ಹುಲಿ ದಾಳಿಗೆ ಬಾಲಕ ಸಾವು, ಅಜ್ಜನಿಗೆ ಗಂಭೀರ ಗಾಯ

ಮಡಿಕೇರಿ: ಕಾಡುಗಳು ನಶವಾಗುತ್ತಿರುವಂತೆಯೇ ಕಾಡುಪ್ರಾಣಿಗಳಿಗೂ ಮಾನವರಿಗೂ ಸಂಘರ್ಷ ಮುಂದುವರಿದೆ. ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕನೊಬ್ಬ ಸಾವಿಗೀಡಾಗಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಕಾಏಕೀ ದಾಳಿ ನಡಸಿದ ಹುಲಿಯು ಎಂಟು ವರ್ಷದ ಬಾಲಕ ರಂಗಸ್ವಾಮಿ ಕೊಂದು ಹಾಕಿದೆ ಮತ್ತು ಜೊತೆಯಲ್ಲಿದ್ದ ಆತನ ಅಜ್ಜ ಕೆಂಚ‌ (52) … Continued

ಕಾಣೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

ರಾಯಚೂರು : ಭಾನುವಾರ ಆಟವಾಡುತ್ತಿದ್ದಂತ ಸಂದರ್ಭದಲ್ಲಿ ನಾಪತ್ತೆಯಾಗಿದ್ದಂತ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು, ಸೋಮವಾರ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಮೊಮ್ಮಕ್ಕಳ್ಳಾದ ವರುಣ್(9) ಹಾಗೂ ಸಣ್ಣಯ್ಯ(5) ಭಾನುವಾರ ಮಧ್ಯಾಹ್ನ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಸಿರವಾರ ಪೊಲೀಸ್ ಠಾಣೆಯಲ್ಲಿ … Continued

ಲಾಕ್‌ಡೌನ್‌ ಹೊರತಾಗಿಯೂ ಕಲ್ಮಷ ಗಾಳಿಯಿಂದ ೨೦೨೦ರಲ್ಲಿ ೫೪,೦೦೦ ಜನರ ಸಾವು

ನವದೆಹಲಿ: ಕೋವಿಡ್‌-೧೯ ಲಾಕ್‌ಡೌನ್‌ಗಳ ಹೊರತಾಗಿಯೂ ದೆಹಲಿಯಲ್ಲಿ ೨೦೨೦ರಲ್ಲಿ ದೆಹಲಿಯಲ್ಲಿ ೫೪,೦೦೦ ಜನರು ಕಳಪೆ ಗುಣಮಟ್ಟದ ವಾಯುವಿನ ಕಾರಣದಿಂದ ಮೃತಪಟ್ಟಿದ್ದಾರೆಂದು ಅಧ್ಯಯನವೊಂದು ತಿಳಿಸಿದೆ. ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಕೆಲವು ನಗರಗಳು ಗಾಳಿಯ ಗುಣಮಟ್ಟದಲ್ಲಿ ಅಲ್ಪ ಸುಧಾರಣೆಗಳನ್ನು ಕಂಡರೆ, ದೆಹಲಿಯಲ್ಲಿನ ವಾಯುಮಾಲಿನ್ಯದ ವಿನಾಶಕಾರಿ ಪರಿಣಾಮ ಸ್ಪಷ್ಟವಾಗಿ ಗೋಚರವಗುತ್ತದೆ ಎಂದು ಗ್ರೀನ್‌ಪೀಸ್‌ ಆಗ್ನೇಯ ಏಷ್ಯಾ ಜರ್ನಲ್‌ ಪ್ರಕಟಿಸಿದೆ. ಲೈವ್ ಕಾಸ್ಟ್ … Continued

ಕೊರೋನಾ: ೪೩೦ ಜನರಿಗೆ ಸೋಂಕು, ೭ ಸಾವು

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ 430 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,251ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 340 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,01,323ಕ್ಕೆ … Continued