 10 ಗಂಟೆಗೆ ಮಧ್ಯಪ್ರದೇಶದ ಇಂದೋರದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್, ತಮ್ಮ ಮಧುಚಂದ್ರದ ಮೂರನೇ ದಿನದಂದು ಮೇಘಾಲಯದ ಮೌಲಾಖಿಯಾತ್‌ನಲ್ಲಿ ಕೊನೆಯದಾಗಿ ಒಟ್ಟಿಗೆ ಕಾಣಿಸಿಕೊಂಡರು. ರಾಜಾ ರಘುವಂಶಿ ಜೀವಂತವಾಗಿ ಕಾಣಿಸಿಕೊಂಡ ಕೊನೆಯ ಸಮಯ ಅದಾಗಿತ್ತು.

‘ಲಿವಿಂಗ್‌ ರೂಟ್ಸ್‌ ( ‘living roots’) ಸೇತುವೆಯನ್ನು ನೋಡಲು ಬಂದಿದ್ದ ಈ ದಂಪತಿಗೆ ಒಂದು ದಿನ ಮೊದಲು ನೊಂಗ್ರಿಯಾಟ್‌ಗೆ ಮೂರು ಗಂಟೆಗಳ ಪಾದಯಾತ್ರೆಯ ಮೂಲಕ ತೆರಳಿದ್ದ ಅವರಿಗೆ ಮಾರ್ಗದರ್ಶನ ನೀಡಿದ ಸ್ಥಳೀಯ ಆಲ್ಬರ್ಟ್ ಪಿಡೆ ಆ ದಿನ ಅವರೊಟ್ಟಿಗೆ ಹೋಗಿರಲಿಲ್ಲ. ಆದರೆ ಈ ದಂಪತಿ ಜೊತೆ ಇತರ ಇತರ ಮೂವರು ಪುರುಷರೊಂದಿಗೆ ನೋಡಿದ್ದೇನೆ ಎಂದು ಅವರು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಹಾಗೂ ಅವರಲ್ಲಿ ಯಾರೂ ಸ್ಥಳೀಯರಲ್ಲ ಎಂದು ತಾನು ಭಾವಿಸಿದ್ದೇನೆ, ಏಕೆಂದರೆ ಮೂವರೂ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೇಘಾಲಯದ ಪ್ರವಾಸ ಮಾರ್ಗದರ್ಶಿ ಆಲ್ಬರ್ಟ್ ಪಿಡೆ ಅವರ ಪ್ರಕಾರ, ಸೋನಮ್ ಮತ್ತು ರಾಜಾ ರಘುವಂಶಿ ದಂಪತಿ ಮೇ 23 ರಂದು ಮೇಘಾಲಯದ ಸೊಹ್ರಾ ಪ್ರದೇಶದಿಂದ ಕಾಣೆಯಾದ ದಿನದಂದು ಮೂವರು ಪುರುಷ ಪ್ರವಾಸಿಗರೊಂದಿಗೆ ಇದ್ದರು. ಅವರು ಜೂನ್ 7 ರ ಶನಿವಾರ ಈ ವಿಷಯವನ್ನು ಬಹಿರಂಗಪಡಿಸಿದರು.

ಮಾವ್ಲಾಖಿಯಾತ್‌ನಲ್ಲಿ ಮಾರ್ಗದರ್ಶಿಯಾಗಿರುವ ಪಿಡೆ, ಮೇ 23 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮೌವ್ಲಾಖಿಯಾತ್‌ಗೆ 3,000 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷರು ದಂಪತಿ ಜೊತೆ ಹೋಗಿದ್ದರು ಎಂದು ಹೇಳಿದರು. ನಾಲ್ವರು ಪುರುಷರು ಹಿಂದಿಯಲ್ಲಿ ಪರಸ್ಪರ ಮಾತನಾಡುತ್ತಿದ್ದರು ಎಂದು ಅವರು ಹೇಳಿದರು.”ಮಹಿಳೆ ಹಿಂದೆ ಇದ್ದಾಗ ನಾಲ್ವರು ಪುರುಷರು ಮುಂದೆ ನಡೆಯುತ್ತಿದ್ದರು. ನಾಲ್ವರು ಪುರುಷರು ಹಿಂದಿಯಲ್ಲಿ ಮಾತನಾಡುತ್ತಿದ್ದರು, ಆದರೆ ನನಗೆ ಖಾಸಿ ಮತ್ತು ಇಂಗ್ಲಿಷ್ ಮಾತ್ರ ತಿಳಿದಿರುವ ಕಾರಣ ಅವರು ಏನು ಮಾತನಾಡುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ” ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯ ವ್ಯಕ್ತಿಯ ಕೈಗೆ ಕೋಳ ಹಾಕಿ ನೆಲಕ್ಕೆ ಕೆಡವಿ ಒತ್ತಿ ಹಿಡಿದ ವೀಡಿಯೊ ವೈರಲ್‌

ಇದಲ್ಲದೆ, ದಂಪತಿಗಳು ಕಾಣೆಯಾಗುವ ಒಂದು ದಿನ ಮೊದಲು ಮೇ 22 ರಂದು ನೊಂಗ್ರಿಯಾಟ್‌ಗೆ ಮಾರ್ಗದರ್ಶನ ನೀಡಲು ತಾನು ಮುಂದಾಗಿದ್ದೆ, ಪಿಡೆ ಹೇಳಿದರು. ಆದಾಗ್ಯೂ, ದಂಪತಿ ತಮ್ಮ ಸೇವೆ ನಿರಾಕರಿಸಿದರು ಮತ್ತು ಭಾ ವನ್ಸೈ ಎಂಬ ಇನ್ನೊಬ್ಬ ಮಾರ್ಗದರ್ಶಿಯೊಂದಿಗೆ ಹೋದರು. ಅವರು ಶಿಪಾರ ಹೋಂಸ್ಟೇಯಲ್ಲಿ ರಾತ್ರಿ ಕಳೆದರು ಮತ್ತು ಮರುದಿನ ಮಾರ್ಗದರ್ಶಿ ಇಲ್ಲದೆ ಹಿಂತಿರುಗಿದರು ಎಂದು ಪಿಡೆ ಹೇಳಿದರು. “ನಾನು ಮೌಲಖಿಯಾತ್ ತಲುಪುವ ಹೊತ್ತಿಗೆ, ಅವರ ಸ್ಕೂಟರ್ ಅಲ್ಲಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ದಂಪತಿ ಬಾಡಿಗೆಗೆ ಪಡೆದ ಸ್ಕೂಟರ್ ನಂತರ ಸೊಹ್ರಾರಿಮ್‌ನಲ್ಲಿ ಮೌಲಖಿಯಾತ್‌ನಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಕಂಡುಬಂದಿತ್ತು. ನಂತರ 24 ಗಂಟೆಗಳ ನಂತರ ರಕ್ತಸಿಕ್ತ ಆಯುಧ, ನಂತರ ಅವರ ರಕ್ತಸಿಕ್ತ ರೇನ್‌ಕೋಟ್ ಕೂಡ ಪತ್ತೆಯಾಗಿದೆ.

ಪತ್ನಿ ಗಂಡನನ್ನು ಕೊಲ್ಲಲು ಜನರನ್ನು ನೇಮಿಸಿಕೊಂಡಿದ್ದಳೇ..?
ಮೇಘಾಲಯ ಪೊಲೀಸರ ಪ್ರಕಾರ, ಬಂಧಿತ ಮೂವರು ಪುರುಷರನ್ನು ರಾಜಾ ರಘುವಂಶಿಯನ್ನು ಕೊಲ್ಲಲು ನೇಮಿಸಲಾಗಿದೆ ಎಂದು ನಂಬಲಾಗಿದೆ, ಅವರ ಪತ್ನಿ ಸೋನಮ್ ಅವರು ಉತ್ತರ ಪ್ರದೇಶದ ಘಾಜಿಪುರದ ನಂದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. “ಉತ್ತರ ಪ್ರದೇಶದ ಒಬ್ಬ ಆರೋಪಿ ಮತ್ತು ಇನ್ನೂ ಇಬ್ಬರು ವ್ಯಕ್ತಿಗಳನ್ನು ಮೇಘಾಲಯ ಪೊಲೀಸ್ ಎಸ್‌ಐಟಿ ಇಂದೋರ್‌ನಿಂದ ಬಂಧಿಸಿದೆ. ಬಂಧಿತ ಆರೋಪಿಗಳು ಇನ್ನೂ ಕೆಲವು ವ್ಯಕ್ತಿಗಳ ಹೆಸರನ್ನು ಹೇಳಿದ್ದಾರೆ. ಮೃತನ ಪತ್ನಿ ಅವರನ್ನು ನೇಮಿಸಿಕೊಂಡಿದ್ದಾಳೆ ಎಂದು ಅವರು ಬಹಿರಂಗಪಡಿಸಿದ್ದಾರೆ” ಎಂದು ಮೇಘಾಲಯ ಪೊಲೀಸ್ ಮಹಾನಿರ್ದೇಶಕ ಐ ನೊಂಗ್ರಾಂಗ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನವೀಕರಣವನ್ನು ಹಂಚಿಕೊಂಡ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು, “ರಾಜಾ ಕೊಲೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು 7 ದಿನಗಳಲ್ಲಿ ಪ್ರಗತಿ ಸಾಧಿಸಿದ್ದಾರೆ … ಮಧ್ಯಪ್ರದೇಶದ 3 ಹಲ್ಲೆಕೋರರನ್ನು ಬಂಧಿಸಲಾಗಿದೆ, ಒಬ್ಬ ಮಹಿಳೆ ಶರಣಾಗಿದ್ದಾಳೆ ಮತ್ತು ಇನ್ನೂ ಒಬ್ಬರನ್ನು ಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ದಂಪತಿ ಕಳೆದ ತಿಂಗಳು ಮೇ 23 ರಂದು ತಮ್ಮ ಹನಿಮೂನ್‌ಗೆ ಹೋಗಿದ್ದಾಗ ನಾಪತ್ತೆಯಾಗಿದ್ದರು. ಆದಾಗ್ಯೂ, ಜೂನ್ 2 ರಂದು ಮೇಘಾಲಯದ ಕಮರಿಯಲ್ಲಿ ಪತಿಯ ಶವ ಪತ್ತೆಯಾಗಿತ್ತು.
ಸ್ಥಳೀಯ ಪ್ರವಾಸಿ ಗೈಡ್‌ ನೀಡಿದ ಮಾಹಿತಿಯು ಪೊಲೀಸರು ಹುಡುಕಾಟದ ವಿಧಾನ ಹಾಗೂ ಕೋನವನ್ನು ಬದಲಾಯಿಸಲು ಇದು ಸಹಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಪುರುಷರು ಯಾರು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲವಾದರೂ ರಾಜಾ ಹತ್ಯೆಗೆ ಸಂಬಂಧಿಸಿದಂತೆ ಮೂವರು ಶಂಕಿತರಾದ ವಿಕ್ಕಿ, ಆಕಾಶ ಮತ್ತು ಆನಂದ ಎಂಬವರನ್ನು ಬಂಧಿಸಲಾಗಿದೆ. ಇವರೇ ಕೊಲೆ ಮಾಡಿದವರು ಎಂದು ಪೊಲೀಸರು ನಂಬಿದ್ದಾರೆ. ರಾಜಾ ರಘುವಂಶಿಯನ್ನು ಕೊಲೆ ಮಾಡಲು ಸೋನಮ್ ಈ ಮೂವರನ್ನು ನೇಮಿಸಿಕೊಂಡಿದ್ದಳು ಎಂದು ಪೊಲೀಸರು ನಂಬಿದ್ದಾರೆ. ಸೋನಮ್ ತನ್ನ ಸಂಗಾತಿ ರಾಜ ಕುಶ್ವಾಹ ಜೊತೆ ಮೊದಲೇ ಇದ್ದ ಸಂಬಂಧವನ್ನು ಮುಂದುವರಿಸಲು (ಒಂದು ವಾರಕ್ಕಿಂತ ಕಡಿಮೆ ವಯಸ್ಸಿನ) ತನ್ನ ಗಂಡನನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಆತನನ್ನು ಸಹ ಬಂಧಿಸಲಾಗಿದೆ. ರಾಜಾ ಸಾವಿನ ಹಿಂದಿನ ‘ಮಾಸ್ಟರ್‌ಮೈಂಡ್’ ಕುಶ್ವಾಹ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಮುಂಬೈ ಲೋಕಲ್ ರೈಲಿನಿಂದ ಬಿದ್ದು 5 ಮಂದಿಯ ಸಾವಿನ ಶಂಕೆ ; ಹಲವರಿಗೆ ಗಾಯ

ರಾಜಾ ರಘುವಂಶಿ ಮೇಘಾಲಯ ಪ್ರವಾಸದಲ್ಲಿ ಕೊಲೆಯಾಗಿದ್ದು ಹೇಗೆ..?
ಮೇ 21 ರಂದು ರಾಜಾ ರಘುವಂಶಿ ಮತ್ತು ಸೋನಮ್ ದಂಪತಿ ತಮ್ಮ ಪ್ರವಾಸದಲ್ಲಿ ಶಿಲ್ಲಾಂಗ್‌ನಲ್ಲಿರುವ ಹೋಂಸ್ಟೇಗೆ ಭೇಟಿ ನೀಡಿದರು. ಮೇ 22 ರಂದು ಅವರು ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದು ಸೊಹ್ರಾರಿಮ್‌ಗೆ ಹೊರಟರು. ಅವರು ಆ ಸಂಜೆ ಮಾವ್ಲಾಖಿಯಾತ್ ತಲುಪಿದರು ಮತ್ತು ಅವರ ರಾತ್ರಿ ತಂಗುದಾಣವಾದ ನೊಂಗ್ರಿಯಾಟ್‌ನಲ್ಲಿರುವ ಶಿಪಾರಾ ಹೋಂಸ್ಟೇಗೆ ಮಾರ್ಗದರ್ಶನ ನೀಡಿದ ಮಾರ್ಗದರ್ಶಿಯನ್ನು ನೇಮಿಸಿಕೊಂಡರು.
ಮೇ 23 ರಂದು, ಸ್ಥಳೀಯ ಗೈಡ್‌ ಆಲ್ಬರ್ಟ್ ಪಿಡೆ ಅವರ ಜೊತೆ ಹೋಗಿಲ್ಲ. ಈ ವೇಳೆ ಹಿಂದಿ ಮಾತನಾಡುವ ಮೂವರು ಪುರುಷರು ಈ ದಂಪತಿ ಜೊತೆಗೆ ಇದ್ದರು ಎಂದು ಮಾಹಿತಿ ನೀಡಿದ್ದರು. ಇಪ್ಪತ್ತನಾಲ್ಕು ಗಂಟೆಗಳ ನಂತರ ರಾಜಾ ರಘುವಂಶಿ ಮತ್ತು ಸೋನಮ್ ‘ಕಾಣೆಯಾಗಿದ್ದಾರೆ’ ಎಂದು ವರದಿಯಾಯಿತು. ಅವರು ಬಾಡಿಗೆಗೆ ಪಡೆದ ನೀಲಿ ದ್ವಿಚಕ್ರ ವಾಹನವನ್ನು ಮೌಲಾಖಿಯಾತ್ ಪಾರ್ಕಿಂಗ್ ಸ್ಥಳದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಸೊಹ್ರಾರಿಮ್ ಪ್ರದೇಶದಲ್ಲಿ ಕಂಡುಬಂದಿತ್ತು. ಒಂದು ವಾರದ ನಂತರ ರಾಜಾ ಅವರ ಶವ ಪತ್ತೆಯಾಗಿದ್ದು, ಅವರನ್ನು ಕಡಿದು ಕೊಂದಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕವು.
ಅವರನ್ನು ವಶಕ್ಕೆ ಪಡೆದ 24 ಗಂಟೆಗಳ ನಂತರ, ಸೋನಮ್ ಅವರನ್ನು ಅವರ ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಪ್ರಮುಖ ಶಂಕಿತ ಎಂದು ಘೋಷಿಸಲಾಯಿತು.
ರಾಜಾ ರಘುವಂಶಿ ಅವರ ತಾಯಿ ಹೇಳಿದ್ದು ಏನು..?
ಸೋನಮ್ ಮೇಘಾಲಯದ ಹನಿಮೂನ್‌ಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು ಆದರೆ ರಿಟರ್ನ್ ಟಿಕೆಟ್ ಬುಕ್ ಮಾಡಲಿಲ್ಲ ಎಂದು ರಾಜಾ ಅವರ ತಾಯಿ ಸೋಮವಾರ ಎನ್‌ಡಿಟಿವಿಗೆ ತಿಳಿಸಿದರು, ಅವರು ತಮ್ಮ ಮಗನಿಗೆ 10 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಧರಿಸುವಂತೆ ‘ಬಲವಂತಪಡಿಸಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement